ಕರ್ನಾಟಕ

karnataka

ETV Bharat / bharat

ಆರೂವರೆ ವರ್ಷದಿಂದ ಏನ್​ ಮಾಡಿದ್ದಾರೆ ಕೇಜ್ರಿವಾಲ್?: ದೆಹಲಿ ಕೈ ಅಧ್ಯಕ್ಷರ ಜೊತೆ ಈಟಿವಿ ಭಾರತ ವಿಶೇಷ ಸಂದರ್ಶನ - Etv Bharat Interview of Delhi Congress chief Subhash Chopra,

ದೆಹಲಿ ವಿಧಾನಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಈಗ ಕಾಂಗ್ರೆಸ್​ ಪಕ್ಷ ದೆಹಲಿ ಸರ್ಕಾರದ ವಿರುದ್ಧ ಹರಿಹಾಯ್ದಿದೆ. ಈಟಿವಿ ಭಾರತ ನಡೆಸಿದ ಸಂದರ್ಶನದಲ್ಲಿ ಕೇಜ್ರಿವಾಲ್​ ವಿರುದ್ಧ ದೆಹಲಿ ಕಾಂಗ್ರೆಸ್​ ಅಧ್ಯಕ್ಷ ಸುಭಾಷ್​ ಚೋಪ್ರಾ ಕಿಡಿ ಕಾರಿದರು.

Etv Bharat Interview of Delhi Congress chief Subhash Chopra, Etv Bharat Interview of Delhi Congress chief, Subhash Chopra news,  Subhash Chopra interview, ಈಟಿವಿ ಭಾರತದಲ್ಲಿ ದೆಹಲಿ ಕಾಂಗ್ರೆಸ್​ ಅಧ್ಯಕ್ಷ ಸಂದರ್ಶನ, ಈಟಿವಿ ಭಾರತದಲ್ಲಿ ದೆಹಲಿ ಕಾಂಗ್ರೆಸ್​ ಅಧ್ಯಕ್ಷ ಸುಭಾಷ್​ ಚೋಪ್ರಾ ಸಂದರ್ಶನ, ಸುಭಾಷ್​ ಚೋಪ್ರಾ ಸುದ್ದಿ, ಸುಭಾಷ್​ ಚೋಪ್ರಾ ಸಂದರ್ಶನ
ಈಟಿವಿ ಭಾರತ ಸಂದರ್ಶನದಲ್ಲಿ ಕಿಡಿ ಕಾರಿದ ಕೈ ನಾಯಕ

By

Published : Jan 28, 2020, 12:16 PM IST

ನವದೆಹಲಿ:ವಿಧಾನಸಭಾ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಕಾಂಗ್ರೆಸ್​ ಪಕ್ಷ ದೆಹಲಿ ಸರ್ಕಾರ ನಡೆಸಿದ ಆಡಳಿತ ವಿರುದ್ಧ ಬೇಸರ ವ್ಯಕ್ತಪಡಿಸಿದೆ. ಈಟಿವಿ ಭಾರತ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಕಳೆದ ಆರೂವರೆ ವರ್ಷದಿಂದ ದೆಹಲಿ ಸಿಎಂ ಯಾವುದೇ ಕೆಲಸ ಮಾಡಿಲ್ಲವೆಂದು ಕಾಂಗ್ರೆಸ್​ ನಾಯಕ ಸುಭಾಷ್​ ಚೋಪ್ರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಟಿವಿ ಭಾರತ ಸಂದರ್ಶನದಲ್ಲಿ ಕಿಡಿ ಕಾರಿದ ಕೈ ನಾಯಕ

