ಕರ್ನಾಟಕ

karnataka

ETV Bharat / bharat

ಭಾರತದ ಸುರಕ್ಷತೆ, ಕಾಳಜಿ ಬಗ್ಗೆ ಅರ್ಥವಾಗಿದೆ.. ಯುರೋಪಿಯನ್​ ಯೂನಿಯನ್​ ರಾಯಭಾರಿ.. - European Union Ambassador

ಪೌರತ್ವ ತಿದ್ದುಪಡಿ ಮಸೂದೆಯನ್ನು ತಡರಾತ್ರಿಯವರೆಗೆ ಚರ್ಚಿಸಿ ಲೋಕಸಭೆಯಲ್ಲಿ ಅಂಗೀಕರಿಸಿದ ಕೆಲವೇ ಗಂಟೆಗಳ ನಂತರ ಇಯು ರಾಯಭಾರಿ, ‘ಭಾರತೀಯ ಸಂವಿಧಾನವು ಕಾನೂನಿನ ಮುಂದೆ ಎಲ್ಲರಿಗೂ ಸಮಾನತೆ ಖಾತರಿಪಡಿಸುತ್ತದೆ’ಎಂದು ನೆನಪಿಸಿದರು.

European Union Ambassador
ಇಯು ರಾಯಭಾರಿ ಕಚೇರಿ

By

Published : Dec 10, 2019, 8:53 PM IST

ನವದೆಹಲಿ:ಯುರೋಪಿಯನ್ ಯೂನಿಯನ್‌ನ ಭಾರತದ ಹೊಸ ರಾಯಭಾರಿ ಕಾಶ್ಮೀರದಲ್ಲಿ ಸಂವಹನ ಸಂಪರ್ಕ ಮತ್ತು ಹಕ್ಕುಗಳ ಪುನರ್‌ ಸ್ಥಾಪನೆ ಪ್ರತಿಪಾದಿಸಿದರು. ನವದೆಹಲಿಯಲ್ಲಿ ಉಗೊ ಅಸ್ತೂಟೊ ರಾಯಭಾರಿಯಾಗಿ ಇಂದು ಅಧಿಕಾರ ವಹಿಸಿಕೊಂಡ ನಂತರ ಅವರ ಮೊದಲ ಮಾಧ್ಯಮ ಸಂವಾದದಲ್ಲಿ, 370ನೇ ವಿಧಿಯನ್ನು ರದ್ದುಪಡಿಸಿದ ನಂತರ ಮತ್ತು ಈ ವರ್ಷದ ಅಗಸ್ಟ್‌ನಲ್ಲಿ ಜಮ್ಮು-ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವಾಗಿ ಮರುಸಂಘಟಿಸಿದ ನಂತರ ಯುರೋಪಿಯನ್ ಒಕ್ಕೂಟದ ಸ್ಥಾನದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಒತ್ತಿ ಹೇಳಿದ್ದಾರೆ.

“ನಾವು ಕಾಶ್ಮೀರದ ಪರಿಸ್ಥಿತಿಯ ಬಗ್ಗೆ ಕಾಳಜಿ ವಹಿಸುತ್ತೇವೆ. ಕಾಶ್ಮೀರದಲ್ಲಿ ಮುಕ್ತವಾಗಿ ಓಡಾಡುವ ಸ್ವಾತಂತ್ರ್ಯ ಮತ್ತು ಸಹಜ ಸ್ಥಿತಿಯನ್ನು ಪುನಃ ಸ್ಥಾಪಿಸುವುದು ಬಹಳ ಮುಖ್ಯ, ”ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು,“ಭಾರತದ ಸುರಕ್ಷತೆಯ ಕಾಳಜಿ ಬಗ್ಗೆ ಇಯು ಅರ್ಥಮಾಡಿಕೊಂಡಿದೆ" ಎಂದು ಹೇಳಿದರು.

ಅಕ್ಟೋಬರ್ ಅಂತ್ಯದಲ್ಲಿ ಕೆಲವು ಯುರೋಪಿಯನ್ ಪಾರ್ಲಿಮೆಂಟ್ ಸದಸ್ಯರ(ಎಂಇಪಿ) ವಿವಾದಾತ್ಮಕ ಕಾಶ್ಮೀರ ಭೇಟಿ ಅಧಿಕೃತವಲ್ಲ ಎಂದು ರಾಯಭಾರಿ ಸ್ಪಷ್ಟಪಡಿಸಿದರು. ಆದರೂ ಅವರ ವೈಯಕ್ತಿಕ ಸಾಮರ್ಥ್ಯದಿಂದ ಕೈಗೊಳ್ಳಲಾಗಿದ್ದ ಈ ಭೇಟಿಯು ‘ನ್ಯಾಯಸಮ್ಮತವಾಗಿದೆ’ ಹಾಗೂ "ಈ ಭೇಟಿಯು ಅದರ ಸಂಸತ್ತಿನ ನೀತಿ ನಿರ್ಧಾರಗಳ ಅಭಿವ್ಯಕ್ತಿಯಾಗಿರಲಿಲ್ಲ" ಎಂದು ಅಸ್ತೂಟೊ ಸ್ಪಷ್ಟಪಡಿಸಿದರು.

