ಕರ್ನಾಟಕ

karnataka

ETV Bharat / bharat

ಮುಗಿಯದ ಮಹಾರಾಷ್ಟ್ರ ಗುದ್ದಾಟ: ಶಿವಸೇನೆಗೆ ಐದು ವರ್ಷ ಸಿಎಂ ಹುದ್ದೆ ಆಫರ್​ ನೀಡಿದ ಕಾಂಗ್ರೆಸ್​​! - ಆದಿತ್ಯ ಠಾಕ್ರೆ

ಮಹಾರಾಷ್ಟ್ರದಲ್ಲಿ ಚುನಾವಣೆ ಮುಕ್ತಾಯಗೊಂಡು ಫಲಿತಾಂಶ ಹೊರಬಂದಿದ್ದು, ಇಷ್ಟಾದರೂ ಶಿವಸೇನೆ - ಬಿಜೆಪಿ ನಡುವಿನ ಮುಸುಕಿನ ಗುದ್ದಾಟ ಮುಗಿದಿಲ್ಲ. ಇದರ ಮಧ್ಯೆ ಕೈ ಹಾಕಿರುವ ಕಾಂಗ್ರೆಸ್​​ ಶಿವಸೇನೆಗೆ ಮುಂದಿನ ಐದು ವರ್ಷಗಳ ಕಾಲಕ್ಕೆ ಮುಖ್ಯಮಂತ್ರಿ ಪದವಿ ಆಫರ್​​ ನೀಡಿದೆ.

ಬಿಜೆಪಿ-ಶಿವಸೇನೆ

By

Published : Oct 26, 2019, 3:52 PM IST

ಮುಂಬೈ:288 ಕ್ಷೇತ್ರಗಳ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆ 160 ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡಿದ್ದು, ಮುಖ್ಯಮಂತ್ರಿ ಗಾದಿಗೇರಲು ಇದೀಗ ಫೈಟ್​ ನಡೆಸುತ್ತಿವೆ.

ಶಿವಸೇನೆ ಈಗಾಗಲೇ ಹೇಳಿರುವ ಪ್ರಕಾರ 50: 50 ಸೂತ್ರಕ್ಕೆ ಪಟ್ಟು ಹಿಡಿದಿದ್ದು, ತನ್ನ ನಿರ್ಧಾರದಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡುವುದಿಲ್ಲ ಎಂದಿದೆ. ಇದರ ಜತೆಗೆ ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಶಿವಸೇನೆ ಸೂತ್ರದ ಪ್ರಕಾರ ಈಗಾಗಲೇ ಎರಡು ಪಕ್ಷಗಳ ನಡುವೆ ಆಗಿರುವ ಒಪ್ಪಂದದ ಪ್ರಕಾರ ಬಿಜೆಪಿ ನಮಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ಒಪ್ಪಿಕೊಂಡು ಅದನ್ನ ಲಿಖಿತವಾಗಿ ಬರೆದುಕೊಟ್ಟರೆ ಮಾತ್ರ ಅವರೊಂದಿಗೆ ಕೈಜೋಡಿಸುವುದಾಗಿ ಹೇಳಿದೆ.

ಉದ್ಧವ್​​​ ಠಾಕ್ರೆ

ಈಗಾಗಲೇ ಶಿವಸೇನೆ ಶಾಸಕರು ಸಹ ತಮ್ಮ ಪಕ್ಷದಿಂದ ಗೆಲುವು ದಾಖಲು ಮಾಡಿರುವ ಆದಿತ್ಯ ಠಾಕ್ರೆ ಮುಂದಿನ ಸಿಎಂ ಆಗಲಿ ಎಂದು ಹೇಳುತ್ತಿದ್ದಾರೆ. ಹೀಗಾಗಿ ಇದೇ ವಿಷಯಯಕ್ಕೆ ಶಿವಸೇನೆ-ಬಿಜೆಪಿ ನಡುವೆ ಮುಸುಕಿನ ಗುದ್ದಾಟ ಶುರುವಾಗಿದೆ.

ಆದಿತ್ಯ ಠಾಕ್ರೆ

ರಾಜ್ಯದಲ್ಲಿ ಸರ್ಕಾರ ರಚನೆಯಾಗಬೇಕಾದ್ರೆ 2.5 ವರ್ಷ ಶಿವಸೇನೆ ಅಭ್ಯರ್ಥಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟು, ತದ ನಂತರದ 2.5 ವರ್ಷ ಬಿಜೆಪಿ ಅಭ್ಯರ್ಥಿ ಸಿಎಂ ಆಗುವುದು. ಜತೆಗೆ ಸಂಪುಟದಲ್ಲಿ ಶೇ.50ರಷ್ಟು ಸಚಿವ ಸ್ಥಾನ ತಮಗೆ ಬಿಟ್ಟು ಕೊಡುವುದು ಎಂಬುದು ಇವರ ಕಂಡಿಷನ್​ ಆಗಿದೆ.

ಉದ್ಧವ್​,ಶರದ್​,ಪಡ್ನವಿಸ್​​

ಇದರ ಮಧ್ಯೆ ಕಾಂಗ್ರೆಸ್​​ ಪಕ್ಷ ಶಿವಸೇನೆಗೆ ಮಹತ್ವದ ಆಫರ್​ ನೀಡಿದ್ದು, ಒಂದು ವೇಳೆ ತಮ್ಮ ಪಕ್ಷಕ್ಕೆ ಬೆಂಬಲ ಸೂಚಿಸಿದರೆ ಮುಂದಿನ ಐದು ವರ್ಷಗಳ ಕಾಲ ಸಿಎಂ ಪದವಿ ಬಿಟ್ಟುಕೊಡುವುದಾಗಿ ಒಪ್ಪಿಕೊಂಡಿದೆ.

288 ಕ್ಷೇತ್ರ ಹೊಂದಿರುವ ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ 104, ಶಿವಸೇನೆ 56, ಎನ್​ಸಿಪಿ 54 ಹಾಗೂ ಕಾಂಗ್ರೆಸ್​ 43 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ. ಮಹಾರಾಷ್ಟ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು 145 ಮ್ಯಾಜಿಕ್​ ನಂಬರ್​ ಆಗಿದೆ

ABOUT THE AUTHOR

...view details