ಕರ್ನಾಟಕ

karnataka

ಬಿಲಾಸ್ಪುರದಲ್ಲಿ ಕೇರಳದ ಕಾಲೇಜು ಬಸ್​ ಪಲ್ಟಿ: 51 ವಿದ್ಯಾರ್ಥಿಗಳಿಗೆ ಗಾಯ

ದೆಹಲಿಯಿಂದ ಮನಾಲಿ ಕಡೆಗೆ ಹೋಗುತ್ತಿದ್ದ, ಕೇರಳದ ವಿದ್ಯಾರ್ಥಿಗಳಿದ್ದ ಬಸ್​ ಪಲ್ಟಿಯಾಗಿ 51 ವಿದ್ಯಾರ್ಥಿಗಳು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭಿರವಾಗಿರುವ ಘಟನೆ ಚಂಡೀಗಢ-ಮನಾಲಿ ರಾಷ್ಟ್ರೀಯ ಹೆದ್ದಾರಿಯ ಗಂಬರೋಲಾ ಸೇತುವೆ ಬಳಿ ನಡೆದಿದೆ.

By

Published : Dec 31, 2019, 5:36 PM IST

Published : Dec 31, 2019, 5:36 PM IST

At least 51 injured as bus overturns in Bilaspur
ಬಸ್​ ಪಲ್ಟಿಯಾಗಿ 51 ವಿದ್ಯಾರ್ಥಿಗಳಿಗೆ ಗಾಯ

ಹಿಮಾಚಲ ಪ್ರದೇಶ: ಕೇರಳದ ವಿದ್ಯಾರ್ಥಿಗಳಿದ್ದ ಪ್ರವಾಸಿ ಬಸ್​ ಪಲ್ಟಿಯಾಗಿ 51 ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಚಂಡೀಗಢ-ಮನಾಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.

ಬಸ್​ ಪಲ್ಟಿಯಾಗಿ 51 ವಿದ್ಯಾರ್ಥಿಗಳಿಗೆ ಗಾಯ

ಗಾಯಾಳುಗಳನ್ನು ಬಿಲಾಸ್ಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಚಂಡೀಗಢದ ಪಿಜಿಐ ಆಸ್ಪತ್ರೆಗೆ ರವಾನಿಸಲಾಗಿದೆ.

ಗಾಯಗೊಂಡ ವಿದ್ಯಾರ್ಥಿಗಳು ಕೇರಳದ ಕ್ಯಾಲಿಕಟ್ ಜಿಲ್ಲೆಯ ಎಂಇಎಸ್ ಕಲಾ ಮತ್ತು ವಿಜ್ಞಾನ ಕಾಲೇಜಿನವರಾಗಿದ್ದು, ಬಾಡಿಗೆಗೆ ಬಸ್ ಪಡೆದು ದೆಹಲಿಯಿಂದ ಮನಾಲಿ ಕಡೆಗೆ ಪ್ರವಾಸಕ್ಕೆ ಹೋಗುತ್ತಿದ್ದರು. ದಾರಿ ಮಧ್ಯೆ ಟೈರ್ ಪಂಚರ್​ ಆದ ಕಾರಣ ಚಂಡೀಗಢ-ಮನಾಲಿ ರಾಷ್ಟ್ರೀಯ ಹೆದ್ದಾರಿಯ ಗಂಬರೋಲಾ ಸೇತುವೆ ಬಳಿ ಬಸ್ ಪಲ್ಟಿಯಾಗಿದೆ. ಬಸ್‌ನಲ್ಲಿ 52 ವಿದ್ಯಾರ್ಥಿಗಳು, ಮೂವರು ಶಿಕ್ಷಕರು ಮತ್ತು ಇಬ್ಬರು ಗೈಡ್‌ಗಳು ಇದ್ದರು ಎಂಬ ಮಾಹಿತಿ ದೊರೆತಿದೆ.

ಇನ್ನು ಘಟನಾ ಸ್ಥಳಕ್ಕೆ ಬಿಲಾಸ್ಪುರ ಎಎಸ್​​ಪಿ ಭಾಗಮಲ್ ಹಾಗೂ ಜಿಲ್ಲಾಸ್ಪತ್ರೆಗೆ ಡಿಎಸ್​ಪಿ ಭೇಟಿ ನೀಡಿದ್ದಾರೆ.

ABOUT THE AUTHOR

...view details