ಕರ್ನಾಟಕ

karnataka

ETV Bharat / bharat

ದೆಹಲಿಯಲ್ಲಿ ಪೌರತ್ವ ಕಿಚ್ಚು: ಭೀಮ್​​​​ ಆರ್ಮಿ ಮುಖ್ಯಸ್ಥ ಮತ್ತೆ ಪೊಲೀಸ್​​​​​ ವಶಕ್ಕೆ - Bhim Army Chief Chandrashekhar Azad has been detained by Police

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ ಭೀಮ್​ ಆರ್ಮಿ ಮುಖ್ಯಸ್ಥ ಚಂದ್ರಶೇಖರ್​ ಅಜಾದ್​ರನ್ನು ದೆಹಲಿ ಪೊಲೀಸರು ಮತ್ತೆ ವಶಕ್ಕೆ ಪಡೆದಿದ್ದಾರೆ. ಶುಕ್ರವಾರ ತಡರಾತ್ರಿ ಜಾಮಾ ಮಸೀದಿ ಬಳಿ ಪ್ರತಿಭಟನೆ ವೇಳೆ ಚಂದ್ರಶೇಖರ್ ಪೊಲೀಸರ ಕೈಗೆ ಸಿಕ್ಕಿದ್ದಾರೆ.

ಚಂದ್ರಶೇಖರ್​ ಅಜಾದ್​ ಪೊಲೀಸ್​ ವಶಕ್ಕೆ, Bhim Army Chief Chandrashekhar Azad has been detained by Police
ಭೀಮ್​ ಆರ್ಮಿ ಮುಖ್ಯಸ್ಥ ಪೊಲೀಸ್​ ವಶಕ್ಕೆ

By

Published : Dec 21, 2019, 8:41 AM IST

ನವದೆಹಲಿ:ರಾಷ್ಟ್ರ ರಾಜಧಾನಿಯಲ್ಲಿ ಪೌರತ್ವ ಕಿಚ್ಚು ದಿನೇ ದಿನೇ ಹೆಚ್ಚುತ್ತಿದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಶುಕ್ರವಾರ ರಾತ್ರಿ ಸಿಎಎ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ ಭೀಮ್​ ಆರ್ಮಿ ಮುಖ್ಯಸ್ಥ ಚಂದ್ರಶೇಖರ್​ ಅಜಾದ್​ರನ್ನು ದೆಹಲಿ ಪೊಲೀಸರು ಮತ್ತೆ ವಶಕ್ಕೆ ಪಡೆದಿದ್ದಾರೆ. ನಿನ್ನೆ ಚಂದ್ರಶೇಖರ್ ಅವರನ್ನು ವಶಕ್ಕೆ ಪಡೆದಿದ್ದಾಗ ತಮ್ಮ ಬೆಂಬಲಿಗರ ಸಹಾಯದಿಂದ ಚಂದ್ರಶೇಖರ್ ತಪ್ಪಿಸಿಕೊಂಡಿದ್ದರು. ಆದರೆ ಶುಕ್ರವಾರ ತಡರಾತ್ರಿ ಜಾಮಾ ಮಸೀದಿ ಬಳಿ ಪ್ರತಿಭಟನೆ ವೇಳೆ ಚಂದ್ರಶೇಖರ್ ಪೊಲೀಸರ ಕೈಗೆ ಸಿಕ್ಕಿದ್ದಾರೆ.

ಚಂದ್ರಶೇಖರ್​ ಅಜಾದ್​ ಪೊಲೀಸ್​ ವಶಕ್ಕೆ

ದೆಹಲಿ ಮೆಟ್ರೋ ಸೇವೆ ಪುನಾರಾರಂಭ...

ಇನ್ನೊಂದೆಡೆ ದೆಹಲಿ ಮೆಟ್ರೋ ನಿಲ್ದಾಣಗಳ ಎಲ್ಲಾ ಆಗಮನ ಹಾಗೂ ನಿರ್ಗಮನ ಬಾಗಿಲುಗಳನ್ನು ತೆರೆಯಲಾಗಿದೆ. ಎಲ್ಲಾ ನಿಲ್ದಾಣಗಳಲ್ಲೂ ನಿತ್ಯದ ಮೆಟ್ರೋ ಸೇವೆಗಳು ಪುನಾರಾರಂಭಗೊಂಡಿವೆ.

ABOUT THE AUTHOR

...view details