ನವದೆಹಲಿ:ಬಹುಕೋಟಿ ಶಾರದಾ ಚಿಟ್ ಫಂಡ್ ಹಗರಣದ ತನಿಖೆ ನಡೆಸಿದ್ದಾಗ ಹಲವು ದಾಖಲೆಗಳನ್ನ ನಾಶ ಮಾಡಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಕೋಲ್ಕತ್ತಾದ ಮಾಜಿ ಪೊಲೀಸ್ ಕಮಿಷನರ್ ರಾಜೀವ್ ಕುಮಾರ್ ಅವರನ್ನ ಬಂಧಿಸಲು ಅನುಮತಿ ಕೊಡಬೇಕು ಎಂದು ಸಿಬಿಐ ಸುಪ್ರೀಂಕೋರ್ಟ್ಗೆ ಮನವಿ ಮಾಡಿದೆ.
ಮಾಜಿ ಪೊಲೀಸ್ ಕಮಿಷನರ್ ಬಂಧನಕ್ಕೆ ಸುಪ್ರೀಂ ನೀಡುತ್ತಾ ಫರ್ಮಿಷನ್? - ಸುಪ್ರೀಂಕೋರ್ಟ್
ಕೋಲ್ಕತ್ತಾದ ಮಾಜಿ ಪೊಲೀಸ್ ಕಮಿಷನರ್ ರಾಜೀವ್ ಕುಮಾರ್ ಅವರನ್ನ ಬಂಧಿಸಲು ಸಿಬಿಐ ಸುಪ್ರೀಂಕೋರ್ಟ್ಗೆ ಮನವಿ ಮಾಡಿದೆ.
![ಮಾಜಿ ಪೊಲೀಸ್ ಕಮಿಷನರ್ ಬಂಧನಕ್ಕೆ ಸುಪ್ರೀಂ ನೀಡುತ್ತಾ ಫರ್ಮಿಷನ್?](https://etvbharatimages.akamaized.net/etvbharat/images/768-512-2920681-thumbnail-3x2-sc.jpg)
ಮಾಜಿ ಪೊಲೀಸ್ ಕಮಿಷನರ್ ಬಂಧಿಸಲು ಸುಪ್ರೀಂಕೋರ್ಟ್ಗೆ ಮನವಿ
ಕಳೆದ ಫೆಬ್ರವರಿ ಐದರಂದು ಸುಪ್ರೀಂಕೋರ್ಟ್ ರಾಜೀವ್ ಕುಮಾರ್ ವಿಚಾರಣೆಗೆ ಸಿಬಿಐಗೆ ಅನುಮತಿ ನೀಡಿತ್ತು. ಆದರೆ, ಬಂಧಿಸದಂತೆ ನಿರ್ದೇಶನ ನೀಡಿತ್ತು. ಅಂದು ನೀಡಿದ್ದ ಆದೇಶ ಹಿಂಪಡೆಯಬೇಕು ಎಂದು ಕೋರಿ ಸಿಬಿಐ ಸುಪ್ರೀಂಕೋರ್ಟ್ಗೆ ಮನವಿ ಮಾಡಿಕೊಂಡಿದೆ.
ಪ್ರಕರಣದಲ್ಲಿ ರಾಜೀವ್ ಕುಮಾರ್ ಬಂಧನಕ್ಕೆ ಬೇಕಾದ ದಾಖಲೆಗಳು ನಮ್ಮ ಬಳಿ ಇಂದು ಅರೆಸ್ಟ್ ಮಾಡಲು ಅನುಮತಿ ನೀಡಬೇಕು ಎಂದು ಸಿಬಿಐ ಮನವಿ ಮಾಡಿದೆ.