ಕರ್ನಾಟಕ

karnataka

By

Published : Jan 2, 2021, 2:42 PM IST

ETV Bharat / bharat

ಜನವರಿ 26 ರಂದು ‘ಟ್ರ್ಯಾಕ್ಟರ್​ ಪರೇಡ್’ಗೆ ಕರೆ ನೀಡಿದ ಪ್ರತಿಭಟನಾನಿರತ ರೈತ ಸಂಘಟನೆಗಳು

ದೇಶದ ಪ್ರತಿಯೊಂದು ರೈತ ಕುಟುಂಬವು ಸಾಧ್ಯವಾದ್ರೆ ತಮ್ಮ ಸದಸ್ಯರನ್ನು ದೆಹಲಿಗೆ ಕಳುಹಿಸುವಂತೆ ವಿನಂತಿಸುತ್ತೇವೆ ಎಂದು ಸ್ವರಾಜ್ ಇಂಡಿಯಾದ ಯೋಗೇಂದ್ರ ಯಾದವ್ ತಿಳಿಸಿದ್ದಾರೆ..

ಜನವರಿ 26 ರಂದು ‘ಟ್ರ್ಯಾಕ್ಟರ್​ ಪರೇಡ್’ಗೆ ಕರೆ
ಜನವರಿ 26 ರಂದು ‘ಟ್ರ್ಯಾಕ್ಟರ್​ ಪರೇಡ್’ಗೆ ಕರೆ

ನವದೆಹಲಿ :ದೆಹಲಿ ಗಡಿಗಳಲ್ಲಿ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು, ಗಣರಾಜ್ಯೋತ್ಸವದಂದು ದೆಹಲಿಗೆ ಟ್ರ್ಯಾಕ್ಟರ್​ ಪರೇಡ್​ ಮಾಡುವುದಾಗಿ ಗುಡುಗಿದ್ದಾರೆ.

ಜನವರಿ 26ರವರೆಗೆ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ, ದೆಹಲಿಯಲ್ಲಿ ‘ಕಿಸಾನ್ ಗಣತಂತ್ರ ಮೆರವಣಿಗೆ’ ನಡೆಸಲಾಗುವುದು. ಇದಕ್ಕೆ ಸಿದ್ಧರಿರಲು ರಾಷ್ಟ್ರ ರಾಜಧಾನಿಯ ಪಕ್ಕದ ಪ್ರದೇಶಗಳ ರೈತರಿಗೆ ತಿಳಿಸಿದ್ದೇವೆ.

ದೇಶದ ಪ್ರತಿಯೊಂದು ರೈತ ಕುಟುಂಬವು ಸಾಧ್ಯವಾದ್ರೆ ತಮ್ಮ ಸದಸ್ಯರನ್ನು ದೆಹಲಿಗೆ ಕಳುಹಿಸುವಂತೆ ವಿನಂತಿಸುತ್ತೇವೆ ಎಂದು ಸ್ವರಾಜ್ ಇಂಡಿಯಾದ ಯೋಗೇಂದ್ರ ಯಾದವ್ ತಿಳಿಸಿದ್ದಾರೆ.

ಇದನ್ನೂ ಓದಿ:ಯಾವುದೇ ಹಿಂದೂ, ಭಾರತ ವಿರೋಧಿ ಆಗಲು ಸಾಧ್ಯವಿಲ್ಲ : ಮೋಹನ್​ ಭಾಗವತ್

ಜನವರಿ 26 ರಂದು ಟ್ರ್ಯಾಕ್ಟರ್​ ಪರೇಡ್​ಗೆ ಕರೆ ನೀಡಲಾಗಿದೆ ಎಂದು ರೈತ ಸಂಘಟನೆಗಳು ತಿಳಿಸಿವೆ.

ABOUT THE AUTHOR

...view details