ನವದೆಹಲಿ: ಭಾರತ್ ಸಂಚಾರ್ ನಿಗಮ (BSNL)ದ ಕುರಿತಾದ ಕ್ಯಾಬಿನೆಟ್ ನಿರ್ಧಾರಗಳ ಆರಂಭಿಕ ಅನುಷ್ಠಾನಕ್ಕಾಗಿ ಫೆಬ್ರವರಿ 24 ರಂದು ಉಪವಾಸ ಸತ್ಯಾಗ್ರಹ ನಡೆಸಲು ಬಿಎಸ್ಎನ್ಎಲ್ (ಎಯುಎಬಿ) ಯ ಎಲ್ಲಾ ಸಂಘಗಳು ನಿರ್ಧರಿಸಿದೆ.
BSNL ನೌಕರರ ಸಮಸ್ಯೆಗಳು ಹಾಗೂ ಕುಂದುಕೊರತೆಗಳನ್ನು ಶೀಘ್ರ ಬಗೆಹರಿಸಲು ಒತ್ತಡ ಹೇರುವ ಉದ್ದೇಶದಿಂದ ಈ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಬಿಎಸ್ಎನ್ಎಲ್ ನೌಕರ ವರ್ಗ ತಿಳಿಸಿದೆ. ದೀರ್ಘಕಾಲೀನ ಬಾಂಡ್ಗಳ ಮೂಲಕ ಹಣ, ಸ್ವತ್ತುಗಳಿಂದ ಹಣಗಳಿಕೆ ಮತ್ತು ಸ್ವಯಂಪ್ರೇರಿತ ನಿವೃತ್ತಿ ಯೋಜನೆಯ ಅನುಷ್ಠಾನಗಳ ಪೈಕಿ ವಿಆರ್ಎಸ್ ಮಾತ್ರ ಜಾರಿಗೆ ಬಂದಿದ್ದು, ಒಟ್ಟು 78,569 ಬಿಎಸ್ಎನ್ಎಲ್ ನೌಕರರನ್ನು ಕೆಲಸದಿಂದ ತೆಗೆದು ಹಾಕಿ ಮನೆಗೆ ಕಳುಹಿಸಲಾಗಿದೆ.