ಕರ್ನಾಟಕ

karnataka

ETV Bharat / bharat

ಎಐಎಡಿಎಮ್​ಕೆ ಪಕ್ಷದ 49ನೇ ವರ್ಷಾಚರಣೆ: ಪಕ್ಷದ ಮುಂದಿದೆ ಬಹು ದೊಡ್ಡ ಸವಾಲು!

ಆಡಳಿತಾರೂಢ ಎಐಎಡಿಎಮ್​ಕೆ, ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಿಂದಾಗಿ ಮತ್ತೊಂದು ಅಗ್ನಿ ಪರೀಕ್ಷೆಯನ್ನು ಎದುರಿಸಲಿದೆ. ಪ್ರಧಾನ ವಿರೋಧ ಪಕ್ಷವಾದ ಡಿಎಂಕೆ ತನ್ನ ಚುನಾವಣಾ ಯಂತ್ರವನ್ನು ಸಕ್ರಿಯಗೊಳಿಸಿದೆ.

By

Published : Oct 17, 2020, 10:37 PM IST

dmk
dmk

ಚೆನ್ನೈ (ತಮಿಳುನಾಡು):ತನ್ನ 49ನೇ ವರ್ಷಾಚರಣೆಯನ್ನು ಆಚರಿಸುತ್ತಿರುವ ಆಡಳಿತಾರೂಢ ಎಐಎಡಿಎಮ್​ಕೆ, ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಿಂದಾಗಿ ಮತ್ತೊಂದು ಅಗ್ನಿ ಪರೀಕ್ಷೆಯನ್ನು ಎದುರಿಸಲಿದೆ. ವಾರ್ಷಿಕೋತ್ಸವವನ್ನು ಕೂಡಾ ಪಕ್ಷವು ಹೆಚ್ಚು ಅಭಿಮಾನಿಗಳಿಲ್ಲದೆ ಸರಳವಾಗಿ ಆಚರಿಸಿಕೊಂಡಿದೆ.

ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಕುರಿತು ನಡೆದ ಒಳಜಗಳದಿಂದ ಪಕ್ಷವು ಇದೀಗ ಚೇತರಿಸಿಕೊಂಡಿದೆ. ಆದರೆ ಅಧಿಕಾರವನ್ನು ಉಳಿಸಿಕೊಳ್ಳುವಲ್ಲಿ ಜಯಲಲಿತಾ ವರ್ಚಸ್ಸು ಆಧಾರವಾಗಬಹುದೇ ಎಂದು ಕಾದುನೋಡಬೇಕಾಗಿದೆ. ಏಕೆಂದರೆ ಡಿಎಂಕೆ ಪಕ್ಷವೂ ಕೂಡಾ ಚುನಾವಣಾ ಯುದ್ಧ ಯಂತ್ರದಲ್ಲಿ ಸಕ್ರಿಯವಾಗಿದೆ.

ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ (ಇಪಿಎಸ್) ಮತ್ತು ಉಪ ಮುಖ್ಯಮಂತ್ರಿ ಒ ಪನ್ನೀರ್​ ಸೆಲ್ವಂ (ಒಪಿಎಸ್) ಅವರ ಆಡಳಿತದಲ್ಲಿ ಪಕ್ಷವು ಕಠಿಣ ಸವಾಲುಗಳನ್ನು ಎದುರಿಸುತ್ತಿದೆ.

ಚುನಾವಣೆಗೆ ಪಕ್ಷದ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರನ್ನು ಘೋಷಣೆ ಮಾಡುತ್ತಲೇ, ಪಕ್ಷವನ್ನು ಕಾಡುತ್ತಿರುವ ಬಿಕ್ಕಟ್ಟನ್ನು ಬಗೆಹರಿಸಲಾಯಿತು. ಇದೀಗ ಚುನಾವಣೆಯಲ್ಲಿ ಎಐಎಡಿಎಂಕೆ ಚುಕ್ಕಾಣಿ ಹಿಡಿಯಲು ಕಠಿಣ ಶ್ರಮ ವಹಿಸುತ್ತಿದ್ದು, ಇದು ಪಕ್ಷ ಮತ್ತು ನಾಯಕತ್ವಕ್ಕೆ ನಿಜವಾದ ಅಗ್ನಿ ಪರೀಕ್ಷೆಯಾಗಿದೆ.

ಪ್ರಧಾನ ವಿರೋಧ ಪಕ್ಷವಾದ ಡಿಎಂಕೆ ತನ್ನ ಚುನಾವಣಾ ಯಂತ್ರವನ್ನು ಸಕ್ರಿಯಗೊಳಿಸುವ ಮೂಲಕ ತನ್ನ ಸಾಂಪ್ರದಾಯಿಕ ಪ್ರತಿಸ್ಪರ್ಧಿಯಾದ ಎಐಎಡಿಎಂಕೆಯಿಂದ ಮುಂದಿದೆ.

ಈ ನಡುವೆ, "ಎಲ್ಲಾ 234 ಕ್ಷೇತ್ರಗಳಲ್ಲಿ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಇತಿಹಾಸವನ್ನು ರಚಿಸೋಣ" ಎಂದು ಉಪ ಮುಖ್ಯಮಂತ್ರಿ ಒ ಪನ್ನೀರ್​ ಸೆಲ್ವಂ ಟ್ವೀಟ್ ಮಾಡಿದ್ದಾರೆ.

ABOUT THE AUTHOR

...view details