ಕರ್ನಾಟಕ

karnataka

ETV Bharat / bharat

ಮಧ್ಯಪ್ರದೇಶದಲ್ಲಿ ರಾಜಕೀಯ ಹೈಡ್ರಾಮಾ... 17 ಎಂಎಲ್​ಎಗಳು ನಾಪತ್ತೆ, ಬೆಂಗಳೂರಿನಲ್ಲಿ 10 ಶಾಸಕರು! - ಕಾಂಗ್ರೆಸ್​ನ 25 ಶಾಸಕರು

ಮಧ್ಯಪ್ರದೇಶ ರಾಜಕೀಯದಲ್ಲಿ ಇದೀಗ ಮಹತ್ವದ ತಿರುವು ಸಿಕ್ಕಿದ್ದು, ಕಾಂಗ್ರೆಸ್​ 17 ಶಾಸಕರು ಬೆಂಗಳೂರಿನಲ್ಲಿ ಪ್ರತ್ಯಕ್ಷಗೊಂಡಿದ್ದಾರೆ.

Chief Minister Kamal Nath
Chief Minister Kamal Nath

By

Published : Mar 9, 2020, 5:35 PM IST

Updated : Mar 9, 2020, 7:09 PM IST

ಬೆಂಗಳೂರು: ಮಧ್ಯಪ್ರದೇಶ ರಾಜಕೀಯ ಹೈಡ್ರಾಮಾ ಮುಂದುವರಿದಿದ್ದು, ಕಾಂಗ್ರೆಸ್​ನ 17 ಶಾಸಕರು ನಾಪತ್ತೆಯಾಗಿದ್ದು, 10 ಶಾಸಕರು ಬೆಂಗಳೂರಿನಲ್ಲಿ ಪ್ರತ್ಯಕ್ಷಗೊಂಡಿದ್ದಾರೆ. ಇದರಿಂದ ಕಮಲ್​ನಾಥ್​ ನೇತೃತ್ವದ ಕಾಂಗ್ರೆಸ್​​ನಲ್ಲಿ ಆತಂಕ ಶುರುವಾಗಿದೆ.

ಬೆಂಗಳೂರಿಗೆ ಆಗಮಿಸಿರುವ ಕಾಂಗ್ರೆಸ್​ ಶಾಸಕರು

ಜ್ಯೋತಿರಾದಿತ್ಯ ಸಿಂಧಿಯಾ ಅವರ ಬೆಂಬಲಿತ ಶಾಸಕರಾಗಿರುವ ಇವರ ಬೆಂಗಳೂರಿನ ರೆಸಾರ್ಟ್​​ನಲ್ಲಿ ವಾಸ್ತವ್ಯ ಹೂಡಿದ್ದು, ಅವರ ಮೊಬೈಲ್​ ಸ್ವಿಚ್​ ಆಫ್​ ಆಗಿವೆ ಎಂದು ತಿಳಿದು ಬಂದಿದೆ. 17 ಶಾಸಕರ ಪೈಕಿ ಆರು ಮಂದಿ ಸಚಿವರು ಸೇರಿಕೊಂಡಿದ್ದು, ಬೆಂಗಳೂರಿನ ವೈಟ್​ಫೀಲ್ಡ್​​​​ ರೆಸಾರ್ಟ್​​ನಲ್ಲಿ ಉಳಿದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಮುಖ್ಯಮಂತ್ರಿ ಕಮಲ್​ನಾಥ್ ಪ್ರತಿಕ್ರಿಯೆ

