ಕರ್ನಾಟಕ

karnataka

ETV Bharat / bharat

ಭಾರತದ ಕೈವಶವಾದ ಲಡಾಖ್​ನ ಹಲವು ಪರ್ವತ ಶ್ರೇಣಿಗಳು: ಸೇನೆ ಹಿಂತೆಗೆದುಕೊಳ್ಳುವಂತೆ ಚೀನಾ ಒತ್ತಡ - ಗಾಲ್ವಾನ್ ವ್ಯಾಲಿ ಘರ್ಷಣೆ

ಪಾಂಗೊಂಗ್ ಸರೋವರದ ದಕ್ಷಿಣ ದಂಡೆಯಲ್ಲಿ ಭಾರತವು ನಿರ್ಣಾಯಕವಾದ ಎತ್ತರದ ಶ್ರೇಣೀಗಳನ್ನು ಆಕ್ರಮಿಸಿಕೊಂಡಿದೆ. ಇದರಲ್ಲಿ ಮಗರ್, ಗುರುಂಗ್, ರೆಸೆಹೆನ್ ಲಾ, ರೆಜಾಂಗ್ ಲಾ, ಮೋಖ್ ಪರಿ ಬೆಟ್ಟಗಳು ಸೇರಿದಂತೆ ಇತರೆ ಪರ್ವತಗಳು ಇದುವರೆಗೂ ಮಾನವರಹಿತವಾಗಿದ್ದವು ಈಗ ಇವೆಲ್ಲ ಭಾರತದ ವಶವಾಗಿವೆ. ಹೀಗಾಗಿ, ಈ ಶ್ರೇಣಿಗಳಿಂದ ಭಾರತವೇ ಮೊದಲು ಹಿಂದಕ್ಕೆ ಸರಿಯಲಿ ಎಂದು ಚೀನಾ ಬಯಸಿದೆ.

escalation on LAC
ಚೀನಾ ಭಾರತ ಗಡಿ ಬಿಕ್ಕಟ್ಟು

By

Published : Sep 25, 2020, 5:49 AM IST

ನವದೆಹಲಿ: ಎಲ್‌ಎಸಿಯ ಪರ್ವತ ಶ್ರೇಣಿಗಳ ಮೇಲಿಂದ ಸೇನೆ ಹಿಂತೆಗೆದುಕೊಳ್ಳುವ ಕುರಿತು ಮಾತುಕತೆ ನಡೆಸುವ ಮುನ್ನ ಪಾಂಗೊಂಗ್ ಸರೋವರದ ದಕ್ಷಿಣ ದಂಡೆಯ ಆಯಕಟ್ಟಿನ ಎತ್ತರ ಪ್ರದೇಶದಲ್ಲಿ ತನ್ನ ಸೇನೆಯನ್ನು ಭಾರತ ಮೊದಲು ಹಿಂತೆಗೆದುಕೊಳ್ಳಬೇಕು ಎಂಬುದನ್ನು ಚೀನಾ ಒತ್ತಾಯಿಸುತ್ತಿದೆ ಎಂದು ಭಾರತದ ಸೇನೆಯ ಉನ್ನತ ಮೂಲಗಳು ತಿಳಿಸಿವೆ.

ಉನ್ನತ ಕಮಾಂಡರ್ ಮಟ್ಟದ ಮಾತುಕತೆಯ ಸಂದರ್ಭದಲ್ಲಿ ಚೀನಾ ಭಾರತಕ್ಕೆ ಪೂರ್ವ ಲಡಾಕ್‌ನಲ್ಲಿ ಸೈನ್ಯ ನಿಷ್ಕ್ರಿಯಗೊಳಿಸುವ ಬಗ್ಗೆ ಚರ್ಚಿಸುವುದಿಲ್ಲ. ಅಲ್ಲಿ ಎರಡೂ ಕಡೆಯವರು ಬೀಡುಬಿಟ್ಟಿದ್ದರಿಂದ ಕಳೆದ ನಾಲ್ಕು ತಿಂಗಳಿಂದ ಯುದ್ಧದಂತಹ ಪರಿಸ್ಥಿತಿ ಉಂಟಾಗಿದೆ. ಭಾರತವು ತನ್ನ ಕಾರ್ಯತಂತ್ರದ ಸ್ಥಾನಗಳನ್ನು ಖಾಲಿ ಮಾಡುವವರೆಗೆ ಇದು ಯಥಾವತ್ತಾಗಿ ಇರಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.

ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ ಪಡೆಗಳು ದಕ್ಷಿಣದ ದಂಡೆಯಲ್ಲಿ ಮೊದಲಿನ ಪರಿಸ್ಥಿತಿಯನ್ನು ಪರಿಹರಿಸುವಲ್ಲಿ ಅಚಲವಾಗಿವೆ. ಅಲ್ಲಿ ಭಾರತೀಯ ಸೈನಿಕರು ಯುದ್ಧತಂತ್ರದ ಸಾಮರ್ಥ್ಯ ಹೊಂದಿದ್ದಾರೆ. ಆದರೆ ಪೂರ್ವ ಲಡಾಕ್‌ನ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಉಲ್ಬಣಗೊಳ್ಳಲು ಭಾರತ ಕಾರ್ಯತಂತ್ರದ ಮಾರ್ಗಸೂಚಿಯನ್ನು ಬಯಸಿದೆ ಎಂದಿದೆ.

ಮಾತುಕತೆಯ ಸಮಯದಲ್ಲಿ ಡೆಪ್ಸಾಂಗ್ ಸೇರಿದಂತೆ ಎಲ್ಲಾ ಸಂಘರ್ಷಣೆ ಪ್ರದೇಶಗಳನ್ನು ಎಲ್‌ಎಸಿ ಉದ್ದಕ್ಕೂ ಸೇನೆಯನ್ನು ನಿಷ್ಕ್ರಿಯಗೊಳಿಸಲು ಚರ್ಚಿಸಬೇಕು ಎಂದು ಭಾರತ ತಾಕೀತು ಮಾಡಿದೆ.

ಎಲ್‌ಎಸಿಯಾದ್ಯಂತ ಭಾರಿ ಪ್ರಮಾಣದ ನಿರ್ಮಾಣ ಕಾರ್ಯಗಳು ನಡೆಯುತ್ತಿರುವಾಗ ಚರ್ಚೆಗಳನ್ನು ಒಂದು ಅಥವಾ ಎರಡು ಸ್ಥಳಗಳಿಗೆ ಏಕೆ ಸೀಮಿತಗೊಳಿಸಬೇಕು ಎಂದು ಭಾರತದ ಸೇನೆಯ ಉನ್ನತ ಅಧಿಕಾರಿಯೊಬ್ಬರು ಪ್ರಶ್ನಿಸಿದ್ದಾರೆ.

ಭಾರತದ ವಶವಾಗಿರುವ ಲಡಾಖ್​ನ ಪರ್ವತ ಶ್ರೇಣೀಗಳು

ಪಾಂಗೊಂಗ್ ಸರೋವರದ ದಕ್ಷಿಣ ದಂಡೆಯಲ್ಲಿ ಭಾರತವು ನಿರ್ಣಾಯಕವಾದ ಎತ್ತರದ ಶ್ರೇಣೀಗಳನ್ನು ಆಕ್ರಮಿಸಿಕೊಂಡಿದೆ. ಇದರಲ್ಲಿ ಮಗರ್, ಗುರುಂಗ್, ರೆಸೆಹೆನ್ ಲಾ, ರೆಜಾಂಗ್ ಲಾ, ಮೋಖ್ ಪರಿ ಬೆಟ್ಟಗಳು ಸೇರಿದಂತೆ ಇತರೆ ಪರ್ವತಗಳು ಇದುವರೆಗೂ ಮಾನವರಹಿತವಾಗಿದ್ದವು ಎಂದು ಚೀನಾ ಹೇಳಿದೆ.

ಇತರ ಕೆಲವು ಶಿಖರಗಳ ಜೊತೆಗೆ ಚೀನಾದ ನಿಯಂತ್ರಣದಲ್ಲಿರುವ ಸ್ಪ್ಯಾಂಗೂರ್ ಗ್ಯಾಪ್ ಮತ್ತು ಚೀನಾದ ಕಡೆಯ ಮೊಲ್ಡೊ ಗ್ಯಾರಿಸನ್ ಮೇಲೆ ಪ್ರಾಬಲ್ಯ ಸಾಧಿಸಲು ಭಾರತ ಮುಂದಾಗಿದೆ ಎಂಬುದು ಚೀನಾ ವಾದ.

ಜೂನ್ 15ರ ಗಾಲ್ವಾನ್ ವ್ಯಾಲಿ ಘರ್ಷಣೆಯ ನಂತರ ಭಾರತವು ತನ್ನ ಉದ್ದೇಶಿತ ನಿಯಮಗಳನ್ನು ಬದಲಾಯಿಸಿತ್ತು. ಅಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾದರು. ಅಪಾರ ಸಂಖ್ಯೆಯ ಚೀನಿ ಸೈನಿಕರು ಸಹ ಹತರಾದರು.

ಭಾರತ-ಚೀನಾ ಗಡಿ ಪ್ರದೇಶಗಳಲ್ಲಿ ಎಲ್‌ಎಸಿಯ ಉದ್ದಕ್ಕೂ ಪರಿಸ್ಥಿತಿಯನ್ನು ತಿಳಿಗೊಳಿಸುವ ಬಗ್ಗೆ ಉಭಯ ರಾಷ್ಟ್ರಗಳು ಆಳವಾದ ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದರು ಎಂದು ಭಾರತೀಯ ಸೇನೆ ಹೇಳಿದೆ.

ABOUT THE AUTHOR

...view details