ಕರ್ನಾಟಕ

karnataka

ETV Bharat / bharat

ಮೊಬೈಲ್​​ನಲ್ಲೇ ಜಗಳವಾಡಿಕೊಂಡ ಜೋಡಿ... ಮನನೊಂದು ಇಬ್ಬರೂ ಆತ್ಮಹತ್ಯೆಗೆ ಶರಣು! - ಆತ್ಮಹತ್ಯೆಗೆ ಶರಣಾದ ಲವರ್ಸ್​​

ಕಳೆದ ಐದು ವರ್ಷಗಳಿಂದ ಜೀವಕ್ಕಿಂತ ಹೆಚ್ಚಾಗಿ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದ ಜೋಡಿ ಇದೀಗ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಸಾವಿನ ಮನೆಯ ಕದ ತಟ್ಟಿದ್ದಾರೆ.

couple-commit-suicide
couple-commit-suicide

By

Published : Feb 13, 2020, 2:18 PM IST

ವಿಶಾಖಪಟ್ಟಣಂ(ಆಂಧ್ರಪ್ರದೇಶ):ಸಣ್ಣ ವಿಚಾರಕ್ಕಾಗಿ ಮೊಬೈಲ್​​ನಲ್ಲೇ ಜಗಳ ಮಾಡಿಕೊಂಡಿರುವ ಪ್ರೇಮಿಗಳು ಬೇರೆ ಬೇರೆ ಸ್ಥಳಗಳಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂದಲ್ಲಿ ನಡೆದಿದೆ.

ಗೋಪಾಲಪಟ್ಟಣಂ ಪೊಲೀಸ್​ ಸ್ಟೇಷನ್​ ಏರಿಯಾದಲ್ಲಿ ಪೋಷಕರೊಂದಿಗೆ ವಾಸವಾಗಿದ್ದ ಸಿರಿಶಾ ಹಾಗೂ ಕಾಂಚರಪಲೆಂ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದ ವೆಂಕಟ್​ ಕಳೆದ ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ನಿನ್ನೆ ಯಾವುದೂ ವಿಚಾರಕ್ಕಾಗಿ ಮೊಬೈಲ್​​ನಲ್ಲಿ ಜಗಳವಾಡಿಕೊಂಡಿದ್ದಾರೆ. ಈ ವೇಳೆ ಮನೆಯ ರೂಂನಲ್ಲಿ ಸಿರಿಸಾ ಸಾವಿಗೆ ಶರಣಾಗಿದ್ದು, ಗ್ರಾಮದ ಹೊರಗಡೆಯ ಮರವೊಂದಕ್ಕೆ ವೆಂಕಟ್​ ನೇಣಿಗೆ ಶರಣಾಗಿದ್ದಾರೆ ಎಂದು ಪೊಲೀಸ್​ ಅಧಿಕಾರಿ ಸ್ವರೂಪ್ ರಾಣಿ ತಿಳಿಸಿದ್ದಾರೆ.

ಮಾಹಿತಿ ಲಭ್ಯವಾಗುತ್ತಿದ್ದಂತೆ ಮೃತದೇಹಗಳನ್ನ ಕಿಂಗ್​ ಜಾರ್ಜ್​​ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

ABOUT THE AUTHOR

...view details