ಕರ್ನಾಟಕ

karnataka

ETV Bharat / bharat

ರಾಂಚಿಯಲ್ಲಿ ಖಾಕಿ ದೊಣ್ಣೆ ವರಸೆ.. ಪೊಲೀಸರಿಂದ್ಲೇ ಪೊಲೀಸರ ಮೇಲೆ ಲಾಠಿಚಾರ್ಜ್- ವಿಡಿಯೋ - ಜಾರ್ಖಂಡ್​ ಪೊಲೀಸರು

ತಮ್ಮ ಹುದ್ದೆಯನ್ನ ಖಾಯಂಗೊಳಿಸುವಂತೆ ಒತ್ತಾಯಿಸಿ ರಾಂಚಿಯಲ್ಲಿ ಸಹಾಯಕ ಪೊಲೀಸ್ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದರು. ಬ್ಯಾರಿಕೇಡ್​ ದಾಟಿ ನುಗ್ಗಲು ಯತ್ನಿಸಿದ್ದ ಪ್ರತಿಭಟನಾನಿರತ ಸಹಾಯಕ ಪೊಲೀಸರು ಹಾಗೂ ರಾಜ್ಯ ಪೊಲೀಸರ ನಡುವೆ ಘರ್ಷಣೆ ಏರ್ಪಟ್ಟಿದೆ..

Clash between state police
ಪೊಲೀಸರ ಘರ್ಷಣೆ

By

Published : Sep 18, 2020, 6:12 PM IST

ರಾಂಚಿ :ಯಾರಾದ್ರೂ ಪ್ರತಿಭಟನೆ ನಡೆಸಿ ನೂಕುನುಗ್ಗಲು ಮಾಡಲು ಯತ್ನಿಸಿದ್ರೆ ಪೊಲೀಸರು ಸ್ಥಳಕ್ಕೆ ಧಾವಿಸಿ ಅವರನ್ನು ತಡೆಯೋದನ್ನು ನೋಡಿರುತ್ತೇವೆ. ಆದರೆ, ರಾಂಚಿಯಲ್ಲಿ ಪೊಲೀಸರೇ ಲಾಠಿ ಹಿಡಿದು ಮುಷ್ಕರ ನಿರತ ಪೊಲೀಸರ ಮೇಲೆ ಲಾಠಿಚಾರ್ಜ್​ ಮಾಡಿದ್ದಾರೆ.

ಜಾರ್ಖಂಡ್​ನ ರಾಂಚಿಯಲ್ಲಿ ರಾಜ್ಯ ಪೊಲೀಸರ ಹಾಗೂ ಸಹಾಯಕ ಪೊಲೀಸ್​ ಸಿಬ್ಬಂದಿ ನಡುವೆ ಈ ಘಟನೆ ನಡೆದಿದೆ. ತಮ್ಮ ಹುದ್ದೆಗಳನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ ರಾಂಚಿಯಲ್ಲಿ ಸಹಾಯಕ ಪೊಲೀಸ್ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದರು.

ಈ ವೇಳೆ ಬ್ಯಾರಿಕೇಡ್​ ದಾಟಿ ನುಗ್ಗಲು ಯತ್ನಿಸಿದ್ದ ಪ್ರತಿಭಟನಾನಿರತ ಸಹಾಯಕ ಪೊಲೀಸರು ಹಾಗೂ ರಾಜ್ಯ ಪೊಲೀಸರ ನಡುವೆ ಘರ್ಷಣೆ ಏರ್ಪಟ್ಟಿದೆ. ಈ ವೇಳೆ ಮುಷ್ಕರ ನಿರತರ ಮೇಲೆ ರಾಜ್ಯ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ. ಅಶ್ರವಾಯು ಬಳಸಿ ಪ್ರತಿಭಟನಾಕಾರರನ್ನು ಚದುರಿಸಲು ಮುಂದಾಗಿದ್ದಾರೆ.

ABOUT THE AUTHOR

...view details