ಕರ್ನಾಟಕ

karnataka

By

Published : Mar 31, 2020, 3:35 PM IST

ETV Bharat / bharat

ಕೊರೊನಾ ತಂದಿಟ್ಟ ಆರ್ಥಿಕ ಸಂಕಷ್ಟ: ಸಾಲ ತೀರಿಸುತ್ತೇನೆ, ಪ್ಲೀಸ್​ ತಗೊಳಿ ಅಂತಿದ್ದಾರೆ ಮಲ್ಯ

ಮದ್ಯ ದೊರೆ ವಿಜಯ್​ ಮಲ್ಯ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ಗೆ ಮನವಿಯೊಂದನ್ನು ಸಲ್ಲಿಸಿದ್ದಾರೆ. ತಾವು ಸಾಲವಾಗಿ ಪಡೆದಿರುವ ಹಣದ ಅಸಲನ್ನು ತೀರಿಸುವುದಾಗಿ ಅವರು ಪ್ರಸ್ತಾವನೆ ಇಟ್ಟಿದ್ದಾರೆ.

Mallya
ವಿಜಯ್​ ಮಲ್ಯ

ನವದೆಹಲಿ:ಸದ್ಯ ಕಾರ್ಯನಿರ್ವಹಿಸದ ಕಿಂಗ್‌ಫಿಶರ್ ಏರ್‌ಲೈನ್ಸ್ ಎರವಲು ಪಡೆದಿರುವ ಶೇ.100ರಷ್ಟಯ ಅಸಲನ್ನು ಮರುಪಾವತಿಸುವುದಾಗಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್​ ಮುಂದೆ ಮದ್ಯದ ದೊರೆ ವಿಜಯ್​ ಮಲ್ಯ ಪ್ರಸ್ತಾವನೆ ಇಟ್ಟಿದ್ದಾರೆ.

ಅಂದಾಜು 9,000 ಕೋಟಿ ರೂ.ಗಳ ವಂಚನೆ ಮತ್ತು ಲೇವಾದೇವಿ ಆರೋಪದ ಮೇಲೆ ಭಾರತಕ್ಕೆ ಮೋಸ್ಟ್​ ವಾಂಟೆಡ್ ಆಗಿರುವ​ ಮಲ್ಯ, ಕೊರೊನಾ ಹಿನ್ನೆಲೆಯಲ್ಲಿ ಲಾಕ್​ಡೌನ್​ ಘೋಷಣೆಯಾಗಿರುವ ನಂತರ ಭಾರತದಲ್ಲಿ ತನ್ನ ಎಲ್ಲಾ ಕಂಪನಿಗಳು ಕಾರ್ಯಾಚರಣೆ ಮತ್ತು ಉತ್ಪಾದನೆಯನ್ನು ನಿಲ್ಲಿಸಿವೆ ಎಂದು ಹೇಳಿದ್ದಾರೆ.

ಕೆಎಫ್‌ಎ ಎರವಲು ಪಡೆದ ಮೊತ್ತದ 100 ಶೇ. ಮೊತ್ತವನ್ನು ಬ್ಯಾಂಕುಗಳಿಗೆ ಪಾವತಿಸಲು ನಾನು ಮತ್ತೆ ಮತ್ತೆ ಮನವಿ ಸಲ್ಲಿಸಿದ್ದೇನೆ. ಆದರೆ ಬ್ಯಾಂಕ್​ಗಳು ಹಣವನ್ನು ತೆಗೆದುಕೊಳ್ಳಲು ಸಿದ್ಧರಿಲ್ಲ ಮತ್ತು ಬ್ಯಾಂಕ್​ ಆಜ್ಞೆಯ ಮೇರೆಗೆ ಅವರು ಮಾಡಿದ ಲಗತ್ತುಗಳನ್ನು ಬಿಡುಗಡೆ ಮಾಡಲು ಜಾರಿ ನಿರ್ದೇಶನಾಲಯ ಸಿದ್ಧವಿಲ್ಲ. ಈ ಬಿಕ್ಕಟ್ಟಿನ ನಡುವೆ ಹಣಕಾಸು ಸಚಿವರು ನನ್ನ ಮನವಿ ಸ್ವೀಕರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಮಲ್ಯ ಸರಣಿ ಟ್ವೀಟ್‌ಗಳಲ್ಲಿ ಹೇಳಿದ್ದಾರೆ.

For All Latest Updates

ABOUT THE AUTHOR

...view details