ನಿಮ್ಮ ಗೆಲುವು ಖಚಿತವೇ?
2015ರಲ್ಲಿ ನಡೆದ 70 ಕ್ಷೇತ್ರಗಳ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷ ಒಂದೇ ಒಂದು ಸೀಟು ಗೆದ್ದಿಲ್ಲ. ಆದ್ರೆ, ಈ ಬಾರಿ ಚುನಾವಣೆಯಲ್ಲಿ ನಿಮ್ಮ ಗೆಲುವು ಖಚಿತವೇ? ಎಂಬ ಪ್ರಶ್ನೆಗೆ ಉತ್ತರಿಸಿದ ದೆಹಲಿ ಕಾಂಗ್ರೆಸ್​ ಅಧ್ಯಕ್ಷ ಸುಭಾಷ್​ ಚೋಪ್ರಾ, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷ ಏನೆಂಬುದನ್ನು ತೋರಿಸುತ್ತೇವೆ. ಅಲ್ಲಿಯವರೆಗೆ ಕಾಯಿರಿ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರದ ಮೇಲೆ ಆರೋಪ:
ಭ್ರಷ್ಟಾಚಾರ, ಲೋಕಪಾಲ ಮಸೂದೆ ಜಾರಿಯಂತಹ ವಿಷಯಗಳನ್ನು ಇಟ್ಟುಕೊಂಡು ಅಣ್ಣಾ ಹಜಾರೆ ನೇತೃತ್ವದಲ್ಲಿ ನಡೆದ ಹೋರಾಟದ ಮೂಲಕ ಅರವಿಂದ್‌ ಕೇಜ್ರಿವಾಲ್‌, 2013ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್‌ ಆದ್ಮಿ ಎಂಬ ಪಕ್ಷವನ್ನು ಕಟ್ಟಿ ಮೊದಲ ಪ್ರಯತ್ನದಲ್ಲಿಯೇ ಭರ್ಜರಿ ಯಶಸ್ಸು ಪಡೆದರು. ಅಧಿಕಾರಕ್ಕೆ ಬಂದ ಪ್ರಾರಂಭದ ದಿನಗಳಲ್ಲಿ ರಾಜಕೀಯ ಅನನುಭವಿ ಎಂಬಂತೆ ವರ್ತಿಸಿ ಜನರಿಂದ ಅಪಹಾಸ್ಯಕ್ಕೀಡಾದರು. ಎಲ್ಲರಿಗೂ ಜನ ಲೋಕಪಾಲ ಮಸೂದೆ ಬೇಕು. ಆದ್ರೆ ಕಳೆದ ಆರೂವರೆ ವರ್ಷದಿಂದ ಏನಾಯ್ತು?. ಇದರ ಬಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಏನ್​ ಹೇಳ್ತಾರೆ?. ಅವರಿಂದ ಏನೂ ಆಗಲ್ಲ. ಕೇಂದ್ರ ಸರ್ಕಾರ ಮತ್ತು ರಾಜ್ಯಪಾಲರು ಕೇಜ್ರಿವಾಲ್​ಗೆ ಕೆಲಸ ಮಾಡಲು ಬಿಡುವುದಿಲ್ಲ ಎಂದು ಆರೋಪಿಸಿದರು.

ಕೇಜ್ರಿವಾಲ್​ ಮೇಲೆ ಗಂಭೀರ ಆರೋಪ:
ಜನ ನಾಯಕ್​ ಜನತಾ ಪಕ್ಷ ಮತ್ತು ಬಿಜೆಪಿ ಮೈತ್ರಿ ಸರ್ಕಾರದ ರೂವಾರಿ ಅರವಿಂದ್ ಕೇಜ್ರಿವಾಲ್​. ಏಕೆಂದರೆ, ಈ ಹಿಂದೆ ಜೆಜೆಪಿ ಅಧ್ಯಕ್ಷ ದುಷ್ಯಂತ್ ಚೌಟಾಲಾ ಮತ್ತು ಆಮ್​ ಆದ್ಮಿ ಪಕ್ಷದ ನಾಯಕ ಕೇಜ್ರಿವಾಲ್ ನಡುವೆ​ ಸಂಬಂಧವಿತ್ತು. ಯಾವುದೇ ಷರತ್ತುಗಳನ್ನು ಪಾಲಿಸದೇ ರಾತ್ರೋರಾತ್ರಿ ದೆಹಲಿ ಸರ್ಕಾರ ದುಷ್ಯಂತ್​ರ ತಂದೆ ಅಜಯ್​ ಚೌಟಾಲಾರನ್ನು ತಿಹಾರ್​ ಜೈಲಿನಿಂದ ಬಿಡುಗಡೆ ಮಾಡಿತ್ತು. ಆದ್ರೆ ಈ ಬಗ್ಗೆ ದೆಹಲಿ ಗೃಹ ಸಚಿವ ಏನೂ ಮಾತನಾಡಲಿಲ್ಲ ಎಂದು ಕೇಜ್ರಿವಾಲ್​ ವಿರುದ್ಧ ಹರಿಹಾಯ್ದರು.

