ಕರ್ನಾಟಕ

karnataka

ETV Bharat / bharat

'ಕಾಂಗ್ರೆಸ್​​​ನವರು ಬಿಜೆಪಿ ಮಡಿಲ ಮೇಲೆಯೇ ಕುಳಿತಿದ್ದಾರೆ': ತಮ್ಮವರ ವಿರುದ್ಧವೇ ಗುಡುಗಿದ ಕೈ ಶಾಸಕ - Congressmen sitting in BJP's lap

ನಾವು ಗಾಂಧಿ-ಅಂಬೇಡ್ಕರ್​ ಬಗ್ಗೆ ಮಾತನಾಡುತ್ತೇವೆ. ಆದರೆ ನಮ್ಮವರೇ ಬಿಜೆಪಿ ಮಡಿಲ ಮೇಲೆ ಹೋಗಿ ಕುಳಿತಿದ್ದಾರೆ. ಹೀಗಾಗಿಯೇ ಸಿಎಎ, ಎನ್​ಆರ್​ಸಿ, ಎನ್​ಪಿಆರ್ ವಿರುದ್ಧದ ನಮ್ಮ ಚಳವಳಿ ಬಲಹೀನವಾಗುತ್ತಿದೆ ಎಂದು ಕಾಂಗ್ರೆಸ್​ ಶಾಸಕ ಆರಿಫ್​ ಮಸೂದ್​​ ಖಾನ್​ ಹೇಳಿಕೆ ನೀಡಿದ್ದಾರೆ.

MLA Arif Masood statement
ಕಾಂಗ್ರೆಸ್​ ಶಾಸಕ ಆರಿಫ್​ ಮಸೂದ್​​ ಖಾನ್

By

Published : Feb 28, 2020, 6:35 PM IST

ರತ್ಲಂ (ಮಧ್ಯ ಪ್ರದೇಶ):ಕಾಂಗ್ರೆಸಿಗರು ಬಿಜೆಪಿಯ ಮಡಿಲ ಮೇಲೆ ಕುಳಿತಿದ್ದಾರೆ ಎಂದು ಕಾಂಗ್ರೆಸ್​ ಶಾಸಕ ಆರಿಫ್​ ಮಸೂದ್​​ ಖಾನ್​ ಹೇಳಿಕೆ ನೀಡಿದ್ದು, ತಮ್ಮ ಪಕ್ಷದವರ ವಿರುದ್ಧವೇ ಗುಡುಗಿದ್ದಾರೆ.

ಸಿಎಎ, ಎನ್​ಆರ್​ಸಿ, ಎನ್​ಪಿಆರ್​ ವಿರುದ್ಧ ಮಧ್ಯಪ್ರದೇಶದ ರತ್ಲಂನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಖಾನ್​, ಈ ದೇಶ ಗಾಂಧೀಜಿಯವರ ಆದರ್ಶಗಳ ಮೇಲೆ ನಿಂತಿದೆಯೇ ಹೊರತು ಗೋಡ್ಸೆ ಆದರ್ಶದ ಮೇಲಲ್ಲ. ಕಾಂಗ್ರೆಸ್​ ನಾಯಕರೇ ನೀವೆಲ್ಲಾ ಎಲ್ಲಿದ್ದೀರಾ? ಮನೆಗಳಲ್ಲಿ ಏಕೆ ಅಡಗಿ ಕುಳಿತಿದ್ದೀರಾ? ಒಂದು ಕಡೆ ದ್ವೇಷವನ್ನ ಪಸರಿಸಲಾಗುತ್ತಿದ್ದು, ನೀವು ಮಾತ್ರ ಮೌನವಾಗಿದ್ದೀರ. ನೀವು ಹೀಗೆ ಮೌನವಾಗಿದ್ದರೆ ದ್ವೇಷವನ್ನ ಪಸರಿಸುತ್ತಿರುವುದೇ ಕಾಂಗ್ರೆಸ್​ ಎಂದು ಜನರು ಭಾವಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸಿಎಎ, ಎನ್​ಆರ್​ಸಿ, ಎನ್​ಪಿಆರ್ ವಿರುದ್ಧದ ನಮ್ಮ ಚಳವಳಿ ಬೇರೆ ದಿಕ್ಕಿನಲ್ಲಿ ಸಾಗುತ್ತಿದ್ದು, ಇದರ ಲಾಭವನ್ನ ಬಿಜೆಪಿಯವರು ಪಡೆದುಕೊಳ್ಳುತ್ತಿದ್ದಾರೆ ಎಂದು ಸಿಎಂ ಹೇಳಿದ್ದರು. ಆ ಮಾತು ಸತ್ಯ. ನಾವು ಗಾಂಧಿ-ಅಂಬೇಡ್ಕರ್​ ಬಗ್ಗೆ ಮಾತನಾಡುತ್ತೇವೆ. ಆದರೆ ನಮ್ಮವರೇ ಬಿಜೆಪಿ ಮಡಿಲ ಮೇಲೆ ಹೋಗಿ ಕುಳಿತಿದ್ದಾರೆ. ಹೀಗಾಗಿಯೇ ನಮ್ಮ ಚಳವಳಿ ಬಲಹೀನವಾಗುತ್ತಿದೆ ಎಂದು ಖಾನ್​ ದೂರಿದರು.

ಮಹಿಳೆಯರು ರಸ್ತೆ ಮೇಲೆ ಕುಳಿತು ಪ್ರತಿಭಟಿಸುತ್ತಿದ್ದಾಗ ನೀವೆಲ್ಲಿಗೆ ಹೋಗಿದ್ರಿ? ಎಂದು ಕಾಂಗ್ರೆಸ್ಸಿಗರು ನಿಮ್ಮ ಮನೆ ಬಾಗಿಲಿಗೆ ಬಂದಾಗ ಅವರನ್ನ ಕೇಳಿ ಎಂದು ಜನತೆಗೆ ಹೇಳಿದ ಆರಿಫ್​ ಖಾನ್​, ನಮ್ಮ (ಕಾಂಗ್ರೆಸ್ಸಿಗರ) ಧ್ವನಿಯನ್ನ ಹತ್ತಿಕ್ಕಲಾಗುತ್ತಿದೆ. ನಾವು ದ್ವೇಷವನ್ನ ಪಸರಿಸುತ್ತಿಲ್ಲ. ನಮ್ಮ ಹೋರಾಟವನ್ನ ಬಿಜೆಪಿಯವರು ಹಿಂದೂ-ಮುಸ್ಲಿಂ ಹೋರಾಟವಾಗಿ ಪರಿವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ABOUT THE AUTHOR

...view details