ಕಾಶ್ಮೀರದಲ್ಲಿನ ಸಾಂವಿಧಾನಿಕ ಬದಲಾವಣೆಗಳ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವುದರ ನಡುವೆ ರಾಯಭಾರಿ ನವದೆಹಲಿ ಮತ್ತು ಇಸ್ಲಾಮಾಬಾದ್ ನಡುವಿನ ದ್ವಿಪಕ್ಷೀಯ ಮಾತುಕತೆ ಪರ ಬ್ಯಾಟಿಂಗ್ ಮಾಡಿದರು. ಯಾವಾಗಲೂ 'ಮಾತುಕತೆ‘ 'ಪ್ರಾದೇಶಿಕ ಹಿತಾಸಕ್ತಿಗೆ ಮುಂದಿನ ದಾರಿ’ ಎಂದು ಅವರು ಅಭಿಪ್ರಾಯಪಟ್ಟರು. “ನಾವು (ಇಯು) ರಾಜತಾಂತ್ರಿಕ ಮಾರ್ಗಗಳ ಮೂಲಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಮಾತುಕತೆಗೆ ಒತ್ತು ನೀಡಿದ್ದೇವೆ.

ಸಂವಹನ ಸಾಧನಗಳನ್ನು ಕಾಶ್ಮೀರದಲ್ಲಿ ಪುನಃ ಸ್ಥಾಪಿಸಬೇಕು. ನಮ್ಮ ನಿಲುವು ಸ್ಥಿರವಾಗಿದೆ ”ಎಂದು ಅಸ್ತೂಟೊ ಹೇಳಿದರು. ಆದಾಗ್ಯೂ, ಪಾಕಿಸ್ತಾನವು ತನ್ನ ನೆಲದಲ್ಲಿ ಭಯೋತ್ಪಾದನೆಯನ್ನು ಹತ್ತಿಕ್ಕುವ ಅಗತ್ಯವಿದೆ ಎಂದು ಅವರು ಹೇಳಿದರು. "ಪಾಕಿಸ್ತಾನವು ತನ್ನ ನೆಲದಿಂದ ಕಾರ್ಯನಿರ್ವಹಿಸುತ್ತಿರುವ ಉಗ್ರರು ಮತ್ತು ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳಬೇಕು" ಎಂದು ಅವರು ಟೀಕಿಸಿದರು.

ಪೌರತ್ವ ತಿದ್ದುಪಡಿ ಮಸೂದೆಯನ್ನು ತಡರಾತ್ರಿಯವರೆಗೆ ಚರ್ಚಿಸಿ ಲೋಕಸಭೆಯಲ್ಲಿ ಅಂಗೀಕರಿಸಿದ ಕೆಲವೇ ಗಂಟೆಗಳ ನಂತರ ಪ್ರತಿಕ್ರಿಯಿಸಿರೋ ಇಯು ರಾಯಭಾರಿ, ‘ಭಾರತೀಯ ಸಂವಿಧಾನವು ಕಾನೂನಿನ ಮುಂದೆ ಎಲ್ಲರಿಗೂ ಸಮಾನತೆ ಖಾತರಿಪಡಿಸುತ್ತದೆ’ಎಂದು ನೆನಪಿಸಿದರು. "ನಾನು ಸಂಸತ್ತಿನಲ್ಲಿ ಚರ್ಚೆಗಳ ಬಗ್ಗೆ ಓದಿದ್ದೇನೆ. ಭಾರತೀಯ ಸಂವಿಧಾನವು ಕಾನೂನಿನ ಮುಂದೆ ಎಲ್ಲರಿಗೂ ಸಮಾನತೆ ಖಾತರಿಪಡಿಸುತ್ತದೆ. ಇವುಗಳು ನಾವು (ಇಯು ಮತ್ತು ಭಾರತ) ಹಂಚಿಕೊಳ್ಳುವ ತತ್ವಗಳಾಗಿವೆ. ಆದ್ದರಿಂದ ಚರ್ಚೆಗಳ ಫಲಿತಾಂಶವು ಸಂವಿಧಾನವು ಹೊಂದಿರುವ ಉನ್ನತ ಮಾನದಂಡಗಳಿಗೆ ಅನುಗುಣವಾಗಿರುತ್ತದೆ ಎಂದು ನಾನು ನಂಬುತ್ತೇನೆ ಎಂದು ಮತ್ತೊಂದು ಪ್ರಶ್ನೆಗೆ ಅಸ್ತೂಟೊ ಉತ್ತರಿಸಿದ್ರು.

ಭಾರತ ಮತ್ತು ಇಯು ನಡುವಿನ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ಮಾತುಕತೆಗಳು 2013ರಿಂದ ಸ್ಥಗಿತಗೊಂಡ ಬಗ್ಗೆ ಕೇಳಿದಾಗ, ಮಾತುಕತೆ ತಾಂತ್ರಿಕ ಮಟ್ಟದಲ್ಲಿ ಮುಂದುವರಿದರೆ, ‘ಹೂಡಿಕೆ ಒಪ್ಪಂದಗಳ ಕುರಿತ ಮಾತುಕತೆಯನ್ನು ಮೊದಲೇ ತೀರ್ಮಾನಿಸಬೇಕು’ಎಂದು ಅವರು ಆಶಿಸಿದರು.

-ಸ್ಮಿತಾ ಶರ್ಮಾ

ABOUT THE AUTHOR

...view details