ದೆಹಲಿ ಜನತೆ ನಿಮಗೆ ಏಕೆ ಮತ ಹಾಕುತ್ತಾರೆ?
ದೇಶದ ಮುಂದಿನ ಭವಿಷ್ಯ ವಿದ್ಯಾರ್ಥಿಗಳು. ಪೊಲೀಸರು ನಮ್ಮ ಮೇಲೆ ಲಾಠಿ ಚಾರ್ಜ್​ ನಡೆಸಿದ್ದರೂ ಸಹ ನಾವು ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ. ಜೆಎನ್​ಯು ವಿದ್ಯಾರ್ಥಿಗಳು ವಿವಾದ ಎಲ್ಲರಿಗೂ ತಿಳಿದಿದೆ. ಆದ್ರೆ ಈ ಸಮಯದಲ್ಲಿ ದೆಹಲಿ ಮುಖ್ಯಮಂತ್ರಿ ಏನ್​ ಮಾಡಿದ್ರು?. ಅಧಿಕಾರದಲ್ಲಿದ್ದ ದೆಹಲಿ ಸರ್ಕಾರ ಅಸಹಾಯ ವಿದ್ಯಾರ್ಥಿಗಳ ನೆರವಿಗೆ ಬಂತಾ?. ಕೇಜ್ರಿವಾಲ್​ ಇದನ್ನೆಲ್ಲ ನೋಡುತ್ತಾ ಕುಳಿತ್ರು ಎಂದು ಕೇಜ್ರಿವಾಲ್​ ವಿರುದ್ಧ ತಿರುಗಿ ಬಿದ್ದರು.

ದೆಹಲಿಯಲ್ಲಿ ದಿನದಿಂದ ದಿನಕ್ಕೆ ಹವಾಮಾನ ಹದಗೆಡುತ್ತಿದೆ. ಕಳೆದ ವರ್ಷ ಸುಮಾರು 58 ಜನರು ಈ ಕೆಟ್ಟ ವಾತಾವರಣಕ್ಕೆ ಬಲಿಯಾಗಿದ್ದಾರೆ. ದೆಹಲಿಯಲ್ಲಿ ಅತೀ ಹೆಚ್ಚು ಬೆಲೆಗೆ ಈರುಳ್ಳಿ ಮಾರಾಟ ನೋಡಿದ್ದೇವೆ. ದೆಹಲಿ ಜನರಿಗೆ ಶುದ್ಧ ಗಾಳಿ ಮತ್ತು ನೀರು ಸಿಗುತ್ತಿಲ್ಲ. ಇದರ ಬಗ್ಗೆ ದೆಹಲಿ ಸರ್ಕಾರ ತಲೆ ಕೆಡಿಸಿಕೊಳ್ಳುತ್ತಿಲ್ಲ. ಹೀಗಾಗಿ ನಾವು ಈ ವಿಧಾನಸಭಾ ಚುನಾವಣೆಗೆ ರೆಡಿಯಾಗಿದ್ದೇವೆ ಎಂದು ಸುಭಾಷ್​ ಚೋಪ್ರಾ ಹೇಳಿದರು.

ಎಎಪಿ ಪಕ್ಷ ಬರೀ ಸುಳ್ಳು ಹೇಳುತ್ತೆ:
ಮನೆಗಳಿಗೆ ಕಡಿಮೆ ಮೊತ್ತದಲ್ಲಿ ವಿದ್ಯುತ್​ ಒದಗಿಸುತ್ತಿರುವುದು ಸುಳ್ಳು. ದೆಹಲಿ ಸಿಎಂ 200 ಯೂನಿಟ್​ ಉಚಿತ ವಿದ್ಯುತ್​ ಅಂತಾ ಘೋಷಿಸಿದ್ದಾರೆ. ನಾವು 600 ಯುನಿಟ್​ ಉಚಿತ ಕರೆಂಟ್​ ನೀಡಲು ಘೋಷಿಸಿದ್ದೇವೆ. ಟ್ರಾನ್ಸ್‌ಕೋಸ್ ಮೂಲಕ ಸಬ್ಸಿಡಿಯನ್ನು ನೀಡಲಾಗುವುದೆಂದು ಕೇಜ್ರಿವಾಲ್​ ಸರ್ಕಾರ ಭರವಸೆ ನೀಡಿತ್ತು. ಆದ್ರೆ ರಾಜ್ಯ ಖಾಸಗಿ ಕಂಪನಿಗಳಿಗೆ ಏಕೆ ನೀಡಿದ್ರು?. ನಾವು ಸಣ್ಣ ಅಂಗಡಿಗಳಿಗೂ 200 ಯೂನಿಟ್​ವರೆಗೂ ಕಮರ್ಷಿಯಲ್​ ಶುಲ್ಕ ವಿಧಿಸುವುದಿಲ್ಲವೆಂದು ಭರವಸೆ ನೀಡುತ್ತೇವೆ ಅಂತಾ ಸುಭಾಷ್​ ಚೋಪ್ರಾ ಹೇಳಿದರು.

ಸಿಎಎ ವಿರುದ್ಧ ಬೇಸರಗೊಂಡ ಕಾಂಗ್ರೆಸ್​ ನಾಯಕ ಸುಭಾಷ್​ ಚೋಪ್ರಾ, ದೆಹಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ಹೊರ ಹಾಕಿದರು.

ABOUT THE AUTHOR

...view details