ಕರ್ನಾಟಕ

karnataka

By

Published : Oct 21, 2020, 7:14 PM IST

ETV Bharat / bharat

ಕಮಲ್​ನಾಥ್​​ ಅವಾಚ್ಯ ಪದ ಬಳಕೆ: ಚುನಾವಣಾ ಆಯೋಗದಿಂದ ನೋಟಿಸ್​ ಜಾರಿ

ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲ್​ನಾಥ್ ಬಿಜೆಪಿ ಮುಖಂಡೆ ವಿರುದ್ಧ​​ ಅವಾಚ್ಯ ಪದ ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಕೇಂದ್ರ ಚುನಾವಣಾ ಆಯೋಗದಿಂದ ನೋಟಿಸ್​ ಜಾರಿಯಾಗಿದೆ.

Kamal Nath
Kamal Nath

ಭೋಪಾಲ್​(ಮಧ್ಯಪ್ರದೇಶ):ಕಾಂಗ್ರೆಸ್​​ ಹಿರಿಯ ನಾಯಕ ಕಮಲ್​ನಾಥ್​​​ ಬಿಜೆಪಿ ಮಹಿಳಾ ಮುಖಂಡೆ ಕುರಿತು ಅವಾಚ್ಯ ಪದ ಬಳಕೆ ಮಾಡಿದ್ದು, ಇದೇ ವಿಚಾರವಾಗಿ ಇದೀಗ ಚುನಾವಣಾ ಆಯೋಗ ಇದೀಗ ನೋಟಿಸ್​ ಜಾರಿ ಮಾಡಿದೆ.

ಕಳೆದ ಭಾನುವಾರ ಗ್ವಾಲಿಯರ್​​ನ ದಾಬ್ರಾದಲ್ಲಿ ನಡೆದ ಪಕ್ಷದ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ ಮಾತನಾಡಿದ್ದ ಕಮಲ್​ನಾಥ್​, ಬಿಜೆಪಿ ಸಚಿವೆ ಇಮಾರ್ತಿ ದೇವಿ ವಿರುದ್ಧ ಅವಾಚ್ಯವಾಗಿ ಪದ ಬಳಿಕೆ ಮಾಡಿದ್ದರು. ಈ ಮೂಲಕ ತಮ್ಮ ಮೇಲೆ ವಿವಾದ ಎಳೆದುಕೊಂಡಿದ್ದರು. ಈ ಹೇಳಿಕೆಗೆ ಮಧ್ಯಪ್ರದೇಶ ಮಾಜಿ ಸಿಎಂ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ನಾಲಿಗೆ ಹರಿಬಿಟ್ಟಿದ್ದಕ್ಕೆ ಭಾರಿ ವಿರೋಧ.. ಇಕ್ಕಟ್ಟಿಗೆ ಸಿಲುಕಿದ ಮಧ್ಯಪ್ರದೇಶದ ಮಾಜಿ ಸಿಎಂ

ಇದೀಗ ಕೇಂದ್ರ ಚುನಾವಣಾ ಆಯೋಗ ನೋಟಿಸ್​ ಜಾರಿ ಮಾಡಿದ್ದು, ಮುಂದಿನ 48 ಗಂಟೆಯಲ್ಲಿ ತಾವು ನೀಡಿರುವ ಹೇಳಿಕೆಗೆ ತಮ್ಮ ನಿಲುವನ್ನ ತಿಳಿಸುವಂತೆ ಸೂಚನೆ ನೀಡಿದೆ.

ಇದೇ ವಿಚಾರವಾಗಿ ಮಾತನಾಡಿದ್ದ ರಾಹುಲ್​ ಗಾಂಧಿ ಕೂಡ ಕಮಲ್​ನಾಥ್​ ವಿರುದ್ಧ ವಾಗ್ದಾಳಿ ನಡೆಸಿತ್ತು. ಇದಾದ ಬಳಿಕ ಸ್ಪಷ್ಟನೆ ನೀಡಿದ್ದ ಕಮಲ್​ನಾಥ್​​ ನಾನು ಯಾವ ಸಂದರ್ಭದಲ್ಲಿ ಆ ಪದ ಬಳಕೆ ಮಾಡಿದ್ದೇನೆ ಎಂಬುದನ್ನ ಸ್ಪಷ್ಟಪಡಿಸಿದ್ದೇನೆ. ಯಾವುದೇ ಕಾರಣಕ್ಕೂ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದಿದೆ.

ABOUT THE AUTHOR

...view details