ಕರ್ನಾಟಕ

karnataka

ETV Bharat / bharat

ಯುಪಿ ಸಿಎಂಗೆ ಜೀವ ಬೆದರಿಕೆ ಹಾಕಿದ್ದ ಪ್ರಕರಣ: ಯುವಕನ ಜಾಮೀನು ಅರ್ಜಿ ತಿರಸ್ಕೃತ - ಆರೋಪಿ ಕಮ್ರಾನ್​ ಅಮಿನ್​​ ಖಾನ್

ಸಿಎಂ ಯೋಗಿ ಆದಿತ್ಯನಾಥ ಅವರನ್ನ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಹಿನ್ನೆಲೆ ಆರೋಪಿ ಕಮ್ರಾನ್​ ಅಮಿನ್​​ ಖಾನ್​ನನ್ನು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮುಂಬೈನಲ್ಲಿ ಮೇ 23 ರಂದು ಬಂಧಿಸಿತ್ತು.

Death threat to Uttar Pradesh CM: Lucknow court denies bail to accused
ಯುಪಿ ಸಿಎಂ

By

Published : Jun 23, 2020, 6:32 AM IST

ಲಖನೌ: ಯೋಗಿ ಆದಿತ್ಯನಾಥ್ ಅವರಿಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪಿಯ ಜಾಮೀನು ಅರ್ಜಿಯನ್ನು ಲಖನೌ ನ್ಯಾಯಾಲಯ ತಿರಸ್ಕರಿಸಿದೆ.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ದುರ್ಗ್ ನಾರಾಯಣ್ ಸಿಂಗ್ ವಿಚಾರಣೆ ನಡೆಸಿ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಸಿಎಂ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಹಿನ್ನೆಲೆ ಆರೋಪಿ ಕಮ್ರಾನ್​ ಅಮಿನ್​​ ಖಾನ್​ನನ್ನು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮುಂಬೈನಲ್ಲಿ ಮೇ 23 ರಂದು ಬಂಧಿಸಿತ್ತು.

ಮೇ . 22 ರಂದು ಈ ಬಗ್ಗೆ ಯುಪಿ ಪೊಲೀಸರಿಗೆ ಮಾಹಿತಿ ತಲುಪಿತ್ತು. ಈ ಮಾಹಿತಿ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಯುವಕನನ್ನು ಬಂಧಿಸಿ ವಿಚಾರಣೆಗೊಳಪಡಿಸಿತ್ತು.

ABOUT THE AUTHOR

...view details