ಕರ್ನಾಟಕ

karnataka

ETV Bharat / bharat

'ಫಾರೂಕ್ ಅಬ್ದುಲ್ಲಾ ಪ್ರಾರ್ಥನೆ ಸಲ್ಲಿಸೋಕೆ ಸರ್ಕಾರ ಅಡ್ಡಿ': ಜೆಕೆಎನ್​ಸಿ ಆರೋಪವೇನು? - ಫಾರೂಕ್ ಅಬ್ದುಲ್ಲಾಗೆ ನಿರ್ಬಂಧ

ಜಮ್ಮು ಕಾಶ್ಮೀರ ಸರ್ಕಾರ ಫಾರೂಕ್ ಅಬ್ದುಲ್ಲಾ ಅವರನ್ನು ಮನೆಯಲ್ಲಿಯೇ ನಿರ್ಬಂಧಿಸಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಟ್ವಿಟರ್​​ನಲ್ಲಿ ಆರೋಪಿಸಿದೆ.

Farooq Abdullah
ಫಾರೂಕ್ ಅಬ್ದುಲ್ಲಾ

By

Published : Oct 30, 2020, 1:10 PM IST

ಶ್ರೀನಗರ (ಜಮ್ಮು ಕಾಶ್ಮೀರ): ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರನ್ನು ತಮ್ಮ ಮನೆಯಿಂದ ಹೊರಗೆ ಬರದಂತೆ ಸರ್ಕಾರ ತಡೆದಿದ್ದು, ಇದರಿಂದಾಗಿ ಅವರು ಈದ್ ಮಿಲಾದ್​ ವೇಳೆ ಹಜ್ರತ್​ಬಲ್ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಲು ಅಡ್ಡಿಯಾಗಿದೆ ಎಂದು ಪಕ್ಷ ಆರೋಪಿಸಿದೆ.

ಜಮ್ಮು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಈ ಕುರಿತು ಟ್ವಿಟರ್​ನಲ್ಲಿ ಬರೆದುಕೊಂಡಿದ್ದು, ''ಜಮ್ಮು ಕಾಶ್ಮೀರ ಪ್ರಾಧಿಕಾರಗಳು ಪಕ್ಷದ ನಾಯಕ ಫಾರೂಕ್ ಅಬ್ದುಲ್ಲಾ ಅವರನ್ನು ಮನೆಯಲ್ಲಿರುವಂತೆ ನಿರ್ಬಂಧಿಸಿದ್ದು, ಅವರು ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ'' ಎಂದು ಆರೋಪಿಸಿದೆ.

ಇದರ ಜೊತೆಗೆ ಇದು ಮೂಲಭೂತ ಹಕ್ಕುಗಳ ದಮನವಾಗಿದ್ದು, ಈದ್ ಮಿಲಾದ್​​ನಂತಹ ಪವಿತ್ರ ದಿನದಲ್ಲಿ ಈ ರೀತಿಯಾಗಿ ನಡೆದಿರುವುದು ಆಕ್ಷೇಪಾರ್ಹ ಎಂದು ಟ್ವೀಟ್​ನಲ್ಲಿ ಜಮ್ಮು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಅಸಮಾಧಾನ ವ್ಯಕ್ತಪಡಿಸಿದೆ.

ಜಮ್ಮು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್​ ಟ್ವಿಟರ್​ನಲ್ಲಿ ಮಾಡಿದ ಆರೋಪಕ್ಕೆ ಅಥವಾ ಫಾರೂಕ್ ಅಬ್ದುಲ್ಲಾ ಅವರನ್ನು ಮನೆಯಲ್ಲಿಯೇ ನಿರ್ಬಂಧಿಸಿರುವುದರ ಬಗ್ಗೆ ಜಮ್ಮು ಕಾಶ್ಮೀರ ಸರ್ಕಾರದಿಂದ ಯಾವುದೇ ಮಾಹಿತಿ ಸಿಕ್ಕಿಲ್ಲ.

ABOUT THE AUTHOR

...view details