ಅಹಮದಾಬಾದ್ (ಗುಜರಾತ್): ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ರಾಜ್ಕೋಟ್ನ ಕಂಪನಿಯೊಂದು ಧಮನ್ -1 ಎಂಬ ಸ್ಥಳೀಯ ವೆಂಟಿಲೇಟರ್ ತಯಾರಿಸಿತ್ತು. ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಈ ಕುರಿತು ಮಾಹಿತಿ ನೀಡಿದ್ದರು.
ಆದರೆ, ಇತ್ತೀಚೆಗೆ ವೆಂಟಿಲೇಟರ್ನ ಸಾಮರ್ಥ್ಯದ ಕುರಿತು ವಿವಾದವೊಂದು ಭುಗಿಲೆದ್ದಿತು. ಇದಕ್ಕೆ ಸಿವಿಲ್ ಆಸ್ಪತ್ರೆ ಅಧೀಕ್ಷಕ ಡಾ.ಎಂ.ಎಂ.ಪ್ರಭಾಕರ್ ಸ್ಪಷ್ಟನೆ ನೀಡಿದ್ದು, ಕೊರೊನಾ ವೈರಸ್ ರೋಗಿಗಳ ಚಿಕಿತ್ಸೆಯಲ್ಲಿ ಸ್ಥಳೀಯ ವೆಂಟಿಲೇಟರ್ ಧಮನ್ -1 ಮತ್ತು ಉನ್ನತ ಮಟ್ಟದ ಆಧುನಿಕ ವೆಂಟಿಲೇಟರ್ ಎರಡೂ ಉಪಯುಕ್ತವಾಗಿವೆ ಎಂದಿದ್ದಾರೆ.