ಕರ್ನಾಟಕ

karnataka

ETV Bharat / bharat

ಸರ್ಕಾರಿ ಅಧಿಕಾರಿಗೆ ಆವಾಜ್​... ಕೇಂದ್ರ ಸಚಿವ ಅಶ್ವಿನಿ ಕುಮಾರ್ ಸೇರಿ 150 ಮಂದಿ ವಿರುದ್ಧ ಎಫ್​ಐಆರ್​ - ಸರ್ಕಾರಿ ,ಆವಾಜ್,ಕೇಂದ್ರ ಸಚಿವ ಅಶ್ವಿನಿ ಕುಮಾರ್ ,ಎಫ್​ಐಆರ್​ ,

ಸರ್ಕಾರಿ ಅಧಿಕಾರಿಗೆ ಕರ್ತವ್ಯ ನಿರ್ವಹಿಸಲು ತೊಂದರೆ ಮಾಡಿದ ಆರೋಪದ ಮೇಲೆ ಸಚಿವರು ಹಾಗೂ ಬಿಜೆಪಿ ನಾಯಕ ರಾನಾ ಪ್ರತಾಪ್​ ಸಿಂಗ್​ ಸೇರಿದಂತೆ ಬೆಂಬಲಿಗರ ಮೇಲೆ ಕೇಸ್​ ಬುಕ್​ ಆಗಿದೆ.

ಕೇಂದ್ರ ಸಚಿವ ಅಶ್ವಿನಿ ಕುಮಾರ್

By

Published : Apr 1, 2019, 9:58 AM IST

ಬಕ್ಸರ್​: ಬಿಹಾರದ ಬಕ್ಸರ್​ನಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದನ್ನು ತಡೆಯಲು ಮುಂದಾದ ಸರ್ಕಾರಿ ಅಧಿಕಾರಿಗೆ ಆವಾಜ್​ ಹಾಕಿದ ಕೇಂದ್ರ ಸಚಿವ ಅಶ್ವಿನಿ ಕುಮಾರ್​ ಹಾಗೂ ಅವರ 150 ಬೆಂಬಲಿಗರ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಬಕ್ಸರ್​ ಮೂಲಕ ಹಾದು ಹೋಗುತ್ತಿದ್ದ ಸಚಿವರನ್ನು ರಾಜ್ಯ ಉಪ ವಿಭಾಗಾಧಿಕಾರಿ ಉಪಾಧ್ಯಾಯ್​ ಅವರು ತಡೆದರು. ಕಾರಿನಿಂದ ಕೆಳಕ್ಕಿಳಿದ ಅಶ್ವಿನಿ ಅವರು ಸರ್ಕಾರಿ ಅಧಿಕಾರಿಗೆ ಆವಾಜ್​ ಹಾಕಿ ಕೆಟ್ಟದಾಗಿ ನಡೆದುಕೊಂಡರು ಎಂದು ತಿಳಿದುಬಂದಿದೆ.

ಸರ್ಕಾರಿ ಅಧಿಕಾರಿಗೆ ಕರ್ತವ್ಯ ನಿರ್ವಹಿಸಲು ತೊಂದರೆ ಮಾಡಿದ ಆರೋಪದ ಮೇಲೆ ಸಚಿವರು ಹಾಗೂ ಬಿಜೆಪಿ ನಾಯಕ ರಾನಾ ಪ್ರತಾಪ್​ ಸಿಂಗ್​ ಸೇರಿದಂತೆ ಬೆಂಬಲಿಗರ ಮೇಲೆ ಕೇಸ್​ ಬುಕ್​ ಆಗಿದೆ.

ಕಾರಿನಿಂದ ಇಳಿದ ಸಚಿವರು ಅಧಿಕಾರಿಗೆ ಬೆದರಿಕೆ ಹಾಕಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

For All Latest Updates

TAGGED:

ABOUT THE AUTHOR

...view details