ಕರ್ನಾಟಕ

karnataka

ದೇಶದೆಲ್ಲೆಡೆ ಈಸ್ಟರ್​ ಸಂಭ್ರಮ... ಪ್ರಭು ಯೇಸು ಮತ್ತೆ ಹುಟ್ಟಿಬಂದ ದಿನ

ಯೇಸು ಕ್ರಿಸ್ತನ ಮರು ಹುಟ್ಟಿನ ನೆನಪಾದ ಈಸ್ಟರ್​ ಹಬ್ಬವನ್ನು ದೇಶಾದ್ಯಂತ ಇಂದು ಸಂಭ್ರಮದಿಂದ ಆಚರಿಸಲಾಯಿತು.

By

Published : Apr 21, 2019, 10:02 AM IST

Published : Apr 21, 2019, 10:02 AM IST

ದೇಶದೆಲ್ಲೆಡೆ ಈಸ್ಟರ್​ ಸಂಭ್ರಮ

ಹೈದರಾಬಾದ್​: ಕಾಲ ಪುರುಷ ಯೇಸು ಕ್ರಿಸ್ತನ ಮರು ಹುಟ್ಟಿನ ನೆನಪಾದ ಈಸ್ಟರ್​ ಹಬ್ಬವನ್ನು ದೇಶಾದ್ಯಂತ ಇಂದು ಸಂಭ್ರಮದಿಂದ ಆಚರಿಸಲಾಯಿತು. ತಮಿಳುನಾಡು, ಕೇರಳ, ಪುದುಚೆರಿ, ಮುಂಬೈ, ಕರ್ನಾಟಕ ಮೊದಲಾದ ಕಡೆ ಈಸ್ಟರ್​ ಹಬ್ಬದ ಸಂಭ್ರಮ ಮನೆ ಮಾಡಿತ್ತು.

ಶನಿವಾರ ರಾತ್ರಿಯೇ ಚರ್ಚ್​ ಎದುರು ಕ್ಯಾಂಡಲ್​ ಬೆಳಗಿದ ಭಕ್ತರು ಯೇಸುವಿನ ಮರು ಜನ್ಮವನ್ನು ಸ್ಮರಿಸಿದರು.

ಶಿಲುಬೆಗೇರುವ ಯೇಸು ಕ್ರಿಸ್ತ ಶುಕ್ರವಾರ ದೇಹ ತ್ಯಜಿಸುತ್ತಾರೆ. ಅದರ ಮುಂದಿನ ಭಾನುವಾರ ಸಮಾಧಿಯಿಂದ ಬಂದು ಮತ್ತೆ ಪ್ರಕೃತಿಯನ್ನು ಸೇರುತ್ತಾರೆ ಎಂಬುದು ಕ್ರೈಸ್ತ ಸಮುದಾಯದವರ ನಂಬಿಕೆ.

ಈ ಹಬ್ಬದಲ್ಲಿ ಮೊಟ್ಟೆಯನ್ನು ಯೇಸುವಿನ ಮರುಹುಟ್ಟಿನ ಪ್ರತಿನಿಧಿಯಾಗಿ ಸ್ಮರಿಸುವುದು ವಾಡಿಕೆ. ಮೊಟ್ಟೆಯು ಜನ್ಮದ ಪ್ರತೀಕವಾಗಿರುವುದರಿಂದ ಅವುಗಳನ್ನೇ ಕೊಡುಗೆಗಳಾಗಿ ನೀಡುವುದು ವಿದೇಶಗಳಲ್ಲಿ ಸಂಪ್ರದಾಯ.

ABOUT THE AUTHOR

...view details