ಕರ್ನಾಟಕ

karnataka

By

Published : Apr 7, 2020, 3:50 PM IST

ETV Bharat / bharat

ಕೋವಿಡ್​-19 ಹೋರಾಟ.. 5T ಕ್ರಿಯಾಯೋಜನೆ ರೂಪಿಸಿದ ದೆಹಲಿ ಸರ್ಕಾರ..

ಕೊರೊನಾ ವೈರಸ್​ ಹರಡುವಿಕೆ ತಡೆಗಟ್ಟಲು ಐದು ಅಂಶಗಳ 5T ಕ್ರಿಯಾಯೋಜನೆಯನ್ನು ರೂಪಿಸಲಾಗಿದ್ದು, ಸೋಂಕು ಪತ್ತೆ (testing), ಹುಡುಕುವಿಕೆ (tracing), ಚಿಕಿತ್ಸೆ (treatment), ತಂಡವಾಗಿ ಕೆಲಸ (team work), ಟ್ರ್ಯಾಕಿಂಗ್​ (tracking) ಹಾಗೂ ನಿಗಾ ವಹಿಸುವಿಕೆಗಳನ್ನು ಕ್ರಿಯಾಯೋಜನೆ ಒಳಗೊಂಡಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

Arvind Kejriwal
Arvind Kejriwal

ಹೊಸದೆಹಲಿ: ರಾಜಧಾನಿ ದೆಹಲಿಯಲ್ಲಿ ಕೊರೊನಾ ವೈರಸ್​ ಹರಡುವಿಕೆ ತಡೆಗೆ ಐದು ಅಂಶಗಳ 5T ಕ್ರಿಯಾಯೋಜನೆಯನ್ನು ರೂಪಿಸಲಾಗಿದೆ. ಮಹಾನಗರದ ಕೋವಿಡ್-19​ ಹಾಟ್​ಸ್ಪಾಟ್​ ಪ್ರದೇಶಗಳಲ್ಲಿ 1 ಲಕ್ಷ ಮಾದರಿ ಟೆಸ್ಟ್​​ ಕೈಗೊಳ್ಳಲಾಗುವುದು ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಅವರು, ದೆಹಲಿ ಸರ್ಕಾರದ ಲೋಕನಾಯಕ ಜಯಪ್ರಕಾಶ ನಾರಾಯಣ ಆಸ್ಪತ್ರೆ, ಜಿಬಿ ಪಂತ್ ಆಸ್ಪತ್ರೆ, ರಾಜೀವ ಗಾಂಧಿ ಸೂಪರ್ ಸ್ಪೆಷಲಿಟಿ ಆಸ್ಪತ್ರೆಗಳನ್ನು ಕೋವಿಡ್-19​ ಚಿಕಿತ್ಸೆಗೆ ಮೀಸಲು ಆಸ್ಪತ್ರೆಗಳನ್ನಾಗಿ ಮಾಡಲಾಗಿದೆ ಎಂದರು.

ಪ್ರಸ್ತುತ ನಗರದ ವಿವಿಧ ಆಸ್ಪತ್ರೆಗಳಲ್ಲಿ 2,950 ಬೆಡ್​ಗಳನ್ನು ಕೋವಿಡ್​ಗಾಗಿ ಕಾಯ್ದಿರಿಸಲಾಗಿದೆ. ಒಂದೊಮ್ಮೆ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾದಲ್ಲಿ 12,000 ಹೋಟೆಲ್​ ಕೋಣೆಗಳನ್ನು ದೆಹಲಿ ಸರ್ಕಾರ ಸ್ವಾಧೀನ ಪಡಿಸಿಕೊಳ್ಳಲಿದೆ. ತಬ್ಲಿಘಿ ಜಮಾತ್​ನಲ್ಲಿ ಪಾಲ್ಗೊಂಡಿದ್ದವರ ಮೊಬೈಲ್​ ಸಂಖ್ಯೆಗಳನ್ನು ಪೊಲೀಸರಿಗೆ ನಾವು ನೀಡಲಿದ್ದೇವೆ. ಇದರಿಂದ ಅವರನ್ನು ಹುಡುಕಲು ಸಾಧ್ಯವಾಗಲಿದೆ ಎಂದು ಕೇಜ್ರಿವಾಲ್ ಮಾಹಿತಿ ನೀಡಿದರು.

5T ಕ್ರಿಯಾಯೋಜನೆಯು ಸೋಂಕು ಪತ್ತೆ (testing), ಹುಡುಕುವಿಕೆ (tracing), ಚಿಕಿತ್ಸೆ (treatment), ತಂಡವಾಗಿ ಕೆಲಸ (team work), ಟ್ರ್ಯಾಕಿಂಗ್​ (tracking) ಹಾಗೂ ನಿಗಾ ವಹಿಸುವಿಕೆಗಳನ್ನು ಒಳಗೊಂಡಿದೆ. ಸಂಭವನೀಯ 30 ಸಾವಿರ ಕೋವಿಡ್​-19 ಸೋಂಕಿತ ಪ್ರಕರಣಗಳನ್ನು ನಿಭಾಯಿಸುವಷ್ಟು ಸಿದ್ಧತೆಗಳನ್ನು ಸರ್ಕಾರ ಈಗಾಗಲೇ ಮಾಡಿಕೊಂಡಿದೆ. ಹೆಚ್ಚುವರಿಯಾಗಿ ಇನ್ನೂ 8 ಸಾವಿರ ಬೆಡ್​ಗಳ ವ್ಯವಸ್ಥೆ ಮಾಡಲಾಗುವುದು ಎಂದು ಕೇಜ್ರಿವಾಲ್​ ವಿವರಿಸಿದರು.

ABOUT THE AUTHOR

...view details