ನವದೆಹಲಿ/ ಅಮರಾವತಿ: ಸುಪ್ರೀಂಕೋರ್ಟ್ ಹಾಗೂ ಆಂಧ್ರಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿಗಳ ಕುರಿತು ಮಾನಹಾನಿ ವಿಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ 16 ಮಂದಿ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ಸಿಬಿಐ ತನಿಖೆ ಕೈಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಂಧ್ರಪ್ರದೇಶದ ಹೈಕೋರ್ಟ್ ಆದೇಶದ ಮೇರೆಗೆ ಕೇಂದ್ರೀಯ ತನಿಖಾ ದಳ ಕೋರ್ಟ್ನ ರಿಜಿಸ್ಟ್ರಾರ್ ಜನರಲ್ ಬಿ.ರಾಜಶೇಖರ್ ಅವರ ದೂರಿನ ಮೇರೆಗೆ ರಾಜ್ಯ ಸಿಐಡಿ ದಾಖಲಿಸಿರುವ 12 ಪ್ರಕರಣಗಳಲ್ಲಿ ತನಿಖೆಯನ್ನು ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಂಧ್ರ ಪ್ರದೇಶದ ಕೆಲವು ಪ್ರಮುಖ ಹುದ್ದೆಯಲ್ಲಿರುವವರೇ, ನ್ಯಾಯಮೂರ್ತಿಗಳ ಕುರಿತು ನಿಂದನಾತ್ಮಕವಾಗಿ ಬರಹ, ಭಾಷಣ, ಜಾತಿ ಹಾಗೂ ಅವರು ಭ್ರಷ್ಟರು ಎಂಬಂತೆ ಬಿಂಬಿಸುವ ಪೋಸ್ಟ್ಗಳನ್ನು ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಸುಪ್ರೀಂ, ಹೈಕೋರ್ಟ್ನ ಕೆಲವು ನ್ಯಾಯಮರ್ತತಿಗಳಿಗೆ ಜೀವ ಬೆದರಿಕೆಯನ್ನೂ ಹಾಕಿದ್ದಾರೆ. ಅಲ್ಲದೆ, ಅವರ ತೀರ್ಪುಗಳ ಬಗ್ಗೆಯೂ ಉಲ್ಲೇಖಿಸಿ ನಿಂದಿಸಲಾಗಿದೆ ಎನ್ನಲಾಗ್ತಿದೆ.