ಕರ್ನಾಟಕ

karnataka

ETV Bharat / bharat

ಶಾ ರೋಡ್​ ಶೋ ವೇಳೆ ಗಲಭೆ: ವಿದ್ಯಾರ್ಥಿಗಳು-ಬಿಜೆಪಿಗರ ಬಡಿದಾಟ - undefined

ಅಮಿತ್​ ಶಾ ರೋಡ್​ ಶೋ ವಿರೋಧಿಸಿ ವಿವಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದ ವೇಳೆ, ಬಿಜೆಪಿ ಕಾರ್ಯಕರ್ತರೊಂದಿಗೆ ಜಗಳವಾಗಿದೆ. ಬಾಟಲ್​ ಹಾಗೂ ಕಲ್ಲು ತೂರಾಟ ನಡೆಸಲಾಗಿದೆ.

ಕೋಲ್ಕತ್ತಾ

By

Published : May 14, 2019, 7:41 PM IST

Updated : May 14, 2019, 8:44 PM IST

ಕೋಲ್ಕತ್ತಾ: ಬಿಜೆಪಿ ಅಧ್ಯಕ್ಷ ಅಮಿತ್ ಶಾ ರೋಡ್​ ಶೋ ವೇಳೆ ಬಿಜೆಪಿ ಕಾರ್ಯಕರ್ತರು ಹಾಗೂ ಕೋಲ್ಕತ್ತಾ ವಿವಿ ವಿದ್ಯಾರ್ಥಿಗಳ ನಡುವೆ ಘರ್ಷಣೆ ಉಂಟಾಗಿದ್ದು, ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ.

ಕೋಲ್ಕತ್ತಾ

ಅಮಿತ್​ ಶಾ ರೋಡ್​ ಶೋ ವಿರೋಧಿಸಿ ವಿವಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದ ವೇಳೆ, ಬಿಜೆಪಿ ಕಾರ್ಯಕರ್ತರೊಂದಿಗೆ ಜಗಳವಾಗಿದೆ. ಮಾತಿಗೆ ಮಾತು ಬೆಳೆದು, ಗಲಭೆ ತಾರರಕ್ಕೇರಿದೆ. ವಿವಿ ಗೇಟ್​ಗೆ ಬಿಜೆಪಿಗರು ಬಾಟಲ್​ ಹಾಗೂ ಕಲ್ಲು ತೂರಾಟ ನಡೆಸಿದರು ಎನ್ನಲಾಗಿದೆ. ಮತ್ತೊಂದು ಗುಂಪು ಅಮಿತ್ ಶಾರಿದ್ದ ಟ್ರಕ್​ಗೂ ದೊಣ್ಣೆಗಳನ್ನು ಎಸೆಯಿತು ಎಂದು ವರದಿಯಾಗಿದೆ.

ವಿವಿ ಗೇಟ್​ ಮುಂಭಾಗ ಶಾ ಮೆರವಣಿಗೆ ಮಾಡುತ್ತಿದ್ದ ವೇಳೆ ವಿವಿ ವಿದ್ಯಾರ್ಥಿಗಳು ಕಪ್ಪು ಬಾವುಟ ಪ್ರದರ್ಶಿಸಿ, ಅಮಿತ್ ಶಾ ಗೋ ಬ್ಯಾಕ್ ಎಂಬ ಘೋಷಣೆಗಳನ್ನು ಕೂಗಿದರು. ಇದೇ ಕಾರಣಕ್ಕೆ ಬಿಜೆಪಿಗರು ಅವರ ಮೇಲೆ ಮುಗಿಬಿದ್ದರು ಎಂದು ತಿಳಿದುಬಂದಿದೆ.

ವಿವಿ ವಿದ್ಯಾರ್ಥಿಗಳು ಬ್ಯಾರಿಕೇಡ್ ಮುರಿದು, ಸಭೆಗೆ ಅಡ್ಡಿಪಡಿಸಲು ಪೊಲೀಸರೇ ಸಹಾಯ ಮಾಡಿದ್ದಾರೆ. ಪ್ರತಿಭಟನೆಯಲ್ಲಿ ತೃಣಮೂಲ ಕಾಂಗ್ರೆಸ್​ ವಿದ್ಯಾರ್ಥಿ ಬಳಗವೇ ಇತ್ತು ಎಂದು ಬಿಜೆಪಿಗರು ಸಹ ಆರೋಪ ಮಾಡಿದ್ದಾರೆ.

Last Updated : May 14, 2019, 8:44 PM IST

For All Latest Updates

TAGGED:

ABOUT THE AUTHOR

...view details