ಕರ್ನಾಟಕ

karnataka

ETV Bharat / bharat

ಅಧಿಕಾರಕ್ಕೆ ಬಂದ್ರೆ ಚುನಾವಣಾ ಆಯುಕ್ತರನ್ನ ಜೈಲಿಗೆ ದೂಡ್ತೀನಿ ಎಂದ ಅಂಬೇಡ್ಕರ್​ ಮೊಮ್ಮಗ - ಪ್ರಕಾಶ್​ ಅಂಬೇಡ್ಕರ್

ಪುಲ್ವಾಮ ಕುರಿತಾಗಿ ಮಾತನಾಡಬಾರದು ಎಂದ ಚುನಾವಣಾ ಆಯುಕ್ತರನ್ನು ಜೈಲಿಗೆ ದೂಡುತ್ತೇನೆ ಎಂದು ಪ್ರಕಾಶ್​ ಅಂಬೇಡ್ಕರ್​ ಹೇಳಿದ್ದಾರೆ

ಚುನಾವಣಾ ಆಯುಕ್ತರನ್ನ ಜೈಲಿಗೆ ದೂಡ್ತೀನಿ ಎಂದ ಪ್ರಕಾಶ್​ ಅಂಬೇಡ್ಕರ್​

By

Published : Apr 4, 2019, 4:23 PM IST

ನವದೆಹಲಿ: ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಪುಲ್ವಾಮಾ ದಾಳಿ ಕುರಿತಾಗಿ ಮಾತನಾಡಬಾರದು ಎಂದು ಹೇಳಿರುವ ಚುನಾವಣಾ ಆಯುಕ್ತರನ್ನು ಜೈಲಿಗೆ ದೂಡುತ್ತೇನೆ ಎಂದು ಅಂಬೇಡ್ಕರ್​ ಮೊಮ್ಮಗ, ವಂಚಿತ್​ ಬಹುಜನ್​ ಅಘಾದಿ ಪಕ್ಷದ ನಾಯಕ ಪ್ರಕಾಶ್​ ಅಂಬೇಡ್ಕರ್​ ಘೇರಾವ್​ ಹಾಕಿದ ಘಟನೆ ನಡೆದಿದೆ.

ಮಹಾರಾಷ್ಟ್ರದ ಯವತ್ಮಲ್​​​​ನಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗ ನಮ್ಮೊಂದಿಗೆ ತಮಾಷೆ ಮಾಡುತ್ತಿದೆ. ನಾವು ಪುಲ್ವಾಮ ದಾಳಿ ಕುರಿತಾಗಿ ಮಾತನಾಡುತ್ತೇನೆ ಎಂದು ಹೇಳಿದರು.

ಚುನಾವಣಾ ಆಯೋಗ ಪುಲ್ವಾಮ ಕುರಿತಾಗಿ ಮಾತನಾಡಬಾರದು ಎಂದು ಹೇಳುತ್ತೆ. ಏಕೆ ಮಾತನಾಡಬಾರದು? ಅದು ನನ್ನ ಹಕ್ಕು. ನಾನೇನು ಬಿಜೆಪಿಯವನಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಚುನಾವಣಾ ಆಯುಕ್ತರನ್ನು ಎರಡು ದಿನಗಳ ಕಾಲ ಜೈಲಿಗೆ ದೂಡುತ್ತೇನೆ ಎಂದು ಹೇಳಿದ್ದಾರೆ.

ಪ್ರಕಾಶ್​ ಅಂಬೇಡ್ಕರ್​ರ ಬೆದರಿಕೆಯಿಂದ ಕಣ್ಣು ಕೆಂಪಗೆ ಮಾಡಿಕೊಂಡಿರುವ ಚುನಾವಣಾ ಆಯೋಗ ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಕೇಳಿದೆ. ಅಲ್ಲದೆ, ಸ್ಥಳೀಯ ಚುನಾವಣಾಧಿಕಾರಿಗೂ ಈ ಬಗ್ಗೆ ವರದಿ ನೀಡುವಂತೆ ತಿಳಿಸಿದೆ.

ಈ ಮೊದಲು ಪುಲ್ವಾಮ ದಾಳಿ ಭದ್ರತಾ ವೈಫಲ್ಯದಿಂದ ಆಗಿದೆ ಎಂದು ಪ್ರಕಾಶ್​ ಅಂಬೇಡ್ಕರ್​ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.


ABOUT THE AUTHOR

...view details