ಕರ್ನಾಟಕ

karnataka

By

Published : Jul 22, 2020, 7:01 AM IST

ETV Bharat / bharat

ಭಾರಿ ಮಳೆಗೆ ಹಳಿ ತಪ್ಪಿದ ಜನಜೀವನ : ಧಾರ್ಚುಲಾದಲ್ಲಿ ಜನಜೀವನ ಅಸ್ತವ್ಯಸ್ತ

ಚೀನಾ ಗಡಿಯನ್ನು ಸಂಪರ್ಕಿಸುವ ಧಾರ್ಚುಲಾ - ತವಾಘಾಟ್ ರಾಷ್ಟ್ರೀಯ ಹೆದ್ದಾರಿ ಕೊಚ್ಚಿಹೋಗಿದ್ದು, ನದಿಯಂತಾಗಿ ಪರಿವರ್ತನೆ ಆಗಿದೆ.

dharchula-tawaghat-national-highway-connecting-china-border-closed-due-to-heavy-rain
ಧಾರ್ಚುಲಾದಲ್ಲಿ ಜನಜೀವನ ಅಸ್ತವ್ಯಸ್ತ

ಪಿಥೋರ್​ಗಢ(ಉತ್ತರಾಖಂಡ): ಭಾರಿ ಮಳೆಯಿಂದಾಗಿ ಪಿಥೋರ್​ಗಢ ಜಿಲ್ಲೆಯ ಧಾರ್ಚುಲಾದಲ್ಲಿ ಸಾಮಾನ್ಯ ಜೀವನ ಸಂಪೂರ್ಣವಾಗಿ ಹಳಿ ತಪ್ಪಿದೆ.

ಚೀನಾ ಗಡಿಯನ್ನು ಸಂಪರ್ಕಿಸುವ ಧಾರ್ಚುಲಾ - ತವಾಘಾಟ್ ರಾಷ್ಟ್ರೀಯ ಹೆದ್ದಾರಿ ಕೊಚ್ಚಿಹೋಗಿದ್ದು, ನದಿಯಂತಾಗಿ ಪರಿವರ್ತನೆ ಆಗಿದೆ. ಭಾರಿ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ ಬಂದ್​ ಆಗಿರುವುದರಿಂದ ಚೀನಾಗಡಿ ಉದ್ದಕ್ಕೂ ಹಲವು ಗ್ರಾಮಗಳು ಸಂಪರ್ಕ ಇಲ್ಲದಂತಾಗಿ ಸಂಕಷ್ಟಕ್ಕೀಡಾಗಿವೆ.

10 ಸಾವಿರ ಜನರ ದೈನಂದಿನ ಅವಶ್ಯಕತೆಗಳನ್ನ ಪೂರೈಸಿಕೊಳ್ಳುವುದು ಕಷ್ಟವಾಗಿದೆ. ಇನ್ನು ಹಿಮ್ಕೋಲಾ ಸೇತುವೆ ಉಕ್ಕಿ ಹರಿಯುವುದರಿಂದ ಕಾಂಚೋತಿ ನಾರಾಯಣ್ ಆಶ್ರಮ ಮೋಟಾರು ಮಾರ್ಗವನ್ನು ಮುಚ್ಚಲಾಗಿದೆ. ಇದರಿಂದಾಗಿ ಹಿಮ್ಕೋಲಾ ಗ್ರಾಮಸ್ಥರು ಬೇರೊಂದು ಸೇತುವೆ ನಿರ್ಮಿಸಿಕೊಂಡಿದ್ದಾರೆ.

ABOUT THE AUTHOR

...view details