ಕರ್ನಾಟಕ

karnataka

ETV Bharat / bharat

ಕೇಂದ್ರ ತಂಡದ ವರದಿ ಬಗ್ಗೆ ಭಯ ಪಡುವ ಅಗತ್ಯವಿಲ್ಲ: ಸಚಿವ ರಾಜೇಶ್ ಟೊಪೆ - ದೇಶದಲ್ಲಿನ ಕೊರೊನಾ ಹಾಟ್​ಸ್ಪಾಟ್

ಮಹಾರಾಷ್ಟ್ರ ದೇಶದ ಕೊರೊನಾ ಹಾಟ್​ಸ್ಪಾಟ್​​ ಆಗುತ್ತಿದ್ದು, ದಿನೇ ದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಕೇಂದ್ರ ಸರ್ಕಾರ ವರದಿ ಮಾಡಿದ್ದು, ಈ ವರದಿಗಳ ಬಗ್ಗೆ ಯಾರೂ ಭಯ ಪಡುವುದು ಬೇಡ ಎಂದು ಆರೋಗ್ಯ ಸಚಿವ ರಾಜೇಶ್ ಟೊಪೆ ಹೇಳಿದ್ದಾರೆ.

Rajesh Tope
ಸಚಿವ ರಾಜೇಶ್ ಟೊಪೆ

By

Published : Apr 23, 2020, 7:02 PM IST

ಮುಂಬೈ: ಮಹಾರಾಷ್ಟ್ರದಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಕೇಂದ್ರದ ಆರೋಗ್ಯ ತಂಡ ನೀಡಿರುವ ವರದಿಗಳ ಬಗ್ಗೆ ಜನರು ಭಯಭೀತರಾಗಬಾರದು ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೊಪೆ ಇಂದು ಹೇಳಿದ್ದಾರೆ. ರಾಜ್ಯದಲ್ಲಿ ಹಾಟ್ ಸ್ಪಾಟ್‌ಗಳ ಸಂಖ್ಯೆ 14 ರಿಂದ ಐದಕ್ಕೆ ಇಳಿದಿದೆ ಎಂದು ಇದೇ ವೇಳೆ ತಿಳಿದ್ದಾರೆ.

ಏಪ್ರಿಲ್ 30 ರೊಳಗಾಗಿ ಮುಂಬೈನಲ್ಲಿ 42,604 ಪ್ರಕರಣಗಳು ವರದಿಯಾಗುವ ಸಾಧ್ಯತೆ ಇದೆ. ಹಾಗೂ ಮೇ 15 ರೊಳಗೆ 6.50 ಲಕ್ಷ ರೋಗಿಗಳು ಇರಬಹುದೆಂದು ಕೇಂದ್ರ ಸರ್ಕಾರ ನೀಡಿರುವ ವರದಿಗಳ ಬಗ್ಗೆ ಭಯಪಡುವ ಅಗತ್ಯವೇ ಇಲ್ಲ ಎಂದು ಟೋಪೆ ಜನರಿಗೆ ವಿಡಿಯೋ ಭಾಷಣದ ಮೂಲಕ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಈ ಲೆಕ್ಕ ಗಣಿತದ ಮಾದರಿಯಾಗಿದೆ. ಆದಾಗ್ಯೂ, ಕೋವಿಡ್​​-19 ರಿಂದ ಉಂಟಾಗಿರುವ ಭೀತಿಯನ್ನು ಕಡಿಮೆ ಮಾಡಲು ಮತ್ತು ಪರಿಸ್ಥಿತಿಯನ್ನು ಸುಧಾರಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿರುವುದರಿಂದ ಇಲ್ಲಿ ಯಾವುದೇ ಭಯ ಪಡುವ ಅಗತ್ಯವಿಲ್ಲ ಎಂದಿದ್ದಾರೆ.

ಪ್ರಸ್ತುತ ದಿನಗಳಲ್ಲಿ ಸಾವಿನ ಪ್ರಮಾಣ ಕಡಿಮೆಯಾಗಿದೆ ಮತ್ತು ಚೇತರಿಕೆ ಪ್ರಮಾಣವು ಕೂಡ ಶೇ.13ರಷ್ಟು ಆಗಿದೆ. ಹಾಟ್‌ಸ್ಪಾಟ್‌ಗಳು ಸಹ 14 ರಿಂದ 5ನೇ ಸ್ಥಾನಕ್ಕೆ ಇಳಿದಿದೆ ಎಂದು ಹೇಳಿದರು.

ಮಹಾರಾಷ್ಟ್ರ ಸರ್ಕಾರ ಈಗಾಗಲೇ ಹೊರಗಡೆಯಿಂದ ಬಂದಿರುವವರ ಮೇಲೆ ಕಣ್ಗಾವಲು, ತಪಾಸಣೆ, ಪರೀಕ್ಷೆ ಮತ್ತು ಚಿಕಿತ್ಸೆಯನ್ನು ಹೆಚ್ಚಿಸಿದ್ದು, ಐಸಿಎಂಆರ್ ಹೊರಡಿಸಿದ ಮಾರ್ಗಸೂಚಿಗಳನ್ನು ಅನುಸರಿಸುತ್ತಿದೆ ಎಂದು ಟೋಪೆ ಸ್ಪಷ್ಟನೆ ನೀಡಿದ್ದಾರೆ.

ಮಹಾರಾಷ್ಟ್ರವು ಕೇವಲ ಐದು ಕೋವಿಡ್​-19 ಹಾಟ್‌ಸ್ಪಾಟ್‌ಗಳನ್ನು ಹೊಂದಿದ್ದು, ಮುಂಬೈ, ಮುಂಬೈ ಮೆಟ್ರೋಪಾಲಿಟನ್ ಸಿಟಿ, ಪುಣೆ, ನಾಗ್ಪುರ ಮತ್ತು ನಾಸಿಕ್ ಗಳಾಗಿವೆ. ಸದ್ಯ ನಮ್ಮ ಮರಣ ಪ್ರಮಾಣದಲ್ಲಿ ಐದನೇ ಸ್ಥಾನಕ್ಕೆ ಇಳಿದಿದ್ದು, ಶೀಘ್ರದಲ್ಲೇ ಅದು ನಾಲ್ಕು ಆಗಲಿದೆ. ನಮ್ಮ ಗುರಿ ಎಲ್ಲರನ್ನು ರಕ್ಷಿಸುವುದು ಮತ್ತು ಈ ಮರಣ ಪ್ರಮಾಣವನ್ನು ಶೂನ್ಯಕ್ಕೆ ತರುವುದಾಗಿದೆ ಎಂದು ಭರವಸೆ ನೀಡಿದ್ದಾರೆ.

ಐಸಿಎಂಆರ್ ನಿರ್ದೇಶನದಂತೆ ಪ್ಲಾಸ್ಮಾ ಚಿಕಿತ್ಸೆಯನ್ನು ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸಲಾಗಿದೆ ಎಂದು ಇದೇ ವೇಳೆ ಸಚಿವರು ತಿಳಿಸಿದರು.

ಮಹಾರಾಷ್ಟ್ರದಲ್ಲಿ ಒಟ್ಟು 431 ಹೊಸ ಕೋವಿಡ್​-19 ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಒಟ್ಟು 5,649 ಪ್ರಕರಣಗಳು ದಾಖಲಾಗಿವೆ.

ABOUT THE AUTHOR

...view details