ಕರ್ನಾಟಕ

karnataka

By

Published : Oct 27, 2020, 10:17 AM IST

Updated : Oct 27, 2020, 10:39 AM IST

ETV Bharat / bharat

ಭೂಸೇನಾ ದಿನಾಚರಣೆ: ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ವಿಶೇಷ ಗೌರವ

ಭಾರತದ ಮೇಲೆ ಪಾಕಿಸ್ತಾನ ಮಾಡಿದ ಮೊದಲ ದಾಳಿಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿ ಸಾಹಸ ಮೆರೆದ ಭಾರತದ ವೀರ ಯೋಧರ ಸ್ಮರಣಾರ್ಥವಾಗಿ ಭೂಸೇನಾ ದಿನಾಚರಣೆಯನ್ನು ಆಚರಿಸಲಾಯಿತು.

ಕಾಲಾಳುಪಡೆ ದಿನಾಚರಣೆಯಲ್ಲಿ ಭಾಗಿಯಾದ ಯುಎಸ್ ವಿದೇಶಾಂಗ ಕಾರ್ಯದರ್ಶಿ
ಕಾಲಾಳುಪಡೆ ದಿನಾಚರಣೆಯಲ್ಲಿ ಭಾಗಿಯಾದ ಯುಎಸ್ ವಿದೇಶಾಂಗ ಕಾರ್ಯದರ್ಶಿ

ನವದೆಹಲಿ:ಕಾಲಾಳು ಪಡೆ ಅಥವಾ ಭೂಸೇನಾ ದಿನಾಚರಣೆಯಂದು ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಮತ್ತು ಭೂಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾನೆ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು.

ಭಾರತದ ಕಾಲಾಳುಪಡೆ ದಿನಾಚರಣೆ

ಈ ದಿನದ ಮಹತ್ವ:

1947ರ ಅಕ್ಟೋಬರ್ 27 ರಂದು ಕಾಶ್ಮೀರ ಕಣಿವೆಯಲ್ಲಿ ಭಾರತೀಯ ನೆಲದ ಮೇಲೆ ಪಾಕಿಸ್ತಾನ ಮಾಡಿದ ಮೊದಲ ದಾಳಿಯನ್ನು ಭಾರತೀಯ ಸೇನೆಯು ದಿಟ್ಟವಾಗಿ ಹಿಮ್ಮೆಟ್ಟಿಸಿತು. ಸ್ವತಂತ್ರ ಭಾರತದ ಮೊದಲ ಮಿಲಿಟರಿ ಘಟನೆಯ ಸ್ಮರಣಾರ್ಥವಾಗಿ ಕಾಲಾಳುಪಡೆ ದಿನವನ್ನು ಆಚರಿಸಲಾಗುತ್ತದೆ.

ಈ ಕಾರ್ಯಾಚರಣೆಯಲ್ಲಿ ಸ್ವತಂತ್ರ ಭಾರತದ ಮೊದಲ ಪರಮವೀರ ಚಕ್ರ ಗೌರವವನ್ನು ಮೇಜರ್ ಸೋಮನಾಥ್ ಶರ್ಮ್‌ ಅವರಿಗೆ ನೀಡಲಾಗಿದೆ. ಆದ್ದರಿಂದ ಈ ದಿನವನ್ನು ಕುಮಾನ್ ರೆಜಿಮೆಂಟ್ ಮತ್ತು ಸಿಖ್ ರೆಜಿಮೆಂಟ್ ದಿನ ಎಂದೂ ನೆನಪಿಸಿಕೊಳ್ಳಲಾಗುತ್ತದೆ.

ಅಮೆರಿಕ ವಿದೇಶಾಂಗ ಕಾರ್ಯದರ್ಶಿಯಿಂದಲೂ ಗೌರವ ಅರ್ಪಣೆ:

ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಯುಎಸ್ ವಿದೇಶಾಂಗ ಕಾರ್ಯದರ್ಶಿ ಮೈಕೆಲ್ ಪೊಂಪಿಯೊ ಮತ್ತು ಯುಎಸ್ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಸಹ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು.

ಇದನ್ನೂ ಓದಿ:ಇಂಡೋ-ಅಮೆರಿಕ ಸ್ನೇಹ ವೃದ್ಧಿ, 2+2 ಸಂಭಾಷಣೆ ನಡೆಸಲು ಯುಎಸ್​ ವಿದೇಶಾಂಗ ಕಾರ್ಯದರ್ಶಿ ಭಾರತ ಪ್ರವಾಸ

ಯುಎಸ್​ ವಿದೇಶಾಂಗ ಕಾರ್ಯದರ್ಶಿ ಭಾರತ ಪ್ರವಾಸ:

ಯುಎಸ್ ವಿದೇಶಾಂಗ ಕಾರ್ಯದರ್ಶಿ ಮೈಕೆಲ್ ಪೊಂಪಿಯೊ ಮತ್ತು ರಕ್ಷಣಾ ಕಾರ್ಯದರ್ಶಿ ಮಾರ್ಕ್ ಟಿ. ಎಸ್ಪರ್ ಇಂದು ದೆಹಲಿಗೆ ಆಗಮಿಸಿದ್ದು, ಭಾರತೀಯ ನಿಯೋಗದೊಂದಿಗೆ ಅಮೆರಿಕ-ಇಂಡಿಯಾ ಸಮಗ್ರ ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವವನ್ನು ಬಲಪಡಿಸುವ ಬಗ್ಗೆ ಚರ್ಚಿಸಲಿದ್ದಾರೆ. ಉಭಯ ರಾಷ್ಟ್ರಗಳ ಸ್ಥಿರತೆ ಮತ್ತು ಸಮೃದ್ಧಿ ಉತ್ತೇಜನಯ ಸಹಕಾರ ವಿಸ್ತರಣೆ ಹಾಗೂ ಇಂಡೋ-ಪೆಸಿಫಿಕ್ ಮತ್ತು ವಿಶ್ವವನ್ನು ಮುನ್ನಡೆಸಲು ಮೂರನೇ ಯುಎಸ್-ಇಂಡಿಯಾ 2+2 ಸಚಿವರ ಮಟ್ಟದ ಸಂಭಾಷಣೆ ನಡೆಯಲಿದೆ ಎಂದು ಯುಎಸ್ ವಿದೇಶಾಂಗ ವಕ್ತಾರ ಮೋರ್ಗನ್ ಒರ್ಟಾಗಸ್ ಹೇಳಿದ್ದಾರೆ.

Last Updated : Oct 27, 2020, 10:39 AM IST

For All Latest Updates

TAGGED:

ABOUT THE AUTHOR

...view details