ಕರ್ನಾಟಕ

karnataka

ETV Bharat / bharat

ಅಂತರ್​​-ರಾಜ್ಯ ಪ್ಯಾಸೆಂಜರ್​ ರೈಲು ಆರಂಭ... ಕೇಂದ್ರದ ನಡೆ ಸ್ವಾಗತಿಸಿದ ಚಿದಂಬರಂ

ನಾಳೆಯಿಂದ ದೇಶದ ಪ್ರಮುಖ ನಗರಗಳಲ್ಲಿ ಅಂತರ್​ - ರಾಜ್ಯ ಪ್ಯಾಸೆಂಜರ್​ ರೈಲು ಆರಂಭಗೊಳ್ಳಲಿದೆ. ಕೇಂದ್ರದ ಈ ನಿರ್ಧಾರಕ್ಕೆ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

By

Published : May 11, 2020, 10:53 AM IST

Chidambaram
Chidambaram

ನವದೆಹಲಿ:ದೇಶದ ಪ್ರಮುಖ ನಗರಗಳಲ್ಲಿ ನಾಳೆಯಿಂದ ಕೆಲವೊಂದು ಷರತ್ತುಗಳೊಂದಿಗೆ ಪ್ಯಾಸೆಂಜರ್​ ರೈಲು ಓಡಾಟ ನಡೆಸಲಿದ್ದು, ಅದಕ್ಕಾಗಿ ಇಂದು ಸಂಜೆ 4 ಗಂಟೆಯಿಂದ ಆನ್​ಲೈನ್​ ಬುಕ್ಕಿಂಗ್​ ಕೂಡ ಆರಂಭಗೊಳ್ಳಲಿದೆ. ಕೇಂದ್ರದ ಈ ನಿರ್ಧಾರಕ್ಕೆ ಚಿದಂಬರಂ ಶಹಬ್ಬಾಸ್​ಗಿರಿ ನೀಡಿದ್ದಾರೆ.

ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಡೆ ಸ್ವಾಗತಿಸಿರುವ ಮಾಜಿ ಹಣಕಾಸು ಸಚಿವ, ಕಾಂಗ್ರೆಸ್​ ಮುಖಂಡ ಚಿದಂಬರಂ, ಕೇಂದ್ರ ಸರ್ಕಾರ ದೇಶದಲ್ಲಿ ಅಂತರ್​ - ರಾಜ್ಯ ರೈಲು ಆರಂಭಿಸಿರುವ ನಿರ್ಧಾರ ಉತ್ತಮ ನಡೆಯಾಗಿದ್ದು, ಅದೇ ರೀತಿಯಲ್ಲಿ ಬಸ್​ ಸೇವೆ ಕೂಡ ಆರಂಭ ಮಾಡಬೇಕು ಎಂದಿದ್ದಾರೆ.

ನಾಳೆಯಿಂದ ಪ್ಯಾಸೆಂಜರ್​ ರೈಲು ಸೇವೆ... ಇಂದಿನಿಂದಲೇ ಆನ್​ಲೈನ್​ ಬುಕ್ಕಿಂಗ್​ ಆರಂಭ

ದೇಶದ ಆರ್ಥಿಕತೆ ಹಾಗೂ ವಾಣಿಜ್ಯ ಚಟುವಟಿಕೆ ನಿರಂತರವಾಗಿ ನಡೆಯಬೇಕಾದರೆ ರೈಲು ಹಾಗೂ ರಸ್ತೆ ಸಂಚಾರ ಆರಂಭ ಮಾಡುವುದು ಅತಿ ಅವಶ್ಯ ಎಂದಿದ್ದಾರೆ.

ಆರ್ಥಿಕತೆಯ ಮೇಲೆ ಕೋವಿಡ್​-19 ಬಿಕ್ಕಟ್ಟಿನ ಪರಿಣಾಮದಿಂದಾಗಿ ಆದಾಯದಲ್ಲಿನ ನಿರೀಕ್ಷಿತ ಕೊರತೆ ಎದುರಿಸಲು ಪ್ರಸಕ್ತ ಹಣಕಾಸು ವರ್ಷದಲ್ಲಿ 4.2 ಲಕ್ಷ ಕೋಟಿ ರೂ.ನಿಂದ 12 ಲಕ್ಷ ಕೋಟಿ ರೂ. ಮಾರುಕಟ್ಟೆ ಸಾಲ ಪಡೆಯಲು ಕೇಂದ್ರ ನಿರ್ಧರಿಸಿದ್ದ ನಡೆಯನ್ನು ಚಿದಂಬರಂ ಶ್ಲಾಘಿಸಿದ್ದರು.

ABOUT THE AUTHOR

...view details