ಹೈದರಾಬಾದ್: ಸಿಎಎ(ಪೌರತ್ವ ತಿದ್ದುಪಡಿ ಕಾಯ್ದೆ) ವಿರುದ್ಧ ಟ್ವೀಟ್ನಲ್ಲಿ ಆಕ್ರೋಶ ಹೊರಹಾಕಿದ್ದ ಬಾಲಿವುಡ್ ನಟ ಮತ್ತು ಚಿತ್ರ ನಿರ್ಮಾಪಕ ಫರ್ಹಾನ್ ಅಖ್ತರ್ ವಿರುದ್ಧ ದೂರು ದಾಖಲಾಗಿದೆ.
ಸಿಎಎ ಕುರಿತು ಟ್ವೀಟ್: ನಟ ಫರ್ಹಾನ್ ಅಖ್ತರ್ ವಿರುದ್ಧ ದೂರು ದಾಖಲು - ಸಿಎಎ ಕುರಿತು ಟ್ವೀಟ್ ಮಾಡಿದ ಫರ್ಹಾನ್ ಅಖ್ತರ್
ಸಿಎಎ ಬಗ್ಗೆ ವ್ಯಾಪಕವಾಗಿ ನಡೆಯುತ್ತಿರುವ ಹೋರಾಟದ ಬೆನ್ನಲ್ಲೇ ನಟ ಫರ್ಹಾನ್ ಅಖ್ತರ್ ಟ್ವೀಟ್ ಮೂಲಕ ತಮ್ಮ ಆಕ್ರೋಶ ಹೊರ ಹಾಕಿದ್ದರು. ಇದಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಸೈದಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
![ಸಿಎಎ ಕುರಿತು ಟ್ವೀಟ್: ನಟ ಫರ್ಹಾನ್ ಅಖ್ತರ್ ವಿರುದ್ಧ ದೂರು ದಾಖಲು ಫರ್ಹಾನ್ ಅಖ್ತರ್ ವಿರುದ್ಧ ದೂರು ದಾಖಲು , Complaint filed against Farhan Akhtar over comments on CAA](https://etvbharatimages.akamaized.net/etvbharat/prod-images/768-512-5455069-thumbnail-3x2-nin.jpg)
ಫರ್ಹಾನ್ ಅಖ್ತರ್ ವಿರುದ್ಧ ದೂರು ದಾಖಲು
ಹಿಂದೂ ಸಂಘತಾನ್ ಸಂಸ್ಥಾಪಕ ಕರುಣಾ ಸಾಗರ್ ಎಂಬುವರು ಸೈದಾಬಾದ್ ಪೊಲೀಸ್ ಠಾಣೆಯಲ್ಲಿ ಅಖ್ತರ್ ವಿರುದ್ಧ ದೂರು ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರತಿಭಟಿಸುವ ಕಾಲ ಮುಗಿಯಿತು ಎಂಬ ಟ್ವೀಟ್ ಅನ್ನು ಅವರು ಮಾಡಿದ್ದರು. ಇದಕ್ಕೆ ಪರ ವಿರೋಧದ ಕಾಮೆಂಟ್ಸ್ಗಳು ಕೂಡ ವ್ಯಕ್ತವಾಗಿದ್ದವು.
ಕರುಣಾ ಸಾಗರ್ ದೂರು ನೀಡಿದ್ದಾರೆ. ಅಲ್ಲದೆ, ಫಾರುಖ್ ಅವರ ಟ್ವೀಟ್ ಪ್ರಚೋದನೆಯನ್ನು ನೀಡುವಂತಿದೆ ಎಂದು ಆರೋಪಿಸಿದ್ದಾರೆ.