ಕರ್ನಾಟಕ

karnataka

ರಕ್ತಹೀನತೆ ಕುರಿತ ಅಭಿಯಾನ: ಬುಡಕಟ್ಟು ಮಹಿಳೆಯರಿಗೆ ಇವರೇ 'ಮದರ್ ತೆರೇಸಾ'...

ರಕ್ತಹೀನತೆ ಕುರಿತು ಸಾಮಾಜಿಕ ಅಭಿಯಾನ ನಡೆಸುತ್ತಿರುವ ಮಧ್ಯ ಪ್ರದೇಶದ ರತ್ಲಂ ಮೂಲದ ಪದ್ಮಶ್ರೀ ಪುರಸ್ಕೃತರಾದ ಡಾ. ಲೀಲಾ ಜೋಶಿ ಅವರೊಂದಿಗೆ ಮಹಿಳಾ ದಿನಾಚರಣೆಯ ಅಂಗವಾಗಿ ಈಟಿವಿ ಭಾರತ ನಡೆಸಿರುವ ವಿಶೇಷ ಸಂದರ್ಶನ ಇಲ್ಲಿದೆ.

By

Published : Mar 3, 2020, 7:01 AM IST

Published : Mar 3, 2020, 7:01 AM IST

Etv Bharat special interview with Dr Leela Joshi
ಡಾ. ಲೀಲಾ ಜೋಶಿ

ರತ್ಲಂ (ಮಧ್ಯಪ್ರದೇಶ): 'ಮದರ್ ತೆರೇಸಾ ಆಫ್ ಮಾಲ್ವಾ', ಇದು ಮಧ್ಯ ಪ್ರದೇಶದ ರತ್ಲಂ ಮೂಲದ ಡಾ. ಲೀಲಾ ಜೋಶಿ ಅವರಿಗೆ ನೀಡಲಾಗಿರುವ ಬಿರುದು. ರತ್ಲಂನ ಮಾಲ್ವಾದ ಬುಡಕಟ್ಟು ಪ್ರದೇಶಗಳಲ್ಲಿ ವಾಸಿಸುವ ಮಹಿಳೆಯರಲ್ಲಿ ರಕ್ತದ ಕೊರತೆಯ ಸಮಸ್ಯೆಗೆ (ರಕ್ತಹೀನತೆ) ಚಿಕಿತ್ಸೆ ನೀಡುವ ಅಭಿಯಾನವನ್ನು ಡಾ. ಲೀಲಾ ಜೋಶಿ ನಡೆಸುತ್ತಿದ್ದು, ಅವರ ಈ ಸೇವೆಗೆ ‘ಮದರ್ ತೆರೇಸಾ ಆಫ್ ಮಾಲ್ವಾ’ ಎಂದು ಬಿರುದು ನೀಡಲಾಗಿದೆ.

ಈ ವೈದ್ಯೆ ಕೇವಲ ತಮ್ಮ ರೋಗಿಗಳಿಗೆ ರಕ್ತಹೀನತೆಗೆ ಉಚಿತ ಚಿಕಿತ್ಸೆಯನ್ನು ನೀಡುತ್ತಿಲ್ಲ, ಬದಲಾಗಿ ತಮ್ಮ 82ನೇ ವಯಸ್ಸಿನಲ್ಲಿಯೂ ಅಸ್ವಸ್ಥತೆಯ ವಿರುದ್ಧದ ಅಭಿಯಾನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ರಕ್ತಹೀನತೆ ಕುರಿತು ಇವರ ಸಾಮಾಜಿಕ ಅಭಿಯಾನವನ್ನು ಗುರುತಿಸಿರುವ ಭಾರತ ಸರ್ಕಾರ, ಇವರಿಗೆ 'ಪದ್ಮಶ್ರೀ' ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಈಟಿವಿ ಭಾರತ್​ ಪದ್ಮ ಪ್ರಶಸ್ತಿ ಪಡೆದಿರುವ ಮಹಿಳಾ ಸಾಧಕಿಯರ ಬಗ್ಗೆ ವಿಶೇಷ ಸರಣಿ ಪ್ರಸಾರ ಮಾಡುತ್ತಿದೆ. ಸಾಮಾನ್ಯ ಮಹಿಳೆಯಾಗಿ ಉಳಿಯದೆ ಲಕ್ಷಾಂತರ ಜನರಿಗೆ ಸ್ಫೂರ್ತಿಯ ಚಿಲುಮೆಯಾಗಿರುವ ಡಾ. ಲೀಲಾ ಜೋಶಿ ಈಟಿವಿ ಭಾರತ್​ಗೆ ವಿಶೇಷ ಸಂದರ್ಶನ ನೀಡಿದ್ದಾರೆ. ಮಹಿಳೆಯರ ಆರೋಗ್ಯದ ಮಹತ್ವವನ್ನು ಒತ್ತಿಹೇಳಿರುವ ಡಾ. ಲೀಲಾ ಜೋಶಿ, ತಮ್ಮ ಮುಂದಿನ ಯೋಜನೆಗಳು ಹಾಗೂ ಮಹಿಳೆಯರ ಆರೋಗ್ಯದ ಕುರಿತ ಸರ್ಕಾರದ ಅಭಿಯಾನಗಳ ಬಗ್ಗೆ ಚರ್ಚಿಸಿದ್ದಾರೆ. ಹಾಗೆಯೇ ಪ್ರತಿಯೊಬ್ಬರೂ ಆರೋಗ್ಯವಾಗಿರಲು ಸಹಾಯ ಮಾಡುವ ಪ್ರಮುಖ ಅಂಶವೊಂದನ್ನು ಹಂಚಿಕೊಂಡಿದ್ದಾರೆ.

