ಕರ್ನಾಟಕ

karnataka

ETV Bharat / bharat

ಜ. 23ರಂದು 'ರಾಷ್ಟ್ರೀಯ ರಜೆ' ಘೋಷಣೆ ಮಾಡಿ: ಕೇಂದ್ರಕ್ಕೆ ಪತ್ರ ಬರೆದ ಮಮತಾ ಬ್ಯಾನರ್ಜಿ! - ಸುಭಾಸ್​ ಚಂದ್ರ ಬೋಸ್​ ಜನ್ಮ ದಿನಾಚರಣೆ

ನೇತಾಜಿ ಅವರ ನಿಗೂಢ ಸಾವಿನ ಹಿಂದಿನ ರಹಸ್ಯ ಇಂದಿಗೂ ಸ್ಪಷ್ಟವಾಗಿ ಗೊತ್ತಾಗಿಲ್ಲ. ಈ ವಿಚಾರದಲ್ಲಿ ತಾರ್ಕಿಕ ಅಂತ್ಯ ನೀಡುವಂತೆ ಮಮತಾ ಬ್ಯಾನರ್ಜಿ ಮನವಿ ಮಾಡಿದ್ದಾರೆ.

CM Mamata
CM Mamata

By

Published : Jan 4, 2021, 5:06 PM IST

ಕೋಲ್ಕತ್ತಾ:ಜನವರಿ 23 ನೇತಾಜಿ ಸುಭಾಸ್​​ ಚಂದ್ರ ಬೋಸ್​ ಅವರ ಜನ್ಮದಿನ. 125ನೇ ಜನ್ಮದಿನಾಚರಣೆಯನ್ನು ವಿಜೃಂಭಣೆಯಿಂದ ಹಾಗೂ ಯಶಸ್ವಿಯಾಗಿ ನಡೆಸಲು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ದೇಶದ ಜನರಿಗೆ ಮನವಿ ಮಾಡಿದ್ದಾರೆ.

ಓದಿ: ನಾನು ಕೋವಿಡ್​ ಲಸಿಕೆ ಪಡೆಯಲ್ಲ; ಶಿವರಾಜ್​ ಸಿಂಗ್​ ಚೌಹಾಣ್​ ಈ ರೀತಿ ಹೇಳಿದ್ಯಾಕೆ!?

ಇದರ ಬೆನ್ನಲ್ಲೇ ಜನವರಿ 23ರಂದು ರಾಷ್ಟ್ರೀಯ ರಜೆ ಘೋಷಣೆ ಮಾಡುವಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರಕ್ಕೆ ಆಗ್ರಹಿಸಿ ಪತ್ರ ಬರೆದಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಜನ್ಮದಿನಾಚರಣೆಗೋಸ್ಕರ ಕೇಂದ್ರ ಈಗಾಗಲೇ ಉನ್ನತ ಮಟ್ಟದ ಸಮಿತಿ ಕೂಡ ರಚನೆ ಮಾಡಿದ್ದು, ಇದರ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಈ ಬೇಡಿಕೆ ಇಟ್ಟಿದ್ದಾರೆ.

ಸ್ವಾತಂತ್ರ್ಯದ ನಂತರ ನೇತಾಜಿ ಸುಭಾಸ್​ ಚಂದ್ರ ಬೋಸ್​​ ಅವರಿಗಾಗಿ ನಾವು ಏನನ್ನೂ ಮಾಡಿಲ್ಲ. ಹೀಗಾಗಿ ಅವರ ಜನ್ಮ ದಿನಾಚರಣೆಯನ್ನು ರಾಷ್ಟ್ರೀಯ ರಜಾ ದಿನವೆಂದು ಘೋಷಿಸಲು ಕೇಂದ್ರಕ್ಕೆ ಪತ್ರ ಬರೆದಿದ್ದೇನೆ. ಇದು ನನ್ನ ವೈಯಕ್ತಿಕ ಬೇಡಿಕೆ ಎಂದಿದ್ದಾರೆ.

ಜನವರಿ 23ರಂದು ಪೊಲೀಸ್​ ತಂಡದೊಂದಿಗೆ ಶ್ಯಾಂಬಜಾರ್​ನಿಂದ ಕೋಲ್ಕತ್ತಾದ ನೇತಾಜಿ ಪ್ರತಿಮೆವರೆಗೆ ರ್ಯಾಲಿ ನಡೆಸಲಾಗುವುದು ಎಂದು ಅವರು ತಿಳಿಸಿದ್ದು, ಅವರ ಜೀವನ ಆಧರಿಸಿದ ವಿಡಿಯೋ ಪ್ರದರ್ಶಿಸಲಾಗುವುದು ಎಂದು ತಿಳಿಸಿದ್ದಾರೆ.

ABOUT THE AUTHOR

...view details