ನವದೆಹಲಿ:ದೆಹಲಿ ಹಿಂಸಾಚಾರದಲ್ಲಿ ಸಾವಿಗೀಡಾದ ಇನ್ನೂ ಮೂವರ ಶವಗಳನ್ನು ಕಾಲುವೆಯಿಂದ ಹೊರತೆಗೆಯಲಾಗಿದೆ ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದೆಹಲಿ ಹಿಂಸಾಚಾರ: ಮತ್ತೆ ಮೂರು ಶವಗಳು ಮೋರಿಯಲ್ಲಿ ಪತ್ತೆ - ಗೋಕಲ್ಪುರಿಯ ಕಾಲುವೆ
ದೆಹಲಿ ಹಿಂಸಾಚಾರದಲ್ಲಿ ಸಾವಿಗೀಡಾದ ಇನ್ನೂ ಮೂವರ ಶವಗಳನ್ನು ಕಾಲುವೆಯಿಂದ ಹೊರತೆಗೆಯಲಾಗಿದೆ ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದೆಹಲಿಯಲ್ಲಿ ಮತ್ತೆ ಮೂರು ಶವಗಳು ಪತ್ತೆ
ಕಾಲುವೆಗಳಿಂದ ಮೂರು ಶವಗಳನ್ನು ಹೊರತೆಗೆದ ಪೊಲೀಸರು
ಗೋಕಲ್ಪುರಿಯ ಕಾಲುವೆಯಿಂದ ಒಂದು ಹಾಗೂ ಭಾಗೀರಥಿ ವಿಹಾರ್ ಕಾಲುವೆಯಿಂದ ಎರಡು ಶವಗಳನ್ನು ಹೊರತೆಗೆಯಲಾಗಿರುವುದಾಗಿ ಪೊಲೀಸರು ಖಚಿತಪಡಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.
ಮೂರು ದಿನಗಳ ಕಾಲ ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಶನಿವಾರದ ವರೆಗೆ ಒಟ್ಟು 42 ಮಂದಿ ಮೃತಪಟ್ಟಿದ್ದರು. ಇದೀಗ ಮತ್ತೆ ಮೂರು ಶವಗಳು ಪತ್ತೆಯಾಗಿವೆ.