ಕರ್ನಾಟಕ

karnataka

ಮಳೆಗಾಗಿ ಕಪ್ಪೆಗಳ ಮದುವೆ​ ಮಾಡಿಸಿದ್ರು...ವರುಣ ಅಬ್ಬರಿಸ್ತಿದ್ದಂತೆ ಡಿವೋರ್ಸ್​ ಕೂಡ ಕೊಡಿಸಿದ್ರು!

ಮಳೆಯಾಗಲೆಂದು ಕಪ್ಪೆಗಳ ಮದುವೆ ಮಾಡಿಸಿದ್ದ ಜನರು ಮಳೆ ಅಬ್ಬರಿಸುತ್ತಿದ್ದಂತೆ ಅವುಗಳಿಗೆ ಡಿವೋರ್ಸ್​​ ಕೊಡಿಸಿರುವ ಘಟನೆ ಮಧ್ಯಪ್ರದೇಶದ ಭೋಪಾಲ್​ನಲ್ಲಿ ನಡೆದಿದೆ.

By

Published : Sep 11, 2019, 9:41 PM IST

Published : Sep 11, 2019, 9:41 PM IST

Updated : Sep 11, 2019, 9:48 PM IST

ಕಪ್ಪೆಗಳಿಗೆ ಡಿವೋರ್ಸ್​​

ಭೋಪಾಲ್​​​: ತೀವ್ರ ಬರ ಪರಿಸ್ಥಿತಿಯಿಂದ ಕಂಗಾಲಾಗಿದ್ದ ಮಧ್ಯಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆರಾಯ ಅಬ್ಬರಿಸುತ್ತಿದ್ದು, ಕೆಲವು ಪ್ರದೇಶಗಳಲ್ಲಿ ನೆರೆಹಾವಳಿ ಉಂಟಾಗಿ, ಜನ-ಜೀವನ ಅಸ್ತವ್ಯಸ್ತವಾಗಿದೆ. ಈ ನಡುವೆ ಜನರು ವಿಚಿತ್ರ ಆಚರಣೆಯನ್ನೂ ನಡೆಸಿದ್ದಾರೆ.

ಉತ್ತಮ ಮಳೆಗಾಗಿ ಕಳೆದ ಕೆಲ ತಿಂಗಳ ಹಿಂದೆ ಉತ್ತಮ ಮಳೆ ಆಗಲಿ ಎಂದು ಪ್ರಾರ್ಥನೆ ನಡೆಸಿ ಕಪ್ಪೆ ಮದುವೆ ಮಾಡಿಸಿದ್ದ ಇಲ್ಲಿನ ಜನರು ಇದೀಗ ಅವುಗಳಿಗೆ ಡಿವೋರ್ಸ್​ ಕೊಡಿಸಿದ್ದಾರೆ. ಇಂತಹ ವಿಚಿತ್ರ ಘಟನೆ ನಡೆದಿರುವುದು ಮಧ್ಯಪ್ರದೇಶದ ಭೋಪಾಲ್​​ನ ಇಂದ್ರಪುರಿ ದೇವಸ್ಥಾನದಲ್ಲಿ ಸಕಲ ಪೂಜಾ ಕೈಂಕರ್ಯ ನಡೆಸಿ ಅವುಗಳಿಗೆ ವಿಚ್ಚೇದನ ಕೊಡಿಸಲಾಯಿತು. ಈ ಕಾರ್ಯಕ್ರಮವನ್ನು ಅಲ್ಲಿನ ಓಂ ಶಿವ ಶಕ್ತಿ ಮಂಡಲ ಆಯೋಜನೆ ಮಾಡಿತ್ತು.

ಕಪ್ಪೆಗಳಿಗೆ ಡಿವೋರ್ಸ್​​

ಮಣ್ಣಿನಿಂದ ನಿರ್ಮಿಸಲಾಗಿದ್ದ ಗಂಡು ಮತ್ತು ಹೆಣ್ಣು ಕಪ್ಪೆಗಳಿಗೆ ಸಾಂಪ್ರದಾಯಿಕವಾಗಿ ಮದುವೆ​ ಮಾಡಿಸಿದ್ರು. ಆದರೆ ಇದೀಗ ಅವುಗಳಿಗೆ ಎಲ್ಲ ರೀತಿಯ ಪೂಜೆ-ಪುನಸ್ಕಾರ ಮಾಡಿ ಡಿವೋರ್ಸ್​ ಕೊಡಿಸಿದ್ದಾರೆ.

ಕಳೆದ ಜುಲೈ 19ರಂದು ರಾಜ್ಯದಲ್ಲಿ ಉತ್ತಮ ಮಳೆಯಾಗಲೆಂದು ಪ್ರಾರ್ಥನೆ ಮಾಡಿ ಇದೇ ಓಂ ಶಿವ ಶಕ್ತಿ ಮಂಡಲ ಕಪ್ಪೆಗಳ ವಿವಾಹ ​ ಮಾಡಿದ್ದರು. ಇದೀಗ ರಾಜ್ಯದಲ್ಲಿ ದಾಖಲೆ ಪ್ರಮಾಣದ ಮಳೆಯಾಗಿರುವ ಕಾರಣ ಪ್ರವಾಹ ಪರಿಸ್ಥಿತಿ ಉದ್ಭವವಾಗಿದೆ. ಹೀಗಾಗಿ ಕಪ್ಪೆಗಳಿಗೆ ಡಿವೋರ್ಸ್​ ಕೊಡಿಸಲಾಗಿದೆ ಎಂದು ಹರಿಓಂ ತಿಳಿಸಿದ್ದಾರೆ. ಕಪ್ಪೆಗಳಿಗೆ ವಿಚ್ಚೇದನ ಕೊಡಿಸಿರುವುದರಿಂದ ರಾಜ್ಯದಲ್ಲಿ ಮಳೆಯ ತೀವ್ರತೆ ಕಡಿಮೆಯಾಗಬಹುದು ಎಂಬ ಭರವಸೆ ಇವರದ್ದಾಗಿದೆ.

Last Updated : Sep 11, 2019, 9:48 PM IST

ABOUT THE AUTHOR

...view details