ಕರ್ನಾಟಕ

karnataka

By

Published : Mar 20, 2020, 5:16 PM IST

ETV Bharat / bharat

'ಹೋಟೆಲ್ ರಾಜತಾಂತ್ರಿಕತೆ'ಯಿಂದ ಪ್ರಜಾಪ್ರಭುತ್ವಕ್ಕೆ ಸೋಲು: ಕಾಂಗ್ರೆಸ್​​​ ಹೇಳಿಕೆ

ಮುಖ್ಯಮಂತ್ರಿ ಸ್ಥಾನಕ್ಕೆ ಕಮಲ್​ ನಾಥ್​ ರಾಜೀನಾಮೆ ನೀಡಿದ ಬಳಿಕ, ದೇಶದ ಪ್ರಜಾಪ್ರಭುತ್ವವನ್ನು 'ಹೋಟೆಲ್ ರಾಜತಾಂತ್ರಿಕತೆ' ಮೂಲಕ ಸೋಲಿಸಲಾಗುತ್ತಿದೆ ಎಂದು ಕಾಂಗ್ರೆಸ್​​ ಕರೆದಿದ್ದು, ಪ್ರಸ್ತುತ ಬೆಳವಣಿಗೆಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

hotel diplomacy
'ಹೋಟೆಲ್ ರಾಜತಾಂತ್ರಿಕತೆ'ಯಿಂದ ಪ್ರಜಾಪ್ರಭುತ್ವಕ್ಕೆ ಸೋಲು

ನವದೆಹಲಿ: ದೇಶದ ಪ್ರಜಾಪ್ರಭುತ್ವವನ್ನು 'ಹೋಟೆಲ್ ರಾಜತಾಂತ್ರಿಕತೆ'ಯಿಂದ ಸೋಲಿಸಲಾಗುತ್ತಿದೆ ಎಂದು ಕಾಂಗ್ರೆಸ್​​ ಹೇಳಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಕಮಲ್​ ನಾಥ್​ ರಾಜೀನಾಮೆ ನೀಡಿದ ಬಳಿಕ ಕಾಂಗ್ರೆಸ್​​ನಿಂದ ಈ ಹೇಳಿಕೆ ಬಂದಿದೆ.

ಶುಕ್ರವಾರ ಸಂಜೆ 5 ಗಂಟೆಯೊಳಗೆ ಬಹುಮತ ಸಾಬೀತು ಪಡಿಸಬೇಕೆಂದು ನಿನ್ನೆ ಸುಪ್ರೀಂಕೋರ್ಟ್​ ರಾಜ್ಯ ವಿಧಾನಸಭಾ ಸ್ಫೀಕರ್​​ಗೆ ಸೂಚಿಸಿತ್ತು. ಈ ಆದೇಶ ಬಂದ ಒಂದು ದಿನದ ನಂತರ ಕಮಲ್​ ನಾಥ್​​ ರಾಜೀನಾಮೆ ನೀಡಿದ್ದಾರೆ. ಸುಮಾರು 15 ತಿಂಗಳ ಕಮಲ್​ ನಾಥ್ ಅವಧಿ ಈ ಮೂಲಕ ಮುಕ್ತಾಯವಾಗಿದೆ.

"ಇಂದು ಪ್ರಜಾಪ್ರಭುತ್ವವನ್ನು ಹೋಟೆಲ್ ರಾಜತಾಂತ್ರಿಕತೆಯಿಂದ ಸೋಲಿಸಲಾಯಿತು" ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ಟ್ವೀಟ್​ ಮಾಡಿದ್ದಾರೆ.

ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮಾತನಾಡಿ, ಪ್ರಜಾಪ್ರಭುತ್ವವನ್ನು ಹಗಲಲ್ಲಿ ಹತ್ಯೆ ಮಾಡಲಾಗಿದೆ. ಅಧಿಕಾರದ ಆಸೆಗಾಗಿ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರವನ್ನು ಕಿತ್ತುಹಾಕುವುದು ಬಿಜೆಪಿಗೆ ಅಭ್ಯಾಸವಾಗಿದೆ ಎಂದು ಅವರು ಟ್ವೀಟರ್​​ನಲ್ಲಿ ತಿಳಿಸಿದ್ದಾರೆ.

"ಮಧ್ಯಪ್ರದೇಶದ ಸಿಎಂ ಕಮಲ್ ನಾಥ್ ರಾಜೀನಾಮೆ ನೀಡುತ್ತಾರೆ. ಅದರೊಂದಿಗೆ ಪ್ರಜಾಪ್ರಭುತ್ವ ಹಾಗೂ ಚುನಾವಣೆಯ ಪರಿಕಲ್ಪನೆಯು ಸಾಯುತ್ತದೆ" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅವಿನಾಶ್ ಪಾಂಡೆ ಹೇಳಿದ್ದಾರೆ.

ABOUT THE AUTHOR

...view details