ಕರ್ನಾಟಕ

karnataka

ETV Bharat / bharat

ಅಮ್ಮ, ಅಪ್ಪ, ಅಕ್ಕ, ಮುತ್ತಾತರನ್ನು ನುಂಗಿದ ಮಹಾಮಾರಿ... ಯಮನೊಂದಿಗೆ ಹೋರಾಡಿ ಗೆದ್ದು ಬಂದ ಮೃತ್ಯುಂಜಯ! - ಮಂಚಿರ್ಯಾಲ ಸುದ್ದಿ

ಅಕ್ಷರಶಃ ಮಹಾಮಾರಿ ರೋಗಕ್ಕೆ ಆ ಕುಟುಂಬ ನಲುಗಿತ್ತು. ಆ ಕುಟುಂಬ ಒಂದೇ ತಿಂಗಳಲ್ಲಿ ನಾಲ್ವರನ್ನು ಕಳೆದುಕೊಂಡು ವಿಲವಿಲ ಒದ್ದಾಡಿತ್ತು. ಮಗುವಿಗೆ ಜನ್ಮ ಕೊಟ್ಟ ತಾಯಿಯೂ ಮಹಾಮಾರಿ ರೋಗಕ್ಕೆ ತುತ್ತಾಗಿದ್ದರು. ಆಗ ತಾನೆ ಹುಟ್ಟಿದ ಮಗುವಿಗೂ ಅದೇ ಮಾರಿ ರೋಗ ಅಟ್ಯಾಕ್​ ಮಾಡಿತ್ತು. ತಂದೆ, ತಾಯಿ, ಅಕ್ಕ, ಮುತ್ತಾತನನ್ನು ನುಂಗಿದ ಆ ಮಹಾಮಾರಿ ವಿರುದ್ಧ ಮಗು ಹೋರಾಡಿ ಗೆದ್ದು ಬಂದಿದೆ.

ಯಮನೊಂದಿಗೆ ಹೋರಾಡಿ ಗೆದ್ದು ಬಂದ ಮೃತ್ಯುಂಜಯ

By

Published : Nov 17, 2019, 11:11 PM IST

ಮಂಚಿರ‍್ಯಾಲ: ಮಹಾಮಾರಿ ರೋಗಕ್ಕೆ ಒಂದೇ ಕುಟುಂಬದಲ್ಲಿ ನಾಲ್ವರು ಬಲಿಯಾಗಿದ್ದರು. ತಾಯಿಯೊಬ್ಬರು ಮಗುವಿಗೆ ಜನ್ಮ ನೀಡಿ ಸಾವನ್ನಪ್ಪಿದ್ದರು. ಆ ಮಗುವೂ ಸಹ ಮಹಾಮಾರಿ ರೋಗದಿಂದ ಬಳಲುತ್ತಿತ್ತು. ಈಗ ವೈದ್ಯರೊಬ್ಬರ ಪರಿಶ್ರಮದಿಂದ ಆ ಮಗು ಮಹಾಮಾರಿ ವಿರುದ್ಧ ಹೋರಾಡಿ ಗೆದ್ದು ಬಂದಿದೆ.

ಯಮನೊಂದಿಗೆ ಹೋರಾಡಿ ಗೆದ್ದು ಬಂದ ಮೃತ್ಯುಂಜಯ

ಹೌದು, ತೆಲಂಗಾಣದ ಮಂಚಿರ‍್ಯಾಲದ ಶ್ರೀಶ್ರೀನಗರದ ನಿವಾಸಿ ಗುಡಿಮಲ್ಲ ರಾಜಗಟ್ಟು (30) ಖಾಸಗಿ ಪಾಠಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಮಹಾಮಾರಿ ಡೆಂಘಿ ರೋಗಕ್ಕೆ ರಾಜುಗಟ್ಟು, ಆತನ ತಾತ ಲಿಂಗಯ್ಯ (70) ಮತ್ತು ಆತನ ಮಗಳು ಶ್ರೀ ವರ್ಷಿಣಿ (6) ಬಲಿಯಾಗಿದ್ದರು. ಇಷ್ಟೇ ಅಲ್ಲದೇ ರಾಜುಗಟ್ಟು ಪತ್ನಿ ಸೋನಿ ಮಗುವಿಗೆ ಜನ್ಮ ನೀಡಿದ ದಿನದ ಬಳಿಕ ಡೆಂಘಿ ರೋಗಕ್ಕೆ ತುತ್ತಾಗಿದ್ದರು. ಇವರೆಲ್ಲರನ್ನೂ ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು.

ಇನ್ನು ಆಗ ತಾನೇ ಹುಟ್ಟಿದ ಮಗುವಿನ ಮೇಲೂ ಮಹಾಮಾರಿ ಡೆಂಘಿ ಅಟ್ಯಾಕ್​ ಮಾಡಿತ್ತು. ಸುಮಾರು 18 ದಿನಗಳ ಕಾಲ ಐಸಿಯುನಲ್ಲಿ ಮಗುವನ್ನಿಟ್ಟು ಕಾಪಾಡಲಾಗಿತ್ತು. ಈ 18 ದಿನಗಳಲ್ಲಿ ಮಗುವಿಗೆ ನಾಲ್ಕುಬಾರಿ ಪ್ಲೇಟ್ಲೆಟ್​ಗಳನ್ನು ಏರಿಸಿ ಹಗಲು, ಇರಳು ಶ್ರಮಪಟ್ಟು ವೈದ್ಯ ಕುಮಾರ್​ವರ್ಮಾ ಅವರು ಮಗುವನ್ನು ಕಾಪಾಡಿದ್ದಾರೆ. ಆ ಮಗುವನ್ನು ಕಾಪಾಡಲು ವೈದ್ಯರು ಸುಮಾರು 10 ಲಕ್ಷದವರೆಗೆ ವೆಚ್ಚ ಮಾಡಿದ್ದಾರೆ.

ಮಗುವನ್ನು ಕಾಪಾಡಿದ ವೈದ್ಯರಿಗೆ ರಾಜುಗಟ್ಟು ಕುಟುಂಬಸ್ಥರು ಸನ್ಮಾನ ಮಾಡಿ ಧನ್ಯವಾದ ತಿಳಿಸಿದ್ದಾರೆ. ಒಂದೇ ತಿಂಗಳಲ್ಲಿ ನಾಲ್ವರನ್ನು ಕಳೆದುಕೊಂಡ ಆ ಕುಟುಂಬದಲ್ಲಿ ಬರೀ ಮೌನ ಆವರಿಸಿತ್ತು. ಈಗ ಮಗು ಬದುಕಿ ಬಂದಿರುವುದರಿಂದ ಸಮಾಧಾನ ಮೂಡಿಸಿದೆ.

ABOUT THE AUTHOR

...view details