ಕರ್ನಾಟಕ

karnataka

ETV Bharat / bharat

ವಿಶ್ಲೇಷಣೆ: ನಾವು ಭಾರತೀಯ ಪ್ರಜಾಪ್ರಭುತ್ವವನ್ನು ರಕ್ಷಿಸಬಹುದೇ?

ಮಾಜಿ ಮುಖ್ಯ ಚುನಾವಣಾ ಆಯುಕ್ತ ಟಿ.ಎನ್.ಶೇಷನ್ ಅವರು ಚುನಾವಣಾ ಪ್ರಕ್ರಿಯೆಯು ಶ್ರೀಮಂತರಿಂದ ಕಳಂಕಿತರಾಗುವ ಮತ್ತು ಸಮಾಜ ವಿರೋಧಿಗಳ ಕೈ ಸೇರಿ ಒಂದು ಸಾಧನವೆನಿಸುವ ಮೊದಲು ಸುಧಾರಣೆಗಳ ಅಗತ್ಯತೆವಿದೆ ಎಂದು ಎಚ್ಚರಿಕೆ ನೀಡಿ ಇಪ್ಪತ್ತು ವರ್ಷಗಳು ಕಳೆದಿವೆ.

By

Published : Mar 7, 2020, 5:12 PM IST

can-we-rescue-indian-democracy
ನಾವು ಭಾರತೀಯ ಪ್ರಜಾಪ್ರಭುತ್ವವನ್ನು ರಕ್ಷಿಸಬಹುದೇ?

ಮಾಜಿ ಮುಖ್ಯ ಚುನಾವಣಾ ಆಯುಕ್ತ ಟಿ.ಎನ್.ಶೇಷನ್ ಅವರು ಚುನಾವಣಾ ಪ್ರಕ್ರಿಯೆಯು ಶ್ರೀಮಂತರಿಂದ ಕಳಂಕಿತರಾಗುವ ಮತ್ತು ಸಮಾಜ ವಿರೋಧಿಗಳ ಕೈ ಸೇರಿ ಒಂದು ಸಾಧನವೆನಿಸುವ ಮೊದಲು ಸುಧಾರಣೆಗಳ ಅಗತ್ಯತೆವಿದೆ ಎಂದು ಎಚ್ಚರಿಕೆ ನೀಡಿ ಇಪ್ಪತ್ತು ವರ್ಷಗಳು ಕಳೆದಿವೆ. ಅವರ ಮಾತುಗಳಿಗೆ ಕಿವಿಗೊಡದ ಕಾರಣ, 2019 ರ ಸಾರ್ವತ್ರಿಕ ಚುನಾವಣೆಗಳನ್ನು 60,000 ಕೋಟಿ ರೂಪಾಯಿಗಳಷ್ಟು ದೊಡ್ಡ ವೆಚ್ಚದಲ್ಲಿ ನಡೆಸಲಾಯಿತು, ಇದು ಅಮೆರಿಕ ಅಧ್ಯಕ್ಷೀಯ ಚುನಾವಣೆಯ ವೆಚ್ಚಕ್ಕಿಂತ 25 ಪ್ರತಿಶತ ಹೆಚ್ಚಾಗಿದೆ.

ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ (ಸಿಎಮ್ಎಸ್) ನಡೆಸಿದ ಅಧ್ಯಯನದ ಪ್ರಕಾರ, 90 ಕೋಟಿ ಮತದಾರರನ್ನು ಹೊಂದಿರುವ ಭಾರತದಲ್ಲಿ ನಡೆಯುತ್ತಿರುವ ವ್ಯಾಪಕ ಮತ್ತು ದುಬಾರಿ ಚುನಾವಣೆಗೆ ವಿಶ್ವದ ಯಾವುದೇ ದೇಶವು ಸರಿಸಾಟಿಯಾಗಿ ನಿಲ್ಲಲಾರದು. ದೇಶದ 80 ಸಂಸದ ಕ್ಷೇತ್ರಗಳ ಅಭ್ಯರ್ಥಿಗಳು ಚುನಾವಣೆಯ ಸಮಯದಲ್ಲಿ 100 ಕೋಟಿ ರೂ. ಖರ್ಚು ಮಾಡಿದ್ದಾರೆ. 1998ರ ಇಂದ್ರಜಿತ್ ಗುಪ್ತಾ ಸಮಿತಿಯು ಸಾರ್ವತ್ರಿಕ ಚುನಾವಣೆಗಳಲ್ಲಿ ಹಣದ ಹರಿವನ್ನು ಗಮನಿಸಿ, ಕೆಲವು ಅಭ್ಯರ್ಥಿಗಳ ವೆಚ್ಚವನ್ನು ಸರ್ಕಾರ ಭರಿಸಬೇಕಾಗುತ್ತದೆ ಎಂದು ಸ್ಪಷ್ಟ ಸಲಹೆಗಳನ್ನು ನೀಡಿತು. ವಿಜೇತ ಅಭ್ಯರ್ಥಿಗಳು, ಅಪರಾಧಿಗಳು ಮತ್ತು ಅಧಿಕಾರಕ್ಕೆ ಹಸಿದ ರಾಜಕಾರಣಿಗಳಿಗೆ ಕಪ್ಪು ಹಣದ ಹರಿವು ಎಷ್ಟು ನಿಕಟ ಸಂಬಂಧ ಹೊಂದಿದೆ ಎಂಬುದನ್ನು ಇತ್ತೀಚಿನ ಇತಿಹಾಸ ತೋರಿಸುತ್ತದೆ.

ಚುನಾವಣೆಗಳಲ್ಲಿ ಹಣದ ಹರಿವನ್ನು ನಿರ್ಬಂಧಿಸುವ ವಿಷಯ ಬಂದಾಗಲೆಲ್ಲಾ, ಅಭ್ಯರ್ಥಿಗಳ ವೆಚ್ಚವನ್ನು ಸರ್ಕಾರವು ಹೊತ್ತುಕೊಳ್ಳುವ ಪರಿಹಾರವನ್ನು ಚರ್ಚೆಗೆ ತರಲಾಗುತ್ತದೆ. ಅಭ್ಯರ್ಥಿಗಳ ಚುನಾವಣಾ ವೆಚ್ಚವನ್ನು ಕೇಂದ್ರವು ಭರಿಸಲಿದೆ ಎಂಬ ಪ್ರಸ್ತಾಪವನ್ನು ಚುನಾವಣಾ ಆಯೋಗ ಅಂಗೀಕರಿಸಿಲ್ಲ ಎಂದು ಮೋದಿ ಸರ್ಕಾರ ಇತ್ತೀಚೆಗೆ ಸಂಸತ್ತಿಗೆ ವರದಿ ಮಾಡಿತ್ತು. ಇದಲ್ಲದೆ, ಕೇಂದ್ರವು ನಿಗಧಿಪಡಿಸಿದ ಖರ್ಚುಗಳಿಗಿಂತ ಹೆಚ್ಚಿನ ಚುನಾವಣೆ ವೆಚ್ಚವನ್ನು ನಿಷೇಧಿಸುವ ಅಥವಾ ನಿರ್ಬಂಧಿಸುವಲ್ಲಿ ಆಯೋಗ ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿದೆ ಎಂದು ಮೋದಿ ಸರ್ಕಾರ ಹೇಳಿದೆ. ಅಪರಾಧೀಕರಿಸಿದ ವ್ಯವಸ್ಥೆಯನ್ನು ತೊಡೆದುಹಾಕದೆ, ಪಾರದರ್ಶಕತೆಯನ್ನು ಸುಧಾರಿಸದೆ ಮತ್ತು ನಿಯಂತ್ರಕ ಕಾರ್ಯವಿಧಾನವನ್ನು ಸ್ಥಾಪಿಸದೆ ಪಕ್ಷಗಳಿಗೆ ಚುನಾವಣಾ ಹಣವನ್ನು ಒದಗಿಸಿದರೆ ಸರ್ಕಾರವು ಅರಾಜಕತೆಗೆ ಉತ್ತೇಜನ ನೀಡಲಿದೆ ಎಂದು ನಿರ್ವಾಚನ್ ಸದನದ ಮಾಜಿ ಸಿಇಸಿ ನಾಸಿಮ್ ಜೈದಿ ಹೇಳಿದ್ದಾರೆ. ಪ್ರಸ್ತುತ ಚುನಾವಣಾ ವ್ಯವಸ್ಥೆಯನ್ನು ಪರಿವರ್ತಿಸುವ ಗುರಿಯನ್ನು ಹೊಂದಿರುವ ಸುಧಾರಣೆಗಳನ್ನು ಕಾರ್ಯಾನುಷ್ಠಾನಕ್ಕೆ ತರಲು ಸಮಯದ ಅವಶ್ಯಕತೆಯಿದೆ.

