ಕರ್ನಾಟಕ

karnataka

By

Published : Jan 19, 2021, 10:25 AM IST

Updated : Jan 19, 2021, 1:43 PM IST

ETV Bharat / bharat

ಎಐಸಿಸಿ ಕೇಂದ್ರ ಕಚೇರಿಯಲ್ಲಿ ಕೃಷಿ ಕಾನೂನುಗಳ ಬಗ್ಗೆ ಕಾಂಗ್ರೆಸ್ ಪುಸ್ತಕ ಬಿಡುಗಡೆ ಮಾಡಿದ ರಾಹುಲ್

ಕಾಂಗ್ರೆಸ್​ ಮುಖಂಡ ರಾಹುಲ್​ ಗಾಂಧಿ ಇಂದು ನೂತನ ಕೃಷಿ ಕಾನೂನುಗಳ ಕುರಿತಂತೆ ದೆಹಲಿಯ ಎಐಸಿಸಿ ಮಾಧ್ಯಮಗೋಷ್ಟಿ ನಡೆಸಿದರು. ಇದೇ ವೇಳೆ ಮೂರು ಕಾನೂನುಗಳ ಬಗ್ಗೆ ಕಾಂಗ್ರೆಸ್​ನಿಂದ ಪುಸ್ತಕಗಳು ಸಹ ಬಿಡುಗಡೆ ಮಾಡಿದ್ದಾರೆ.

ದೆಹಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ರಾಹುಲ್ ಗಾಂಧಿ ಸುದ್ದಿಗೋಷ್ಠಿ
ದೆಹಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ರಾಹುಲ್ ಗಾಂಧಿ ಸುದ್ದಿಗೋಷ್ಠಿ

ನವದೆಹಲಿ: ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಸಿಂಘು ಗಡಿಯಲ್ಲಿ ಪಂಜಾಬ್​, ಹರಿಯಾಣ ರೈತರು ನಡೆಸುತ್ತಿರುವ ಹೋರಾಟ ಮುಂದುವರೆದಿದೆ. ಈ ನಡುವೆ, ಕಾಂಗ್ರೆಸ್​ ಮುಖಂಡ ರಾಹುಲ್​ ಗಾಂಧಿ ಇಂದು ಮಾಧ್ಯಮಗೋಷ್ಟಿ ನಡೆಸಿದರು.

ಟ್ರ್ಯಾಕ್ಟರ್​ ರ‍್ಯಾಲಿಗೆ ಅನುಮತಿ ನೀಡುವ ಸಂಬಂಧ ಮಧ್ಯಪ್ರವೇಶಿಸಲು ಸುಪ್ರೀಂಕೋರ್ಟ್​ ನಿರಾಕರಿಸಿದೆ. ಈ ಮಧ್ಯೆ ರೈತರ ಹೋರಾಟಕ್ಕೆ ಕಾಂಗ್ರೆಸ್​ ಬೆಂಬಲ ನೀಡಿದೆ.

ಇಂದು ರಾಹುಲ್​ ಗಾಂಧಿ ಈ ಸಂಬಂಧ ದೆಹಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದರು. ಅಷ್ಟೇ ಅಲ್ಲ ಕೇಂದ್ರ ಜಾರಿಗೆ ತಂದಿರುವ ಮೂರು ಕಾನೂನಗಳ ಬಗ್ಗೆ ಕಾಂಗ್ರೆಸ್ ಪುಸ್ತಕಗಳನ್ನ ಸಹ ಬಿಡುಗಡೆ ಮಾಡಿದೆ. ಈ ಮೂಲಕ ರೈತ ವಿರೋಧಿ ಕಾನೂನುಗಳ ಬಗ್ಗೆ ಜನರಿಗೆ ತಿಳಿವಳಿಕೆ ನೀಡಲಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಕೃಷಿ ಕಾಯ್ದೆ ರದ್ಧತಿ ಬದಲು ಪರ್ಯಾಯ ಕ್ರಮದ ಕುರಿತು ಚಿಂತನೆ: ಸಚಿವ ತೋಮರ್​

Last Updated : Jan 19, 2021, 1:43 PM IST

ABOUT THE AUTHOR

...view details