ಕರ್ನಾಟಕ

karnataka

ETV Bharat / bharat

ನಿರ್ಭಯ ಪ್ರಕರಣ: ಆರೋಪಿ ಸಲ್ಲಿಸಿದ್ದ ಕ್ಷಮಾಪಣ ಅರ್ಜಿ ತಿರಸ್ಕರಿಸಿದ ದೆಹಲಿ ಸರ್ಕಾರ - ದೆಹಲಿ ಸರ್ಕಾರದಿಂದ ಕ್ಷಮಾಪಣಾ ಅರ್ಜಿ ತಿರಸ್ಕಾರ

ನಿರ್ಭಯ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಮುಕೇಶ್ ಕುಮಾರ್ ಸಿಂಗ್ ಸಲ್ಲಿಸಿದ್ದ ಕ್ಷಮಾಪಣಾ ಅರ್ಜಿಯನ್ನು ದೆಹಲಿ ಸರ್ಕಾರ ತಿರಸ್ಕರಿಸಿದೆ.

Delhi government rejects Nirbhaya rape convict's mercy plea,ಕ್ಷಮಾಪಣ ಅರ್ಜಿ ತಿರಸ್ಕರಿಸಿದ ದೆಹಲಿ ಸರ್ಕಾರ
ಕ್ಷಮಾಪಣ ಅರ್ಜಿ ತಿರಸ್ಕರಿಸಿದ ದೆಹಲಿ ಸರ್ಕಾರ

By

Published : Jan 16, 2020, 1:02 PM IST

ನವದೆಹಲಿ:ನಿರ್ಭಯಾ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾದ ಆರೋಪಿಗಳಲ್ಲಿ ಒಬ್ಬನಾದ ಮುಕೇಶ್ ಕುಮಾರ್ ಸಿಂಗ್​ ಸಲ್ಲಿಸಿದ್ದ ಕ್ಷಮಾಪಣ ಅರ್ಜಿಯನ್ನು ದೆಹಲಿ ಸರ್ಕಾರ ತಿರಸ್ಕರಿಸಿದೆ.

ಮಂಗಳವಾರ ಮುಕೇಶ್​ ಕುಮಾರ್​ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನ ಸುಪ್ರೀಂಕೋರ್ಟ್​ ತಿರಸ್ಕರಿಸಿತ್ತು. ಈ ಬೆನ್ನಲ್ಲೆ ಮುಕೇಶ್ ಮುಮಾರ್ ಕ್ಷಮಾಪಣೆ ಕೋರಿ ದೆಹಲಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಇದೀಗ ದೆಹಲಿ ಸರ್ಕಾರ ಕ್ಷಮಾಪಣ ಅರ್ಜಿಯನ್ನ ತಿರಸ್ಕರಿಸಿದ್ದು, ಲೆಫ್ಟಿನೆಂಟ್​ ​ ಗವರ್ನರ್​ ಈ ಅರ್ಜಿಯನ್ನ ಕೇಂದ್ರ ಗೃಹ ಇಲಾಖೆಗೆ ಕಳುಹಿಸಿಕೊಟ್ಟಿದ್ದಾರೆ.

ಕೇಂದ್ರ ಗೃಹ ಇಲಾಖೆ ಈ ಬಗ್ಗೆ ಪರಿಶೀಲನೆ ನಡೆಸಿ ರಾಷ್ಟ್ರಪತಿಗೆ ಪತ್ರವನ್ನ ಕಳುಹಿಸಿ ಕೊಡಲಿದೆ. ನಾಲ್ವರು ಅಪರಾಧಿಗಳಿಗೆ ಜನವರಿ 22 ರಂದು ಮರಣದಂಡನೆ ವಿಧಿಸಿ ಕೋರ್ಟ್ ತೀರ್ಪುನೀಡಿತ್ತು.

ABOUT THE AUTHOR

...view details