ಕರ್ನಾಟಕ

karnataka

ಇಂಜಿನಿಯರ್​ ಮೇಲೆ ಕೆಸರೆರಚಿದ ಪ್ರಕರಣ: ಠಾಣೆಯಲ್ಲೂ ಕಿರಿಕ್​ ಮಾಡಿದ ರಾಣೆ

ಶಾಸಕ ನಿತೇಶ್​ ಹಾಗೂ ಅವರ ಸಹಚರರ ಈ ಕೃತ್ಯ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಹರಿದಾಡಿತ್ತು. ಇದು ರಾಜಕೀಯ ಬಣ್ಣ ಪಡೆದ ಕಾರಣ ಪೊಲೀಸರು ನಿತೇಶ್​ ಹಾಗೂ ಮತ್ತಿಬ್ಬರುನ್ನು ಬಂಧಿಸಿ, ವಿಚಾರಣೆ ನಡೆಸಿದರು.

By

Published : Jul 5, 2019, 8:36 AM IST

Published : Jul 5, 2019, 8:36 AM IST

ನಿತೇಶ್​ ರಾನೆ

ನವದೆಹಲಿ: ಮುಂಬೈ ಹೈವೇ ಬಳಿ ಇಂಜಿನಿಯರ್​ ಮೇಲೆ ಕೆಸರು ಸುರಿದು, ಕಂಬಕ್ಕೆ ಕಟ್ಟಿಹಾಕಿದ್ದ ಕಾಂಗ್ರೆಸ್​ ಶಾಸಕ ನಿತೇಶ್​ ರಾಣೆ ಅವರನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದರು.

ಶಾಸಕ ನಿತೇಶ್​ ಹಾಗೂ ಅವರ ಸಹಚರರ ಈ ಕೃತ್ಯ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಹರಿದಾಡಿತ್ತು. ಇದು ರಾಜಕೀಯ ಬಣ್ಣ ಪಡೆದ ಕಾರಣ ಪೊಲೀಸರು ನಿತೇಶ್​ ಹಾಗೂ ಮತ್ತಿಬ್ಬರುನ್ನು ಬಂಧಿಸಿ, ವಿಚಾರಣೆ ನಡೆಸಿದರು.

ಪೊಲೀಸ್​ ವಿಚಾರಣೆ ವೇಳೆಯೂ ನಿತೇಶ್​ ಗರಂ ಆದ ವಿಡಿಯೋ ಹರಿದಾಡುತ್ತಿದೆ. ನೀವು ಏನೇ ಮಾಡಬೇಕೆಂದರೂ ನಾಳೆ ಮಾಡಿ. ಇಂದು ನೀವು ನನ್ನನ್ನು ಬಂಧಿಸಿದರೆ ಅವರೇ ಗೆದ್ದಂತೆ. ಇದರಿಂದ ಕಂಕಾವಲಿಯ ಜನ ಪ್ರತಿದಿನ ಸಾಯುವಂತಾಗುತ್ತೆ ಎಂದು ಏರುಧ್ವನಿಯಲ್ಲಿ ಮಾತನಾಡಿದ ದೃಶ್ಯಗಳು ಸೆರೆಯಾಗಿವೆ.

ನಿನ್ನೆ ಮುಂಬೈ-ಗೋವಾ ಹೈವೇಯ ಕಂಕಾವಲಿಯ ಬಳಿ ರಸ್ತೆ ಗುಂಡಿಗಳ ಪರಿಶೀಲನೆಗೆ ಬಂದಿದ್ದ ಇಂಜಿನಿಯರ್​ ಶೆಡೇಕರ್​ ಮೇಲೆ ನಿತೇಶ್​ ಹಾಗೂ ಸಹಚರರು ಕೆಸರು ಸುರಿದಿದ್ದಲ್ಲದೆ, ಅವರನ್ನು ಕಂಬಕ್ಕೆ ಕಟ್ಟಿ ಹಾಕಿದ್ದರು. ಕಳಪೆ ಕಾಮಗಾರಿಯಿಂದಾಗಿ ಇಲ್ಲಿನ ಜನರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಈ ಏರಿಯಾವನ್ನು ಕೆಸರುಮಯ ಮಾಡಲು ನಿಮಗೆ ಅಧಿಕಾರ ಕೊಟ್ಟವರಾರು? ಜನರು ಅನುಭವಿಸುವ ನೋವನ್ನೂ ನೀವೂ ಅನುಭವಿಸಿ ಎಂದು ಆವಾಜ್​ ಹಾಕಿದ್ದರು.

ಕೈಯಲ್ಲಿ ಕೋಲು ಹಿಡಿದು ನಾನು ಇಲ್ಲಿನ ಹೈವೇಯನ್ನು ರಿಪೇರಿ ಮಾಡಿಸುತ್ತೇನೆ. ಬೆಳಗ್ಗೆ 7 ಗಂಟೆಗೇ ಇಲ್ಲಿಗೆ ಬರುತ್ತೇನೆ. ಆಗ ನೋಡಿ ವ್ಯವಸ್ಥೆ ಹೇಗಿರುತ್ತದೆ. ಅಧಿಕಾರಿಗಳ ಸೊಕ್ಕಿಗೆ ನಮ್ಮಲ್ಲಿ ಔಷಧವಿದೆ ಎಂದು ಹೇಳಿಕೆ ನೀಡಿದ್ದರು.

ನಿತೇಶ್​ ಮಾಜಿ ಸಿಎಂ ನಾರಾಯಣ್​ ರಾಣೆ ಅವರ ಪುತ್ರ. ಘಟನೆ ಬಗ್ಗೆ ನಾರಾಯಣ ರಾಣೆ, ಮಗನ ಬದಲು ಕ್ಷಮೆಯಾಚಿಸಿದ್ದಾರೆ. ಈ ಮೊದಲು, 2017ರಲ್ಲಿಯೂ ಸಭೆಯೊಂದರಲ್ಲಿ ಹಿರಿಯ ಅಧಿಕಾರಿ ಮೇಳೆ ಮೀನು ಎಸೆದು ಗಲಾಟೆ ಮಾಡಿದ್ದರು.

For All Latest Updates

TAGGED:

ABOUT THE AUTHOR

...view details