ಕರ್ನಾಟಕ

karnataka

By

Published : Jun 25, 2020, 2:43 PM IST

ETV Bharat / bharat

ಲಡಾಕ್ ಯಥಾಸ್ಥಿತಿ ಬದಲಾಗಿದೆ: ಮೋದಿ ವಿರುದ್ಧ ಚಿದಂಬರಂ ಕಿಡಿ

ಏಪ್ರಿಲ್-ಜೂನ್‌ನಲ್ಲಿ ಚೀನಾದ ಸೈನ್ಯದಿಂದ ಲಡಾಖ್​​ನ ಯಥಾಸ್ಥಿತಿ ಬದಲಾಗಿದೆ. ಆದರೆ, ಮೋದಿ ಅದನ್ನು ಬದಲಾಗಿಲ್ಲ ಎಂದು ಬಿಂಬಿಸುತ್ತಿದ್ದಾರೆ. ಅಲ್ಲದೆ, ಸೇನಾಧಿಕಾರಿಗಳು ಮತ್ತೊಂದು ರೀತಿ ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಹೇಳಿದರು.

'Contrary to Modi's statement, Ladakh status quo changed'
ಪಿ.ಚಿದಂಬರಂ

ನವದೆಹಲಿ:ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ) ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್​​ ಮುಖಂಡ ಪಿ.ಚಿದಂಬರಂ ಅವರು ಮತ್ತೊಮ್ಮೆ ವಾಗ್ದಾಳಿ ನಡೆಸಿದರು.

ಏಪ್ರಿಲ್ ತಿಂಗಳಲ್ಲಿ ಲಡಾಕ್​​​​ನ ಗಾಲ್ವಾನ್​​ ಕಣಿವೆಯಲ್ಲಿ ಯಥಾಸ್ಥಿತಿಯನ್ನು (ಗಡಿ ಪ್ರದೇಶ) ಚೀನಾದ ಸೈನ್ಯವು ಬದಲಾಯಿಸಿದೆ ಎಂಬುದು ನಿರಾಕರಿಸಲಾಗದ ಸಂಗತಿ. ಮೋದಿ ಸರ್ಕಾರವು ಯಥಾಸ್ಥಿತಿಯನ್ನು ಪುನಃ ಸ್ಥಾಪಿಸುವಲ್ಲಿ ಯಶಸ್ವಿಯಾಗುತ್ತದೆಯೇ ಎಂದು ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.

ಚೀನಾದ ವಿದೇಶಾಂಗ ಸಚಿವಾಲಯ ಮತ್ತು ಪಿಎಲ್‌ಎ (ಪೀಪಲ್ಸ್ ಲಿಬರೇಶನ್ ಆರ್ಮಿ) ಮತ್ತೊಮ್ಮೆ ಗಾಲ್ವಾನ್ ಕಣಿವೆಯಲ್ಲಿ ತಮ್ಮ ಹಕ್ಕನ್ನು ಪ್ರತಿಪಾದಿಸುತ್ತದೆ. ಭಾರತ ಕಣಿವೆಯನ್ನು ಖಾಲಿ ಮಾಡಬೇಕು ಎಂದು ಒತ್ತಾಯಿಸುತ್ತಿದೆ. ಅದೊಂದು ಅಸಾಧಾರಣ ಬೇಡಿಕೆ ಎಂದು ಹೇಳಿದರು.

ನಮ್ಮ ನೆಲವನ್ನು ಯಾರೂ ಅತಿಕ್ರಮಿಸಿಲ್ಲ. ಗಡಿಯನ್ನು ಯಾರೊಬ್ಬರೂ ವಶಪಡಿಸಿಕೊಂಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿಕೆ ನೀಡಿದ್ದರು. ಅದನ್ನು ಚೀನಾ ಸ್ವಾಗತಿಸಿತ್ತು. ಈ ರೀತಿಯ ಹೇಳಿಕೆಗಳನ್ನು ನೀಡುವಾಗ ಪ್ರಧಾನಿ ಎಚ್ಚರಿಕೆಯಿಂದ ಇರಬೇಕು ಎಂದರು.

ABOUT THE AUTHOR

...view details