ಕರ್ನಾಟಕ

karnataka

By

Published : Oct 22, 2020, 8:47 PM IST

ETV Bharat / bharat

ಬಿಹಾರ, ತಮಿಳುನಾಡು ಆಯ್ತು ಇದೀಗ ಮಧ್ಯಪ್ರದೇಶದಲ್ಲೂ ಕೋವಿಡ್​ ಲಸಿಕೆ ಫ್ರೀ ವಿತರಣೆ!

ಕೊರೊನಾ ಲಸಿಕೆ ಮಾರುಕಟ್ಟೆಗೆ ರಿಲೀಸ್​ ಆಗುವುದಕ್ಕೂ ಮುಂಚಿತವಾಗಿ ವಿವಿಧ ರಾಜ್ಯಗಳು ಉಚಿತವಾಗಿ ಜನರಿಗೆ ನೀಡುವ ಭರವಸೆ ನೀಡಲು ಶುರು ಮಾಡಿವೆ.

Shivraj Singh Chouhan
Shivraj Singh Chouhan

ಭೋಪಾಲ್​(ಮಧ್ಯಪ್ರದೇಶ):ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್​ ಹಾವಳಿ ಜೋರಾಗಿದೆ. ಇಲ್ಲಿಯವರೆಗೆ ಅದರ ವಿರುದ್ಧ ಹೋರಾಡಲು ಯಾವುದೇ ಲಸಿಕೆ ಕಂಡು ಹಿಡಿದಿಲ್ಲ. ಇದರ ಮಧ್ಯೆ ವಿವಿಧ ರಾಜ್ಯಗಳು ಜನರಿಗೆ ಫ್ರೀಯಾಗಿ ಲಸಿಕೆ ನೀಡುವ ಭರವಸೆ ನೀಡುತ್ತಿವೆ.

ಕೋವಿಡ್​ ಲಸಿಕೆ ಸಿದ್ಧವಾಗ್ತಿದ್ದಂತೆ ತಮಿಳುನಾಡಿನ ಎಲ್ಲರಿಗೂ ಉಚಿತ ವಿತರಣೆ: ಪಳನಿಸ್ವಾಮಿ ಅಭಯ!

ಬಿಹಾರ ಚುನಾವಣೆಗೋಸ್ಕರ ಭಾರತೀಯ ಜನತಾ ಪಾರ್ಟಿ ಪ್ರಣಾಳಿಕೆ ರಿಲೀಸ್​ ಮಾಡಿದ್ದು, ಅದರಲ್ಲಿ ರಾಜ್ಯದ ಜನರಿಗೆ ಕೋವಿಡ್​ ಲಸಿಕೆ ಉಚಿತವಾಗಿ ನೀಡುವ ಭರವಸೆ ನೀಡಿದೆ. ಇದರ ಮಧ್ಯೆ ತಮಿಳುನಾಡಿನಲ್ಲೂ ಉಚಿತವಾಗಿ ನೀಡುವುದಾಗಿ ಘೋಷಣೆ ಮಾಡಲಾಗಿದೆ. ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಕೋವಿಡ್​ ಲಸಿಕೆ ರಿಲೀಸ್​​ ಆಗುತ್ತಿದ್ದಂತೆ ರಾಜ್ಯದ ಜನರಿಗೆ ಉಚಿತವಾಗಿ ಲಸಿಕೆ ನೀಡುವ ಘೋಷಣೆ ಮಾಡಿದ್ದಾರೆ.

ಇದೀಗ ಮಧ್ಯಪ್ರದೇಶ ಸಿಎಂ ಶಿವರಾಜ್​ ಸಿಂಗ್ ಚೌಹಾಣ್​ ಕೂಡ ರಾಜ್ಯದ ಜನರಿಗೆ ಕೊರೊನಾ ಲಸಿಕೆ ಫ್ರೀಯಾಗಿ ನೀಡುವ ಭರವಸೆ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಟ್ವೀಟ್​ ಮಾಡಿರುವ ಶಿವರಾಜ್​ ಸಿಂಗ್​ ಚೌಹಾಣ್​, ಕೋವಿಡ್ ವಿರುದ್ಧ ಹೋರಾಡಲು ಅನೇಕ ಮಹತ್ವದ ನಿರ್ಧಾರ ಕೈಗೊಂಡಿದ್ದು, ರಾಜ್ಯದಲ್ಲಿ ಕೊರೊನಾ ಇದೀಗ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ.

ದೇಶದಲ್ಲಿ ಕೊರೊನಾ ವ್ಯಾಕ್ಸಿನ್​​​ ತಯಾರಿ ಕಾರ್ಯ ದೇಶದಲ್ಲಿ ಭರದಿಂದ ಸಾಗಿದ್ದು, ಲಸಿಕೆ ರಿಲೀಸ್​ ಆಗುತ್ತಿದ್ದಂತೆ ಮಧ್ಯಪ್ರದೇಶದ ಪ್ರತಿಯೊಬ್ಬರಿಗೂ ಉಚಿತವಾಗಿ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ABOUT THE AUTHOR

...view details