ಕರ್ನಾಟಕ

karnataka

ETV Bharat / bharat

ರಸಗೊಬ್ಬರ ಹಗರಣ: ’ಇ.ಡಿ‘ಯಿಂದ ರಾಜಸ್ಥಾನ ಸಿಎಂ ಸಹೋದರನ ವಿಚಾರಣೆ - ಅಕ್ರಮ ಹಣ ಸಾಗಣೆ ನಿಯಂತ್ರಣ ಕಾಯ್ದೆ

ರಸಗೊಬ್ಬರ ಹಗರಣದಲ್ಲಿ ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್ ಸಹೋದರ ಅಗ್ರಸೇನ್​ ಗೆಹ್ಲೋಟ್​​ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

Agrasain Gehlot
ಅಗ್ರಸೇನ್ ಗೆಹ್ಲೋಟ್

By

Published : Jul 29, 2020, 10:46 AM IST

ನವದೆಹಲಿ:ರಸಗೊಬ್ಬರ ಹಗರಣದಲ್ಲಿ ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್​ ಸಹೋದರ ಅಗ್ರಸೇನ್​ ಗೆಹ್ಲೋಟ್​ಗೆ ಜಾರಿ ನಿರ್ದೇಶನಾಲಯ ಸಮನ್ಸ್​ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ಮೂಲಗಳ ಪ್ರಕಾರ ಇಂದು ದೆಹಲಿಯ ಜಾರಿ ನಿರ್ದೇಶನಾಲಯ ಕಚೇರಿಗೆ ಅಗ್ರಸೇನ್​ ಗೆಹ್ಲೋಟ್​ ಹಾಜರಾಗಲಿದ್ದು, ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.

ಹಿಂದಿನ ವಾರ ರಾಜಸ್ಥಾನ ಹಾಗೂ ವಿವಿಧ ರಾಜ್ಯಗಳ 13 ಪ್ರದೇಶಗಳಲ್ಲಿನ ಅಗ್ರಸೇನ್​ ಗೆಹ್ಲೋಟ್​ ಅವರ ಆಸ್ತಿಯ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದರು. ರಾಜಸ್ಥಾನ, ಪಶ್ಚಿಮ ಬಂಗಾಳ, ಗುಜರಾತ್, ದೆಹಲಿಯಲ್ಲಿ ಅಗ್ರಸೇನ್​ಗೆ ಸಂಬಂಧಿಸಿದ ಆಸ್ತಿ ಇತ್ತು.

ಅಕ್ರಮ ಹಣ ಸಾಗಣೆ ನಿಯಂತ್ರಣ ಕಾಯ್ದೆ (ಪಿಎಂಎಲ್​​ಎ) ಅಡಿ ಜಾರಿ ನಿರ್ದೇಶನಾಲಯ ತನಿಖೆ ಕೈಗೊಂಡಿತ್ತು. ರಸಗೊಬ್ಬರ ಹಗರಣದ ಆರೋಪದಲ್ಲಿ ತೆರಿಗೆ ಇಲಾಖೆಯ ದೂರು ಆಧರಿಸಿ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.

ಜಾರಿ ನಿರ್ದೇಶನಾಲಯದ ಅಧಿಕಾರಿ ಅನುಪಮ್​ ಕೃಷಿ ಹೇಳುವಂತೆ ಅಗ್ರಸೇನ್​ ಗೆಹ್ಲೋಟ್​ ಒಡೆತನಕ್ಕೆ ಸೇರಿದ ಕಂಪನಿಯೊಂದು ನಿಷೇಧಿತ ರಸಗೊಬ್ಬರವನ್ನು ರಫ್ತು ಮಾಡಿರುವ ಆರೋಪ ಹೊಂದಿದ್ದಾರೆ.

ಮತ್ತೊಂದು ಮೂಲದ ಪ್ರಕಾರ ಅಗ್ರಸೇನ್​ ಗೆಹ್ಲೋಟ್​ 2007 - 09ರಲ್ಲಿ ಐಪಿಎಲ್​ನ ಅಧಿಕೃತ ಡೀಲರ್ ಕೂಡಾ ಆಗಿದ್ದರು ಎಂದು ಹೇಳಲಾಗುತ್ತಿದೆ.

ABOUT THE AUTHOR

...view details