ಮುಂಬೈ: ಕೊರೊನಾ ಮಹಾಮಾರಿ ವಿರುದ್ಧ ಹೋರಾಡಲು ಟೀಂ ಇಂಡಿಯಾ ಆಟಗಾರ ರೋಹಿತ್ ಶರ್ಮಾ ಆರ್ಥಿಕ ಸಹಕಾರ ನೀಡಿದ್ದಾರೆ. ಪಿಎಂ ಕೇರ್ಸ್ ನಿಧಿಗೆ 45 ಲಕ್ಷ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 25 ಲಕ್ಷ ರೂಪಾಯಿ ದೇಣಿಗೆಯಾಗಿ ನೀಡಿದ್ದಾರೆ. ಜೊತೆಗೆ ಲಾಕ್ಡೌನ್ ವೇಳೆ ಸಂಕಷ್ಟಕ್ಕೊಳಗಾದ ಕುಟುಂಬಗಳಿಗೆ ಸಹಾಯ ಮಾಡುವ ಸಲುವಾಗಿರುವ ಝೊಮೊಟೋ ಫೀಡಿಂಗ್ ಇಂಡಿಯಾ ಕ್ಯಾಂಪೇನ್ಗೆ 5 ಲಕ್ಷ ರೂ. ನೆರವು ನೀಡಿದ್ದಾರೆ.
ಕೊರೊನಾ ದೇಶದಿಂದ ಹೊರ ಹಾಕಲು ಬ್ಯಾಟ್ ಬೀಸಿದ ಹಿಟ್ ಮ್ಯಾನ್.. 80 ಲಕ್ಷ ರೂಪಾಯಿ ನೆರವು!! - ಪಿಎಂ ಕೇರ್ಸ್
ಮಹಾಮಾರಿ ವಿರುದ್ಧ ಹೋರಾಡಲು ಟೀಂ ಇಂಡಿಯಾ ಆಟಗಾರ ರೋಹಿತ್ ಶರ್ಮಾ ಆರ್ಥಿಕ ಸಹಕಾರ ನೀಡಿದ್ದಾರೆ. ಕೇಂದ್ರ ಮತ್ತು ಮಹಾರಾಷ್ಟ್ರ ರಾಜ್ಯ ಸರ್ಕಾರಗಳಿಗೆ ನೆರವು ನೀಡಿದ್ದಾರೆ.
ರೋಹಿತ್ ಶರ್ಮಾ
ಇದೆಲ್ಲದರ ಜೊತೆಗೆ ಶ್ವಾನಗಳ ಹಸಿವನ್ನು ನೀಗಿಸಲು 5 ಲಕ್ಷ ರೂಪಾಯಿ ಸಂಸ್ಥೆಯೊಂದಕ್ಕೆ ದೇಣಿಗೆಯಾಗಿ ನೀಡಿದ್ದಾರೆ. ಇದನ್ನು ಟ್ವಿಟರ್ನಲ್ಲಿ ಸ್ಪಷ್ಟಪಡಿಸಿದ್ದಾರೆ. ಕೊರೊನಾ ವಿರುದ್ಧ ಹೋರಾಡಲು ನೆರವು ನೀಡುವುದರೊಂದಿಗೆ ಸಚಿನ್ ತೆಂಡೋಲ್ಕರ್, ವಿರಾಟ್ ಕೊಹ್ಲಿ ಹಾಗೂ ಅಂಜಿಕ್ಯಾ ರಹಾನೆ ಸಾಲಿಗೆ ಇವರೂ ಸೇರ್ಪಡೆಯಾಗಿದ್ದಾರೆ.