ಕಳೆದ ಏಳು ದಶಕಗಳಿಂದ ಕಪ್ಪು ಹಣವು ಭಾರತೀಯ ಪ್ರಜಾಪ್ರಭುತ್ವಕ್ಕೆ ಇಂಧನವಾಗಿದೆ ಎಂದು ಜುಲೈ 2017 ರಲ್ಲಿ ಅರುಣ್ ಜೇಟ್ಲಿ ಒಪ್ಪಿಕೊಂಡಿದ್ದರು. ಮತದಾರರು ಸಾರ್ವಜನಿಕ ಪ್ರತಿನಿಧಿಗಳು, ಸರ್ಕಾರಗಳು, ರಾಜಕೀಯ ಪಕ್ಷಗಳು ಮತ್ತು ಸಂಸತ್ತು ಒಟ್ಟಾಗಿ ಭ್ರಷ್ಟಾಚಾರವನ್ನು ನಿಗ್ರಹಿಸುವಲ್ಲಿ ವಿಫಲರಾಗಿವೆ ಎಂದು ಅವರು ಹೇಳಿದ್ದರು. ಕಪ್ಪು ಹಣದ ಹರಿವನ್ನು ತೊಡೆದುಹಾಕಲು ಅವರು ಚುನಾವಣಾ ಬಾಂಡ್‌ಗಳ ಪರಿಕಲ್ಪನೆಯನ್ನು ಪರಿಚಯಿಸಿದರು. ಬಾಂಡ್‌ಗಳ ವ್ಯವಸ್ಥೆಯು ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಸೂಚಿಸುತ್ತದೆ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.

2019 ರ ಜುಲೈನಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಚುನಾವಣೆಯ ವೆಚ್ಚವನ್ನು ಒಂದೇ ಪಕ್ಷವು 90 ಪ್ರತಿಶತದಷ್ಟು ಆರ್ಥಿಕ ಸಂಪನ್ಮೂಲಗಳನ್ನು ಸಂಗ್ರಹಿಸುತ್ತಿರುವುದರಿಂದ ಸರ್ಕಾರ ಭರಿಸಬೇಕು ಎಂದು ಹೇಳಿದರು. ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ದಶಕಗಳಿಂದ ಸಂಪತ್ತು, ಅಧಿಕಾರ ಮತ್ತು ರಾಜಕೀಯ ಶಕ್ತಿಯ ಹಿಡಿತದಿಂದ ಬಳಲುತ್ತಿದೆ. ಇದನ್ನು ಸುಧಾರಿಸಲು, ದಿನೇಶ್ ಗೋಸ್ವಾಮಿ ಸಮಿತಿಯಿಂದ ಹಿಡಿದು ಎರಡನೇ ಆಡಳಿತ ಸುಧಾರಣಾ ಆಯೋಗದವರೆಗಿನ ಹಲವಾರು ವರದಿಗಳನ್ನು ಮರುಮೌಲ್ಯಮಾಪನ ಮಾಡಬೇಕು.

