ಕರ್ನಾಟಕ

karnataka

By

Published : Jul 16, 2019, 6:54 PM IST

ETV Bharat / bharat

ಗುರುಪೂರ್ಣಿಮೆ ದಿನ ಪೇಜಾವರ ಶ್ರೀ ಜತೆ ಮೋದಿ... ವಿಶೇಷ ದಿನ ಎಂದು ನಮೋ ಟ್ವೀಟ್​!

ಉಡುಪಿಯ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರನ್ನ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ್ದಾರೆ.

ಪೇಜಾವರ ಶ್ರೀ ಜತೆ ಮೋದಿ

ನವದೆಹಲಿ: ಗುರುಪೂರ್ಣಿಮೆ ದಿನದ ನಿಮಿತ್ತ ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಅವರನ್ನ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿದ್ದಾರೆ.

ಪೇಜಾವರ ಶ್ರೀ ಜತೆ ಮೋದಿ ಮಾತು

ಇದಕ್ಕೆ ಸಂಬಂಧಿಸಿದಂತೆ ಟ್ವೀಟ್​ ಮಾಡಿರುವ ನರೇಂದ್ರ ಮೋದಿ ಗುರುಪೂರ್ಣಿಮೆ ದಿನದ ಅಂಗವಾಗಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರೊಂದಿಗೆ ಕಾಲ ಕಳೆದಿರುವುದು ನಿಜಕ್ಕೂ ಅದ್ಭುತ. ಅವರಿಂದ ಕಲಿಯುವುದು ಮತ್ತು ಅವರ ಆಲೋಚನೆಗಳನ್ನು ಕೇಳುವುದು ಬಹಳ ವಿನಮ್ರ ಅನುಭವ ಎಂದು ತಮ್ಮ ಟ್ವಿಟರ್​​ನಲ್ಲಿ ಬರೆದುಕೊಂಡಿದ್ದಾರೆ.

ದೆಹಲಿಯ ಪ್ರಧಾನಿ ಕಚೇರಿಯಲ್ಲಿ ವಿಶ್ವೇಶತೀರ್ಥ ಸ್ವಾಮೀಜಿಯವರನ್ನ ಪ್ರಧಾನಿ ಮೋದಿ ಭೇಟಿಯಾಗಿದ್ದಾರೆ.

ABOUT THE AUTHOR

...view details