ನವದೆಹಲಿ: ಕೊರೊನಾ ವೈರಸ್ ನಿಯಂತ್ರಣಕ್ಕೆ ದೇಶದಲ್ಲಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಎರಡು ದಿನದ ಹಿಂದೆ ಕೇಂದ್ರ ಸರ್ಕಾರ ಕೆಲ ಸಡಿಲಿಕೆಗಳನ್ನು ಮಾಡಿ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಈ ಮಧ್ಯೆ ದೆಹಲಿಯ ತೀಸ್ ಹಜಾರಿ ಕೋರ್ಟ್ನಲ್ಲಿ ಸ್ಟ್ಯಾಂಪ್(ಅಂಚೆ ಚೀಟಿ) ಬಳಕೆಗೆ ಸಂಬಂಧಿಸಿದಂತೆ ಹೊಸ ಆದೇಶ ಹೊರಡಿಸಲಾಗಿದೆ.
ಕೊರೊನಾ ಆತಂಕ... ಕೋರ್ಟ್ ದಾಖಲೆ ಪತ್ರಗಳಿಗೆ ಸ್ಟ್ಯಾಂಪ್ ಹಚ್ಚುವ ಮುನ್ನ ಈ ಸುದ್ದಿ ಓದಿ - ಕೊರೊನಾ ಆತಂಕ
ದೆಹಲಿ ತೀಸ್ ಹಜಾರಿ ಕೋರ್ಟ್ ಸ್ಟ್ಯಾಂಪ್(ಅಂಚೆ ಚೀಟಿ) ಬಳಕೆಗೆ ಸಂಬಂಧಿಸಿದಂತೆ ಹೊಸ ಆದೇಶ ಹೊರಡಿಸಿದೆ. ನ್ಯಾಯಾಲಯದ ಶುಲ್ಕ ಮತ್ತು ಅರ್ಜಿಗಳಿಗೆ ಬಳಸುವ ಅಂಚೆಚೀಟಿಗಳನ್ನು ಮುದ್ರೆ ಮಾಡಲು ಬಳಸಬಾರದು ಎಂದು ಹೇಳಿದೆ.
![ಕೊರೊನಾ ಆತಂಕ... ಕೋರ್ಟ್ ದಾಖಲೆ ಪತ್ರಗಳಿಗೆ ಸ್ಟ್ಯಾಂಪ್ ಹಚ್ಚುವ ಮುನ್ನ ಈ ಸುದ್ದಿ ಓದಿ Stamp news](https://etvbharatimages.akamaized.net/etvbharat/prod-images/768-512-7263153-thumbnail-3x2-smk.jpg)
ಕೊರೊನಾ ಆತಂಕ
ಹೌದು, ಯಾವುದೇ ಲೆಕ್ಕಪತ್ರ, ಕೋರ್ಟ್ಗೆ ಬರುವ ಪ್ರಕರಣಗಳಿಗೆ ಸಂಬಂಧಿಸಿದ ದಾಖಲೆ ಪತ್ರಗಳಿಗೆ ಸ್ಟ್ಯಾಂಪ್ ಬಳಸುವಾಗ ಅದಕ್ಕೆ ಎಂಜಲು ಹಚ್ಚಿ ಬಳಸದಂತೆ ಜಿಲ್ಲಾ ನ್ಯಾಯಾಧೀಶ ಗಿರೀಶ್ ಕಥ್ಪಾಲಿಯಾ ಆದೇಶ ಹೊರಡಿಸಿದ್ದಾರೆ. ಕೋರ್ಟ್ನ ಸಿಬ್ಬಂದಿ ಮತ್ತು ವಕೀಲರಿಗೂ ಈ ನಿಯಮ ಅನ್ವಯಿಸಲಿದೆ ಎಂದು ಅವರು ಹೇಳಿದ್ದಾರೆ.
ನ್ಯಾಯಾಲಯದ ಶುಲ್ಕ ಮತ್ತು ಅರ್ಜಿಗಳಿಗೆ ಬಳಸುವ ಅಂಚೆಚೀಟಿಗಳನ್ನು ಮುದ್ರೆ ಮಾಡಲು ಬಳಸಬಾರದು ಎಂದು ಹೇಳಿದೆ. ಅಂಚೆ ಚೀಟಿಗಳಿಗೆ ಎಂಜಲು ಹಚ್ಚುವ ಬದಲು ಪ್ಲಾಸ್ಟಿಕ್ ಸ್ಪಂಜ್ ಹೊಂದಿರುವ ಡ್ಯಾಂಪರ್ ಪ್ಯಾಡ್ ಬಳಸುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ.