ಇಂದು ಅಂತಾರಾಷ್ಟ್ರೀಯ ಬಡತನ ನಿರ್ಮೂಲನಾ ದಿನ. 2020 ರ ಈ ದಿನದ ವಿಷಯವು ವಿಶ್ವದ ಪ್ರತಿಯೊಬ್ಬರಿಗೂ ಸಾಮಾಜಿಕ ಮತ್ತು ಪರಿಸರ ನ್ಯಾಯವನ್ನು ನೀಡುವುದು ಸಾಧಿಸುವ ಗುರಿಯಾಗಿದೆ. ಬಹು ಆಯಾಮದಲ್ಲಿ ಹೆಚ್ಚುತ್ತಿರುವ ಬಡತನದ ವಿಷಯಕ್ಕೆ ಸಂಬಂಧಿಸಿದಂತೆ ಈ ಎರಡು ವಿಷಯಗಳು ಬೇರ್ಪಡಿಸಲಾಗದ ಅವಿಭಾಜ್ಯ ಅಂಗವಾಗಿ ಹೆಣೆದುಕೊಂಡಿವೆ.
ಹವಾಮಾನ ಬದಲಾವಣೆ ಮತ್ತು ಪರಿಸರ ಸವಾಲುಗಳನ್ನು ಒಂದೇ ಸಮಯದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಪರಿಹರಿಸದೆ ಹೋದರೆ ಸಾಮಾಜಿಕ ನ್ಯಾಯವನ್ನು ಸಂಪೂರ್ಣವಾಗಿ ಅರಿತುಕೊಳ್ಳಲು ಸಾಧ್ಯವಿಲ್ಲ. ಆದಾಯದ ಬಡತನವನ್ನು ಪರಿಹರಿಸುವಲ್ಲಿ ಪ್ರಗತಿ ಸಾಧಿಸಲಾಗಿದ್ದರೂ, ಬಡತನದ ಇತರ ಪ್ರಮುಖ ಆಯಾಮಗಳನ್ನು ಪರಿಹರಿಸುವಲ್ಲಿ ಕಡಿಮೆ ಯಶಸ್ಸು ಕಂಡುಬಂದಿದೆ, ಪರಿಸರದ ವೇಗವಾಗಿ ಬೆಳೆಯುತ್ತಿರುವ ಪ್ರಭಾವ ಸೇರಿದಂತೆ ಹೆಚ್ಚು ಸಮಗ್ರ ವಿಧಾನದಲ್ಲಿ ಬಡತನದ ನಿರ್ಮೂಲನೆಗೆ ಪ್ರಯತ್ನ ಆಗಬೇಕಿದೆ.
ಪ್ರಪಂಚದ ಅನೇಕ ಭಾಗಗಳಲ್ಲಿ ಹಸಿವಿನ ಹರಡುವಿಕೆಯು ಜಗತ್ತು ಪರಿಹರಿಸಬೇಕಾದ ಬಡತನಕ್ಕೆ ಸಂಬಂಧಿಸಿದ ಮತ್ತೊಂದು ಸಮಸ್ಯೆಯಾಗಿದೆ. ಸೂಕ್ತ ರೀತಿಯಲ್ಲಿ ಹಸಿವನ್ನು ಎದುರಿಸುವ ಪ್ರಯತ್ನಗಳಿಗಾಗಿ, ಯುದ್ಧ ಮತ್ತು ಸಂಘರ್ಷದಲ್ಲಿ ಹಸಿವನ್ನು ಒಂದು ಅಸ್ತ್ರವಾಗಿ ಬಳಕೆ ಮಾಡುವುದನ್ನ ತಡೆಯಲು ಮಾಡಿದ ಅಭೂತಪೂರ್ವ ಪ್ರಯತ್ನ ಮತ್ತು ಪೀಡಿತ ಪ್ರದೇಶಗಳಲ್ಲಿ ಶಾಂತಿಗಾಗಿ ಉತ್ತಮ ಪರಿಸ್ಥಿತಿಗಳನ್ನು ನಿರ್ಮಾಣ ಮಾಡಲು ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸಿದ್ದಕ್ಕಾಗಿ ನೊಬೆಲ್ ಸಮಿತಿಯು ವಿಶ್ವ ಆಹಾರ ಕಾರ್ಯಕ್ರಮಕ್ಕೆ (WFP) 2020 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಿತು. ತೀವ್ರವಾದ ಆಹಾರ ಅಭದ್ರತೆ ಮತ್ತು ಹಸಿವಿನಿಂದ ಬಳಲುತ್ತಿದ್ದ 88 ದೇಶಗಳಲ್ಲಿನ ಸುಮಾರು 100 ಮಿಲಿಯನ್ ಜನರಿಗೆ 2019 ರಲ್ಲಿ ಡಬ್ಲ್ಯುಎಫ್ಪಿ ಆಹಾರದ ನೆರವು ನೀಡಿತು.
ಉದ್ಯೋಗ ಮತ್ತು ಬಡತನದ ಮೇಲೆ ಕೋವಿಡ್ -19 ಸಾಂಕ್ರಾಮಿಕ ರೋಗದ ವಿನಾಶಕಾರಿ ಪರಿಣಾಮದಿಂದಾಗಿ ಈ ವರ್ಷದ ಬಡತನದ ವಿಷಯವು ಹೆಚ್ಚು ಮಹತ್ವದ್ದಾಗಿದೆ. ಬಡತನ ರೇಖೆಗಿಂತ ಕೆಳಗಿನ ಜನಸಂಖ್ಯೆಯು ಹೆಚ್ಚಾಗಬಹುದು, ನಿರುದ್ಯೋಗ ಸಹ ಹೆಚ್ಚಾಗಬಹುದು ಮತ್ತು ಅನೇಕ ಅನೌಪಚಾರಿಕ ಕಾರ್ಮಿಕರು ಬಡತನಕ್ಕೆ ಸಿಲುಕಬಹುದು ಎಂದು ಕೆಲ ಸೂಚ್ಯಂಕಗಳು ತೋರಿಸುತ್ತವೆ. ಹೆಲ್ಸಿಂಕಿಯ ಯುಎನ್-ವೈಡರ್ ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಅಧ್ಯಯನವು ಕ್ಯಾಪುಟಾ ಆದಾಯ ಶೇಕಡಾ 10 ರಷ್ಟು ಕುಸಿತ ಕಂಡಿರುವುದು ತೋರುತ್ತದೆ, ಬಡತನದ ಹೆಡ್ಕೌಂಟ್ನ ಹೆಚ್ಚಳವು ಕ್ರಮವಾಗಿ ಸುಮಾರು US $ 1.90, US $ 3.20 ಮತ್ತು US $ 5.50 ಅಂದರೆ 180, 280, ಮತ್ತು 250 ದಶಲಕ್ಷ ಜನರಲ್ಲಿ ಆಗಿದೆ, ಆದರೆ ಕುಸಿತವು ಶೇಕಡಾ 20 ಆಗಿದ್ದರೆ, ಬಡವರ ಹೆಚ್ಚಳವು ಸುಮಾರು 420, 580 ಮತ್ತು 520 ಮಿಲಿಯನ್ ಜನರು ಆಗಿರಬಹುದು.
ಜಾಗತಿಕ ಮಟ್ಟದಲ್ಲಿ, COVID-19 ನ ಸಂಭಾವ್ಯ ಪರಿಣಾಮವು 2030 ರ ವೇಳೆಗೆ ಬಡತನವನ್ನು ಕೊನೆಗೊಳಿಸುವ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗೆ ನಿಜವಾದ ಸವಾಲನ್ನು ಒಡ್ಡುತ್ತದೆ ಏಕೆಂದರೆ 1990 ರಿಂದ ಇದೇ ಮೊದಲ ಬಾರಿಗೆ ಮೂರು ಬಡತನ ರೇಖೆಗಳ ಅಡಿಯಲ್ಲಿ ಬಡವರ ಸಂಖ್ಯೆಯ ಸಾಪೇಕ್ಷ ಮತ್ತು ಸಂಪೂರ್ಣ ಗಾತ್ರದಲ್ಲಿ ಹೆಚ್ಚಳವು ದಾಖಲಾಗಲಿದೆ ಮತ್ತು ಅವರು ಬಡತನವನ್ನು ಕಡಿಮೆ ಮಾಡುವಲ್ಲಿ ಸುಮಾರು ಒಂದು ದಶಕದ ಪ್ರಗತಿಯ ಹಿಮ್ಮುಖವನ್ನು ಪ್ರತಿನಿಧಿಸಬಹುದು. ದಿನಕ್ಕೆ 1.9 ಅಮೆರಿಕನ್ ಡಾಲರ್ ಮತ್ತು 3.2 ಅಮೆರಿಕನ್ ಡಾಲರ್ ದಿನದ ಆದಾಯ ಪಡೆಯುವ ಬಡತನದ ರೇಖೆಗಿಂತ ಕಡಿಮೆ ಇರುವ ಹೊಸ ಬಡವರ ಸಾಂದ್ರತೆಯು ವಿಶ್ವದ ಬಡ ಪ್ರದೇಶಗಳಲ್ಲಿ ಸಂಭವಿಸುತ್ತದೆ, ಮುಖ್ಯವಾಗಿ ಸಬ್ ಸಹಾರನ್ ಆಫ್ರಿಕಾ ಮತ್ತು ದಕ್ಷಿಣ ಏಷ್ಯಾದಲ್ಲಿ ಇದರ ಪ್ರಮಾಣ ಹೆಚ್ಚಿರುತ್ತದೆ, ಈ ರಾಷ್ಟ್ರಗಳು ವಿಶ್ವದ ಮೂರನೇ ಎರಡರಷ್ಟು ಮತ್ತು 80–85 ಶೇಕಡಾ ಒಟ್ಟು ಬಡವರನ್ನ ಹೊಂದಿವೆ. ದಕ್ಷಿಣ ಏಷ್ಯಾದಲ್ಲಿ, ನಾವು ದಿನಕ್ಕೆ 3.2 ಅಮೆರಿಕನ್ ಡಾಲರ್ ಕನಿಷ್ಠ ಆದಾಯದ ಲೆಕ್ಕ ತೆಗೆದುಕೊಂಡರೆ 2018 ರಲ್ಲಿ 847 ಮಿಲಿಯನ್ ಇದ್ದ ಬಡತನವು 2020 ರಲ್ಲಿ 915 ಮಿಲಿಯನ್ಗೆ ಹೆಚ್ಚಾಗಬಹುದು.
ಇತ್ತೀಚಿನ ವಿಶ್ವ ಬ್ಯಾಂಕಿನ ಅಧ್ಯಯನವು COVID-19 ಸಾಂಕ್ರಾಮಿಕವು ಈ ವರ್ಷ ಹೆಚ್ಚುವರಿ 88 ದಶಲಕ್ಷದಿಂದ 115 ದಶಲಕ್ಷ ಜನರನ್ನು ತೀವ್ರ ಬಡತನಕ್ಕೆ ತಳ್ಳುತ್ತದೆ ಎಂದು ಅಂದಾಜಿಸಲಾಗಿದೆ, ಆರ್ಥಿಕ ಹಿಂಜರಿತದ ತೀವ್ರತೆಯ ಆಧಾರದ ಮೇಲೆ ಹೇಳುವುದಾದರೆ 2021 ರ ವೇಳೆಗೆ ಒಟ್ಟು ತೀವ್ರ ಬಡವರ ಸಂಕ್ಯೆ 150 ದಶಲಕ್ಷದಷ್ಟು ಏರಿಕೆಯಾಗಲಿದೆ. ಸುಮಾರು 25 ವರ್ಷಗಳಿಂದ ತೀವ್ರ ಬಡತನ ಸ್ಥಿರವಾಗಿ ಕುಸಿದಿತ್ತು. ಆದರೆ ಈಗ, ಇದೊಂದು ಪೀಳಿಗೆಯಲ್ಲಿ ಮೊದಲ ಬಾರಿಗೆ, ಬಡತನವನ್ನು ಕೊನೆಗೊಳಿಸುವ ಅನ್ವೇಷಣೆಯು ಅದರ ಕೆಟ್ಟ ಹಿನ್ನಡೆ ಅನುಭವಿಸಿದೆ. ಈ ಹಿನ್ನಡೆ ಹೆಚ್ಚಾಗಿ ಪ್ರಮುಖ ಸವಾಲುಗಳಾದ COVID 19, ಸಂಘರ್ಷ ಮತ್ತು ಹವಾಮಾನ ಬದಲಾವಣೆ ಸಮಸ್ಯೆಗಳಿಂದ ಆಗಿದೆ. ಎಲ್ಲ ದೇಶಗಳು ಈ ಹಿನ್ನಡೆ ಎದುರಿಸುತ್ತಿವೆ, ಆದರೆ, ನಿರ್ದಿಷ್ಟವಾಗಿ ದೊಡ್ಡ ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರಗಳು ಇದರ ಪರಿಣಾಮವನ್ನು ಹೆಚ್ಚಾಗಿ ನೋಡುತ್ತಿವೆ. 2019 ರಿಂದ 2020 ರವರೆಗೆ ತೀವ್ರ ಬಡತನದ ಹೆಚ್ಚಳವು ವಿಶ್ವಬ್ಯಾಂಕ್ ಜಾಗತಿಕವಾಗಿ ಬಡತನವನ್ನು ಸ್ಥಿರ ರೀತಿಯಲ್ಲಿ ಪತ್ತೆ ಹಚ್ಚಲು ಪ್ರಾರಂಭಿಸಿದಾಗಿನಿಂದ ಯಾವುದೇ ಸಮಯಕ್ಕಿಂತ ದೊಡ್ಡದಾಗಿದೆ ಎಂದು ಊಹಿಸಲಾಗಿದೆ. COVID-19 ಇದೀಗ ಹೊಸ ಅಡಚಣೆಯಾಗಿದ್ದರೂ, ಘರ್ಷಣೆಗಳು ಮತ್ತು ಹವಾಮಾನ ಬದಲಾವಣೆಯು ವಿಶ್ವದ ಕೆಲವು ಭಾಗಗಳಲ್ಲಿ ತೀವ್ರ ಬಡತನವನ್ನು ಹೆಚ್ಚಿಸುತ್ತಿವೆ.
ಕೊಳಗೇರಿಗಳಲ್ಲಿ ಕರೋನ ವೈರಸ್ ನಿರ್ಮೂಲನೆ ಮಾಡುವುದರಲ್ಲಿ ಮುಂಬೈ ನಗರವನ್ನು ವಿಶ್ವ ಬ್ಯಾಂಕಿನ ಅಧ್ಯಯನವು ಮೆಚ್ಚಿದೆ. ಪರಿಣಾಮಕಾರಿ ವಿಧಾನಗಳು ಸಮುದಾಯದ ಸದಸ್ಯರ ಕೌಶಲ್ಯ ಮತ್ತು ಸಮರ್ಪಣೆಯನ್ನು ಗಮನದಲ್ಲಿರಿಸಿಕೊಂಡಿವೆ ಎಂದು ಗಮನಿಸಿದ ವಿಶ್ವ ಬ್ಯಾಂಕ್, ಮುಂಬೈಯಲ್ಲಿ, ನಗರದ ದೊಡ್ಡ ನಗರ ವಸಾಹತುಗಳಲ್ಲಿ ಒಂದಾದ ಧಾರವಿ ಕೊಳಗೇರಿಯಲ್ಲಿ ಕರೋನ ವೈರಸ್ ಅನ್ನು ವೇಗವಾಗಿ ಹರಡುವುದನ್ನ ತಡೆಯುವಲ್ಲಿ ನಗರದ ಅಧಿಕಾರಿಗಳು ಸಮರ್ಥರಾಗಿದ್ದಾರೆ. ಸಾಮೂಹಿಕ ತಪಾಸಣೆ ಆಧಾರಿತ ಯೋಜನೆ ಮೂಲಕ ಖಾಸಗಿ ವೈದ್ಯಕೀಯ ಚಿಕಿತ್ಸಾಲಯಗಳ ಸಿಬ್ಬಂದಿ ಬಳಸಿಕೊಂಡು ಸಮುದಾಯದ ಸದಸ್ಯರನ್ನು ಸಜ್ಜುಗೊಳಿಸುವ ಮೂಲಕ ಜ್ವರ ಮತ್ತು ಆಮ್ಲಜನಕದ ಮಟ್ಟಗಳನ್ನ ಪರೀಕ್ಷೆ ನಡೆಸಲಾಗಿದೆ.