ಮಧ್ಯಪ್ರದೇಶದಲ್ಲಿ ಆಪರೇಷನ್​ ಕಮಲಕ್ಕೆ ಯತ್ನಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು, ಕಳೆದ ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ನಾಲ್ವರು ಶಾಸಕರು ಕಾಣೆಯಾಗಿದ್ದರು. ಅದರಲ್ಲಿ ಓರ್ವ ಶಾಸಕ ಸುರೇಂದ್ರ ಸಿಂಗ್​​ ಶೆರಾ ಶನಿವಾರ ಮಧ್ಯಾಹ್ನ ಪ್ರತ್ಯಕ್ಷರಾಗಿದ್ದರು. ಇತರೆ ಮೂವರು ಶಾಸಕರಾದ ಹರ್ದೀಪ್ ಸಿಂಗ್ ದಂಗ್, ರಘುರಾಜ್ ಕನ್ಸಾನಾ ಮತ್ತು ಬಿಸಾವುಲಾಲ್ ಸಿಂಗ್​ ಅವರು ರಾಜ್ಯದಿಂದ ಕಾಣೆಯಾಗಿದ್ದಾರೆ. ಶಾಸಕರನ್ನು ಬಿಜೆಪಿ ನಾಯಕರು ಅಪಹರಿಸಿ ಕರ್ನಾಟಕದಲ್ಲಿ ಇರಿಸಿದ್ದಾರೆ ಎಂದು ಆಡಳಿತಾರೂಢ ಕಾಂಗ್ರೆಸ್​ ಆರೋಪಿಸಿತ್ತು.

ಬೆಂಗಳೂರಿಗೆ ಆಗಮಿಸಿರುವ ಕಾಂಗ್ರೆಸ್​ ಶಾಸಕರು

  • ರಾಜವರ್ಧನ್ ಸಿಂಗ್
  • ಪ್ರದುಮಾನ್ ಸಿಂಗ್ ತೋಮರ್
  • ಬಂಕಿಮ್ ಸಿಲಾವತ್
  • ಗಿರಿರಾಜ್
  • ರಕ್ಷಾ
  • ಜಸ್ವಂತ್ ಜಾಥಾವ್
  • ಸುರೇಶ್ ದಾಕಾಡ್
  • ಜಾಜ್ಪಾಲ್ ಸಿಂಗ್
  • ಬ್ರಿಜೇಂದ್ರ ಯಾದವ್
  • ಪುರುಷೋತ್ತಮ ಪ್ರಶರ್

ಇದರ ಬೆನ್ನಲ್ಲೇ ಇದೀಗ ಕಾಂಗ್ರೆಸ್​ನ 25 ಶಾಸಕರು ಕಾಣೆಯಾಗಿರುವುದು ಆಡಳಿತ ರೂಢ ಕಾಂಗ್ರೆಸ್​ ಪಕ್ಷದಲ್ಲಿ ಮತ್ತಷ್ಟು ಆತಂಕಕ್ಕೊಳಗಾಗುವಂತೆ ಮಾಡಿದ್ದು, ಮುಖ್ಯಮಂತ್ರಿ ಕಮಲ್​ನಾಥ್​​ ನೇತೃತ್ವದ ಸರ್ಕಾರ ಇದೀಗ ಸಂಕಷ್ಟಕ್ಕೊಳಗಾಗಿದೆ. ಇದೀಗ ಮುಖ್ಯಮಂತ್ರಿ ಕಮಲ್​ನಾಥ್​ ಕಾಂಗ್ರೆಸ್​ನ ಹಿರಿಯ ಮುಖಂಡರ ಭೇಟಿ ಮಾಡಲು ಮುಂದಾಗಿದ್ದು, ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ.

ಇಂದು ಸಂಜೆ ನಗರದ ಎಚ್​ಎಎಲ್ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರಾದ ರಾಜವರ್ಧನ್ ಸಿಂಗ್, ಪ್ರದುಮಾನ್ ಸಿಂಗ್ ತೋಮರ್, ಬಂಕಿಮ್ ಸಿಲಾವತ್, ಗಿರಿರಾಜ್, ರಕ್ಷಾ, ಜಸ್ವಂತ್ ಜಾಥಾವ್, ಸುರೇಶ್ ದಾಕಾಡ್, ಜಾಜ್ಪಾಲ್ ಸಿಂಗ್, ಬ್ರಿಜೇಂದ್ರ ಯಾದವ್, ಪುರುಷೋತ್ತಮ ಪ್ರಶರ್ ಆಗಮಿಸಿರುವ ಮಾಹಿತಿ ದೊರಕಿದೆ. ನಾಳೆಯೊಳಗೆ ಮತ್ತಷ್ಟು ಶಾಸಕರು ಬೆಂಗಳೂರಿಗೆ ಆಗಮಿಸುತ್ತಾರೆ ಎಂದು ಮೂಲಗಳು ತಿಳಿಸಿವೆ

Last Updated : Mar 9, 2020, 7:09 PM IST

ABOUT THE AUTHOR

...view details