ಚುರು (ರಾಜಸ್ಥಾನ):ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳ ಮೇಲೆ ಮನುಷ್ಯನ ದೌರ್ಜನ್ಯ ಹೆಚ್ಚಾಗುತ್ತಿದೆ. ರಾಜಸ್ಥಾನದ ಸರ್ದರ್ಶಹರ್ ತಹಸಿಲ್ನಲ್ಲಿ ಮೂವರು ವ್ಯಕ್ತಿಗಳು ಒಂಟೆಯ ಕಾಲಿಗೆ ಕೊಡಲಿಯಿಂದ ಹೊಡೆದಿದ್ದಾರೆ. ಪರಿಣಾಮ, ತೀವ್ರವಾಗಿ ಗಾಯಗೊಂಡ ಒಂಟೆ, ರಕ್ತ ಸ್ರಾವದಿಂದ ಬಳಲಿ ಸಾವನ್ನಪ್ಪಿದೆ.
ರಾಜಸ್ಥಾನ: ಮನುಷ್ಯನ ಕ್ರೌರ್ಯಕ್ಕೆ ಒಂಟೆ ಬಲಿ - ಮೂವರು ಆರೋಪಿಗಳ ಬಂಧನ
ಬೈಕ್ನಿಂದ ಬಂದ ದುಷ್ಕರ್ಮಿಗಳು ಕೊಡಲಿಯಿಂದ ಒಂಟೆಯ ಕಾಲಿಗೆ ಹೊಡೆದು, ಗಂಭೀರವಾಗಿ ಗಾಯಗೊಳಿಸಿ ಅದರ ಸಾವಿಗೆ ಕಾರಣವಾದ ಘಟನೆ ರಾಜಸ್ಥಾನದ ಚುರುವಿನಲ್ಲಿ ನಡೆದಿದೆ.
ಒಂಟೆಯ ಕಾಲಿಗೆ ಕೊಡಲಿಯಿಂದ ಹೊಡೆದ ವ್ಯಕ್ತಿಗಳು
ಗಾಯಗೊಂಡ ಒಂಟೆಯ ಕೈಕಾಲುಗಳಲ್ಲಿ ಯಾವುದೇ ಚಲನೆ ಇಲ್ಲದಿರುವುದನ್ನು ಕಂಡ ಗ್ರಾಮಸ್ಥರು ಪೊಲೀಸರಿಗೆ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹಸಿರು ಹುಲ್ಲುಗಾವಲುಗಳಲ್ಲಿ ಮೇಯುತ್ತಿದ್ದಾಗ 3-4 ಜನ ಬೈಕ್ನಲ್ಲಿ ಬಂದು ಒಂಟೆಯ ಕಾಲಿಗೆ ಕೊಡಲಿಯಿಂದ ಹೊಡೆದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಈವರೆಗೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.