ಭಾರತದಲ್ಲಿ ಬಡತನದ ಮೇಲೆ ಪರಿಣಾಮವು ತುಂಬಾ ಹೆಚ್ಚಾಗಿದೆ. ಆರ್ಥಿಕ ಆಘಾತವು ಎರಡು ಕಾರಣಗಳಿಗಾಗಿ ಭಾರತಕ್ಕೆ ಹೆಚ್ಚು ತೀವ್ರವಾಗಿದೆ. ಮೊದಲನೆಯದಾಗಿ, COVID-19 ರ ಪೂರ್ವದಲ್ಲಿ, ಆರ್ಥಿಕತೆಯು ಈಗಾಗಲೇ ನಿಧಾನವಾಗುತ್ತಿತ್ತು, ಅಸ್ತಿತ್ವದಲ್ಲಿರುವ ನಿರುದ್ಯೋಗ, ಕಡಿಮೆ ಆದಾಯ, ಗ್ರಾಮೀಣ ಯಾತನೆ, ಅಪೌಷ್ಟಿಕತೆ ಮತ್ತು ವ್ಯಾಪಕ ಅಸಮಾನತೆಯ ಕಾರಣದಿಂದ ಆರ್ಥಿಕ ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸಿದೆ. ಎರಡನೆಯದಾಗಿ, ಭಾರತದ ದೊಡ್ಡ ಅನೌಪಚಾರಿಕ ವಲಯವು ವಿಶೇಷವಾಗಿ ಅತ್ಯಂತ ದುರ್ಬಲವಾಗಿದೆ. ರಾಷ್ಟ್ರೀಯ ಒಟ್ಟು 465 ಮಿಲಿಯನ್ ಕಾರ್ಮಿಕರಲ್ಲಿ, ಸುಮಾರು 91% (422 ಮಿಲಿಯನ್) ಜನರು 2017-18ರಲ್ಲಿ ಅನೌಪಚಾರಿಕ ಕಾರ್ಮಿಕರಾಗಿದ್ದರು. ನಿಯಮಿತ ಸಂಬಳ ಅಥವಾ ಆದಾಯದ ಕೊರತೆಯಿಂದಾಗಿ, ಈ ಕೃಷಿ, ವಲಸೆಗಾರ ಮತ್ತು ಇತರ ಅನೌಪಚಾರಿಕ ಕಾರ್ಮಿಕರು ಲಾಕ್ಡೌನ್ ಅವಧಿಯಲ್ಲಿ ಹೆಚ್ಚು ತೊಂದರೆ ಅನುಭವಿಸಿದ್ದಾರೆ.
ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಮ್ಐಇ) ಯ ಅಂದಾಜಿನ ಪ್ರಕಾರ ಈ ಬಾರಿ ನಿರುದ್ಯೋಗದ ಪ್ರಮಾಣವು ಾಪಾರವಾಗಿ ಅಂದರೆ 8.4% ರಿಂದ 27% ಕ್ಕೆ ಏರಿದೆ. ದೇಶದಲ್ಲಿ 122 ಮಿಲಿಯನ್ ಉದ್ಯೋಗಗಳು ನಷ್ಟವಾಗಿವೆ. ಅದರಲ್ಲಿ ಸಣ್ಣ ವ್ಯಾಪಾರಿಗಳು ಮತ್ತು ಪ್ರಾಸಂಗಿಕ ಕಾರ್ಮಿಕರು 91 ಮಿಲಿಯನ್ ಉದ್ಯೋಗಗಳನ್ನು ಕಳೆದುಕೊಂಡ ಕಾರ್ಮಿಕರಾಗಿದ್ದಾರೆ. ಭಾರತದಲ್ಲಿ 400 ಮಿಲಿಯನ್ ಅನೌಪಚಾರಿಕ ಕಾರ್ಮಿಕರು ಬಿಕ್ಕಟ್ಟಿನ ಸಂದರ್ಭದಲ್ಲಿ ಬಡತನಕ್ಕೆ ಆಳವಾಗಿ ಬೀಳುವ ಅಪಾಯವಿದೆ ಎಂದು ILO ವರದಿಯೊಂದು ಬಹಿರಂಗಪಡಿಸಿದೆ. ಕೋವಿಡ್ -19 ರ ಮೊದಲ ಕೆಲವು ತಿಂಗಳುಗಳಲ್ಲಿ 77% ರಷ್ಟು ಕುಟುಂಬಗಳು ಮೊದಲಿಗಿಂತ ಕಡಿಮೆ ಆಹಾರವನ್ನು ಹೊಂದಿದ್ದಾರೆ ಎಂದು ಅಜೀಮ್ ಪ್ರೇಮ್ಜಿ ವಿಶ್ವವಿದ್ಯಾಲಯದ ಅಧ್ಯಯನವು ತೋರಿಸುತ್ತದೆ.