ಕರ್ನಾಟಕ

karnataka

ETV Bharat / bharat

ವಿಧಾನಸಭೆ ಸ್ಪೀಕರ್​​ಗೆ ಆರು ತಿಂಗಳ ಜೈಲೂಟ: ಈ ಕೋರ್ಟ್​​ನ​ ಮಹತ್ವದ ತೀರ್ಪು - ದೆಹಲಿ ಕೋರ್ಟ್​ ಮಹತ್ವದ ಆದೇಶ

ಬಿಜೆಪಿ ಮುಖಂಡನ ಮನೆಗೆ ನುಗ್ಗಿ ಗಲಾಟೆ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಕೋರ್ಟ್​ ಮಹತ್ವದ ಆದೇಶ ಹೊರಹಾಕಿದ್ದು, ದೆಹಲಿ ವಿಧಾನಸಭಾಧ್ಯಕ್ಷರಿಗೆ 6 ತಿಂಗಳ ಜೈಲು ಶಿಕ್ಷೆ ನೀಡಿ ಆದೇಶ ಹೊರಡಿಸಿದೆ.

ದೆಹಲಿ ಸ್ಪೀಕರ್​​​ ರಾಮ್​ ನಿವಾಸ್​ ಗೋಯಲ್​

By

Published : Oct 18, 2019, 5:20 PM IST

ನವದೆಹಲಿ:ಬಿಜೆಪಿ ಮುಖಂಡ ಮನೀಷ್​ ಗಾಯ್​ ನಿವಾಸದೊಳಗೆ ನುಗ್ಗಿ ಗಲಾಟೆ ಮಾಡಿರುವ ಆರೋಪಕ್ಕಾಗಿ ದೆಹಲಿ ವಿಧಾನಸಭೆ ಸ್ಪೀಕರ್​ ಹಾಗೂ ಆಮ್​ ಆದ್ಮಿ ಪಕ್ಷದ ಶಾಸಕ ರಾಮ್​ ನಿವಾಸ್​ ಗೋಯಲ್​ ವಿರುದ್ಧ ಡೆಲ್ಲಿ ಕೋರ್ಟ್​ ಕಠಿಣ ಕ್ರಮ ಕೈಗೊಂಡಿದೆ.

ನಿವಾಸದೊಳಗೆ ನುಗ್ಗಿ ಗಲಭೆ ಮತ್ತು ನೋವನ್ನುಂಟು ಮಾಡಿರುವ ಆರೋಪದ ಮೇಲೆ ಅವರಿಗೆ 6 ತಿಂಗಳ ಕಾಲ ಜೈಲುಶಿಕ್ಷೆ ವಿಧಿಸಿ ಕೋರ್ಟ್​ ಮಹತ್ವದ ಆದೇಶ ಹೊರಹಾಕಿದೆ.

2015ರ ದೆಹಲಿ ವಿಧಾನಸಭೆ ಚುನಾವಣೆ ವೇಳೆ ಎಎಪಿ ಶಾಸಕ ರಾಮ್​ ನಿವಾಸ್​ ತನ್ನ ಬೆಂಬಲಿಗರೊಂದಿಗೆ ಬಿಜೆಪಿ ಅಭ್ಯರ್ಥಿ ಮನೀಷ್​ ಗಾಯ್​ ನಿವಾಸದೊಳಗೆ ನುಗ್ಗಿ ಗಲಾಟೆ ಮಾಡಿದ್ದರು. ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ದೂರು ದಾಖಲು ಮಾಡಿದ್ದರು. ಕಳೆದ ನಾಲ್ಕು ವರ್ಷಗಳಿಂದ ವಾದ - ಪ್ರತಿವಾದ ಆಲಿಸಿರುವ ಕೋರ್ಟ್​ ಇಂದು ಮಹತ್ವದ ಆದೇಶ ಹೊರಹಾಕಿದೆ.

ಆದರೆ, ತಮ್ಮ ಮೇಲೆ ಕೇಳಿ ಬಂದಿರುವ ಆರೋಪ ತಳ್ಳಿ ಹಾಕಿದ್ದ ಆಮ್​ ಆದ್ಮಿ ಪಕ್ಷದ ಶಾಸಕ ರಾಮ್​ ನಿವಾಸ್​ ತಾವು ಆ ರೀತಿಯಾಗಿ ನಡೆದುಕೊಂಡಿಲ್ಲ ಎಂದು ಹೇಳಿಕೆ ನೀಡಿದ್ದರು.

ABOUT THE AUTHOR

...view details