ಶಾಸಕಾಂಗವು 2013 ರಲ್ಲಿ ಸಮಗ್ರ ಚುನಾವಣಾ ಸುಧಾರಣೆಗಳ ಕುರಿತು ಎಂಟು ಪ್ರಮುಖ ವಿಷಯಗಳ ಕುರಿತು ಒಂದು ದಾಖಲೆಯನ್ನು ರಚಿಸಿ ಅದನ್ನು ನ್ಯಾಯಾಂಗ ಸಂಸ್ಥೆಗಳು, ವಕೀಲರು, ರಾಷ್ಟ್ರಮಟ್ಟದ ಸಂಸ್ಥೆಗಳು, ನಾಗರಿಕ ಹಕ್ಕುಗಳ ಆಯೋಗಗಳು, ಶಿಕ್ಷಣ ತಜ್ಞರು, ಸಾರ್ವಜನಿಕ ಪ್ರತಿನಿಧಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ತಜ್ಞರಿಗೆ ತಲುಪಿಸಿತ್ತು. ಅದು ಸ್ವೀಕರಿಸಿದ ಪ್ರತಿಕ್ರಿಯೆಗಳ ಸಂಖ್ಯೆ ಕೇವಲ 150. ರಾಜಕೀಯ ಭ್ರಷ್ಟಾಚಾರವು ಸಮಾಜದ ಪ್ರತಿಯೊಂದು ಭಾಗವನ್ನು ವ್ಯಾಪಿಸಿದಾಗ, ಸರ್ಕಾರಗಳು ಯಾವುದೇ ಕ್ರಮ ತೆಗೆದುಕೊಳ್ಳುವಲ್ಲಿ ಅಸಡ್ಡೆ ಹೊಂದಿರುತ್ತವೆ ಎಂಬುದಕ್ಕೆ ಇದೊಂದು ಉತ್ತಮ ನಿದರ್ಶನವಾಗಿದೆ. ಸಾರ್ವತ್ರಿಕ ವಯಸ್ಕ ಮತದಾನದ ಆಧಾರದ ಮೇಲೆ ಭಾರತದಲ್ಲಿ ಚುನಾವಣೆಗಳು ನಡೆಯುವುದರಿಂದ ಮತದಾರರ ಸಮಗ್ರತೆಯನ್ನು ಕಾಪಾಡುವ ಅಗತ್ಯವಿದೆ ಎಂದು ನ್ಯಾಯಮೂರ್ತಿ ಚಾಗ್ಲಾ ಆರು ದಶಕಗಳ ಹಿಂದೆ ಸೂಚಿಸಿದ್ದರು.

ರಾಜಕೀಯ ಪಕ್ಷಗಳು ಮತದಾರರಿಗೆ ಮತ ಚಲಾಯಿಸುವಂತೆ ವಿನಂತಿಸುವ ಬದಲು ಈಗ ಅವರು ಮತಗಳನ್ನು ಕೋರುವ ಹಂತಕ್ಕೆ ತಲುಪಿದ್ದಾರೆ. ಚುನಾವಣೆಗಳಲ್ಲಿ ಭಾರಿ ಹಣದ ಹರಿವಿನ ಆಗಮನವು ಈ ಎಲ್ಲಾ ಬದಲಾವಣೆಗಳಿಗೆ ಕಾರಣವಾಗಿವೆ. 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಅಭ್ಯರ್ಥಿಗಳ ಚುನಾವಣಾ ಪ್ರಚಾರದ ವೆಚ್ಚ 25,000 ಕೋಟಿ ರೂ. ಚುನಾವಣೆಯ ಪ್ರಸ್ತುತ ಪ್ರವೃತ್ತಿ ಚುನಾವಣೆ ಎಂದರೆ ಜನಸಂಖ್ಯೆಯ ಎಲ್ಲಾ ವರ್ಗದವರಿಗೆ ತಮ್ಮ ಜಾಗೃತಿ ಹೆಚ್ಚಿಸಿಕೊಳ್ಳಲು ಒಂದು ಅವಕಾಶ ಎಂಬ ಅಡ್ವಾಣಿಯವರ ಮಾತುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ.

