ಕರ್ನಾಟಕ

karnataka

ಮೋದಿ 'ಚಾಯ್​ವಾಲ'ನಾದರೆ, ನಾವು 'ದೂದ್​ವಾಲ': ಅಖಿಲೇಶ್​ ತಿರುಗೇಟು

ನರೇಂದ್ರ ಮೋದಿ ಅವರ 'ಚಾಯ್​ವಾಲ' ಘೋಷಣೆಗೆ ಅಖಿಲೇಶ್​ ಯಾದವ್​ 'ದೂದ್​ವಾಲ' (ಹಾಲು ಮಾರುವವರು)ಎಂಬ ಪ್ರತಿ ಘೋಷಣೆ ಪರಿಚಯಿಸಿದ್ದಾರೆ.

By

Published : Apr 19, 2019, 12:11 PM IST

Published : Apr 19, 2019, 12:11 PM IST

ಚಾಯ್​ವಾಲಗೆ ದೂದ್​ವಾಲ ಕೌಂಟರ್​

ಆಜಂ​ಘರ್​ (ಯುಪಿ)​: ಕಳೆದ ಲೋಕಸಭೆ ಚುನಾವಣೆಯಲ್ಲಿ ಭಾರಿ ಸುದ್ದಿ ಮಾಡಿದ್ದ ನರೇಂದ್ರ ಮೋದಿ ಅವರ 'ಚಾಯ್​ವಾಲ' ಘೋಷಣೆಗೆ ಈ ಬಾರಿ ಎಸ್​ಪಿಯ ಅಖಿಲೇಶ್​ ಯಾದವ್​ 'ದೂದ್​ವಾಲ' (ಹಾಲು ಮಾರುವವರು)ಎಂಬ ಪ್ರತಿ ಘೋಷಣೆ ಪರಿಚಯಿಸಿದ್ದಾರೆ.

ಬಿಎಸ್​ಪಿ ಜತೆ ಕೈ ಜೋಡಿಸಿರುವ ಉತ್ತರಪ್ರದೇಶದ ಮಾಜಿ ಸಿಎಂ ಅಖಿಲೇಶ್​ ಯಾದವ್​, ಪ್ರಧಾನಿ ಮೋದಿ ವಿರುದ್ಧ ರಾಜಕೀಯ ಸಮರ ಸಾರಿದ್ದಾರೆ. ನಿನ್ನೆ ಆಜಂಘರ್​ ಸಂಸತ್​ ಕ್ಷೇತ್ರ ಪ್ರಚಾರದ ವೇಳೆ, ದೂದ್​ ವಾಲ ಎಂಬ ಪ್ರತಿ ಘೋಷಣೆ ಸಾರಿದರು. ಮೋದಿ ಚಾಯ್​ವಾಲನಾದರೆ, ನಾವು ದೂದ್​ವಾಲರು. ಒಳ್ಳೆಯ ಹಾಲಿಲ್ಲದೆ, ಒಳ್ಳೆಯ ಟೀ ಮಾಡಲು ಸಾಧ್ಯವೇ ಇಲ್ಲ ಎಂದು ಕುಟುಕಿದ್ದಾರೆ.

ಎಸ್​ಪಿ, ಬಿಎಸ್​ಪಿ ಹಾಗೂ ರಾಷ್ಟ್ರೀಯ ಲೋಕದಳ ಸೇರಿರುವುದು ಮಹಾಮಿಲಾವತ್​ ಎಂದು ಬಿಜೆಪಿಗರು ವ್ಯಂಗ್ಯವಾಡುತ್ತಾರೆ. 38 ಪಕ್ಷಗಳು ನಿಮ್ಮೊಟ್ಟಿಗೆ ಸೇರಿರುವುದನ್ನು ಏನನ್ನಬೇಕು? ಎಂದು ಪ್ರಶ್ನಿಸಿದರು. ಬಿಜೆಪಿಗರ ವಿರುದ್ಧ ವಾಗ್ದಾಳಿಯನ್ನೂ ನಡೆಸಿದರು.

ABOUT THE AUTHOR

...view details