ಆರೋಗ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ:

1997 ರಲ್ಲಿ ಮದರ್‌ ತೆರೇಸಾ ಅವರನ್ನು ಭೇಟಿ ಮಾಡುವ ಅವಕಾಶ ಲೀಲಾ ಜೋಶಿಗೆ ಸಿಕ್ಕಿತ್ತು. ಆಗ ಮದರ್‌ ತೆರೇಸಾರಿಂದ ಪ್ರಭಾವಿತರಾದ ಲೀಲಾ ಜೋಶಿ, ರಕ್ತಹೀನತೆಯಿಂದ ಬಳಲುತ್ತಿರುವ ಬುಡಕಟ್ಟು ಪ್ರದೇಶಗಳಲ್ಲಿ ವಾಸಿಸುವ ಮಹಿಳೆಯರಿಗೆ ಉಚಿತವಾಗಿ ಚಿಕಿತ್ಸೆ ನೀಡಲು ಶಿಬಿರಗಳನ್ನು ಸ್ಥಾಪಿಸಿದ್ದರು.

2015 ರಲ್ಲಿ ಇವರ ಸಾಧನೆಯನ್ನು ಗುರುತಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿದ್ಧಪಡಿಸಿದ '100 ಪ್ರಭಾವಿ ಮಹಿಳೆ'ಯರ ಪಟ್ಟಿಯಲ್ಲಿ ಲೀಲಾ ಜೋಶಿಯವರ ಹೆಸರು ಸೇರ್ಪಡೆಯಾಗಿತ್ತು. ಇದೀಗ 2020ನೇ ಸಾಲಿನ 'ಪದ್ಮಶ್ರೀ' ಪ್ರಶಸ್ತಿ ಕೂಡ ಇವರ ಮುಡಿಗೇರಿದೆ.

'ಸರ್ಕಾರಿ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಜಾರಿಗೆ ತರಬೇಕು'

ಈ ಹಿಂದೆ ರೈಲ್ವೆ ಇಲಾಖೆಯಲ್ಲಿ ಮುಖ್ಯ ವೈದ್ಯಕೀಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿರುವ ಸ್ತ್ರೀರೋಗ ತಜ್ಞೆ ಡಾ. ಲೀಲಾ ಜೋಶಿ, ಸರ್ಕಾರ ಯಾವಾಗಲೂ ತನ್ನ ಜನರ ಕಲ್ಯಾಣಕ್ಕಾಗಿ ಯೋಜನೆಗಳನ್ನು ಸಿದ್ಧಪಡಿಸುತ್ತದೆ. ಆದರೆ ಬಹುಪಾಲು ಅವು ಕಾರ್ಯರೂಪಕ್ಕೆ ಬರುವುದಿಲ್ಲ ಎಂದು ಹೇಳುತ್ತಾರೆ. ಅಲ್ಲದೆ ಇದಕ್ಕೆ ಪರಿಹಾರವಾಗಿ ಫಲಿತಾಂಶ ಆಧಾರಿತ ಯೋಜನೆಗಳನ್ನು ಜಾರಿಗೆ ತರುವ ಸಲಹೆಯನ್ನು ಜೋಶಿ ನೀಡುತ್ತಾರೆ. ಹಾಗೆಯೇ ಸರ್ಕಾರದ ಹೊರತಾಗಿ ಆರ್ಥಿಕವಾಗಿ ಬಲವಾಗಿರುವ ವರ್ಗದ ಜನರು ಸಾಮಾಜಿಕ ಸೇವೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡುತ್ತಾರೆ.

'ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು'

ಮಹಿಳೆಯರು ತಮ್ಮ ಕುಟುಂಬವನ್ನು ಮಾತ್ರವಲ್ಲ, ತಮ್ಮ ಆರೋಗ್ಯವನ್ನೂ ಸಹ ಸರಿಯಾಗಿ ನೋಡಿಕೊಳ್ಳಬೇಕು. ಭವಿಷ್ಯದಲ್ಲಿ ಹೆಣ್ಣು ಮಕ್ಕಳು ಸುರಕ್ಷಿತ ಹಾಗೂ ಆರೋಗ್ಯವಂತರಾಗಿರಲು ಉತ್ತಮ ಪೌಷ್ಠಿಕಾಂಶವುಳ್ಳ ಆಹಾರವನ್ನು ಸೇವಿಸಬೇಕಿದೆ ಎಂದು ಸಲಹೆ ನೀಡಿದ್ದಾರೆ.

ABOUT THE AUTHOR

...view details