ಹೊಸ ಸಹಸ್ರಮಾನದ ಡಿಜಿಟಲ್ ತಂತ್ರಜ್ಞಾನವು ರ್ಯಾಲಿಗಳು, ಪ್ರಚಾರಗಳು ಮತ್ತು ರೋಡ್ ಶೋಗಳಿಗಾಗಿ ಹೊಸ ವೇದಿಕೆಗಳನ್ನು ರೂಪಿಸಿದೆ. ಇನ್ನೂ, ಚುನಾವಣಾ ದುಷ್ಕೃತ್ಯ ಅತಿರೇಕವಾಗಿದೆ. ರಾಜಕಾರಣಿಗಳು ಚುನಾಯಿತರಾದ ನಂತರ ಅವರ ಲೂಟಿ ಬಗ್ಗೆ ಜಾಗೃತಿ ಮೂಡಿಸುವುದು ಜಾಗರೂಕ ಸಾಂವಿಧಾನಿಕ ವ್ಯವಸ್ಥೆಗಳ ಜವಾಬ್ದಾರಿಯಾಗಿದೆ. ರಾಜಕೀಯ ಪಕ್ಷಗಳಿಗೆ ಹಣದ ಮೂಲದ ಬಗ್ಗೆ ನಾಗರಿಕರಿಗೆ ತಿಳಿದಿಲ್ಲ ಎಂದು ಕೇಂದ್ರ ಸರ್ಕಾರವೇ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿತ್ತು. ಪಕ್ಷಗಳಲ್ಲಿನ ಇಂತಹ ನಿರ್ಲಕ್ಷ್ಯ ಮನೋಭಾವವನ್ನು ತೊಡೆದುಹಾಕಬೇಕು ಮತ್ತು ಭಾರತೀಯ ಪ್ರಜಾಪ್ರಭುತ್ವವನ್ನು ಹೇಗೆ ಪುನರುಜ್ಜೀವನಗೊಳಿಸಬೇಕು ಎಂಬುದರ ಕುರಿತು ರಾಷ್ಟ್ರಮಟ್ಟದ ಚರ್ಚೆಯನ್ನು ಪ್ರಾರಂಭಿಸಬೇಕು. ಲಾರ್ಡ್ ನೋಲನ್ ಸಮಿತಿಯು 90 ರ ದಶಕದಲ್ಲಿ ಗಮನಿಸಿದಂತೆ, ಭಾರತದ ರಾಜಕೀಯ ಪಕ್ಷಗಳು ಜವಾಬ್ದಾರಿ ಮತ್ತು ಹೊಣೆಗಾರಿಕೆಯನ್ನು ನೀಡುವಲ್ಲಿ ಯುನೈಟೆಡ್ ಕಿಂಗ್‌ಡಂನ ಸೂತ್ರವನ್ನು ಅನುಸರಿಸಬೇಕು. ಪ್ರಜಾಪ್ರಭುತ್ವದ ನಿಯಮಗಳಿಗೆ ಬದ್ಧವಾಗಿರಲು ಪಕ್ಷಗಳನ್ನು ಮರುರೂಪಿಸದಿದ್ದರೆ, ರಾಷ್ಟ್ರವನ್ನು ಉಳಿಸಲು ಸಾಧ್ಯವಿಲ್ಲ.

ABOUT THE AUTHOR

...view details